ಮಕ್ಕಳಿಬ್ಬರು ಸೂಕ್ತ ಚಿಕಿತ್ಸೆ ಸಿಗದೇ ಸಾವನಪ್ಪಿದ್ದಾರೆ. ಕಾರವಾರದ ಶ್ರೇಯಸ್ ಬೇವಿನಕಟ್ಟೆ ಹಾಗೂ ಅಂಕೋಲಾದ ಪ್ರಗತಿ ಖಾರ್ವಿ ಸಾವನಪ್ಪಿದ ಚಿಣ್ಣರು.
Advertisement. Scroll to continue reading.
ಬೆಳಂಬಾರದ ಪ್ರಗತಿ ಖಾರ್ವಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದರು. ಕೆಲ ವರ್ಷಗಳಿಂದ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ವಿವಿಧ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ, ಉನ್ನತ ಮಟ್ಟದ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಾಳಿ ಬದುಕಬೇಕಿದ್ದ ಬಾಲಕಿ ಪ್ರಾಣ ಬಿಟ್ಟಿದ್ದು, ಅವರನ್ನು ಉಳಿಸಿಕೊಳ್ಳಲು ಆಗದ ನೋವು ಪಾಲಕರನ್ನು ಕಾಡುತ್ತಿತ್ತು.
Advertisement. Scroll to continue reading.
ADVERTISEMENT
ADVERTISEMENT
ಕಾರವಾರ ಬಜಾರ್ ಕರ್ನಾಟಕ ಪಬ್ಲಿಕ್ ಶಾಲೆಯ ಯುಕೆಜಿ ವಿದ್ಯಾರ್ಥಿ ಶ್ರೇಯಸ್ ಬೇವಿನಕಟ್ಟಿ ಸಹ ತಮ್ಮ 5ನೇ ವಯಸ್ಸಿನಲ್ಲಿ ಪ್ರಾಣ ಬಿಟ್ಟಿದ್ದಾರೆ. ಹುಬ್ಬಳ್ಳಿ ಮೂಲಕ ಶ್ರೇಯಸ್ ಪಾಲಕರು ದುಡಿಮೆಗಾಗಿ ಕಾರವಾರಕ್ಕೆ ಬಂದಿದ್ದರು. ಬಿಣಗಾದ ಗ್ರಾಸಿಂ ಇಂಡಸ್ಟಿçÃಸ್ನಲ್ಲಿ ಶ್ರೇಯಸ್ ಅವರ ತಂದೆ ಕಾರ್ಮಿಕರಾಗಿದ್ದರು. ಎಲ್ಕೆಜಿ ಮುಗಿದ ಬೇಸಿಗೆ ರಜೆಯಲ್ಲಿ ಹುಬ್ಬಳ್ಳಿಗೆ ಹೋಗಿದ್ದ ಶ್ರೇಯಸ್ ಯುಕೆಜಿ ಪ್ರವೇಶಕ್ಕೆ ಸಿದ್ಧವಾಗಿದ್ದರು.
Advertisement. Scroll to continue reading.
ADVERTISEMENT
ಏಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯಲ್ಲಿರುವಾಗ ಶ್ರೇಯಸ್ ಅವರಿಗೆ ಅನಾರೋಗ್ಯ ಕಾಡಿತು. ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಅವರಿಗೆ ಸಹ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದು, ಅದು ಸಿಗದ ಕಾರಣ ಶ್ರೇಯಸ್ ಕೊನೆ ಉಸಿರೆಳೆದರು.