ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಕಿರವತ್ತಿಯ ಅರಣ್ಯ ಕಚೇರಿಗೆ ತೆರಳಿ ಅಧಿಕಾರಿಗಳಿಗೆ ಪಾಠ ಮಾಡಿದ್ದಾರೆ. `ಕಾನೂನು ಪುಸ್ತಕ ಹಿಡಿದು ಇಲ್ಲಿ ಕಾಡು ರಕ್ಷಿಸಲು ಆಗುವುದಿಲ್ಲ. ಜನರ ಪ್ರೀತಿ ವಿಶ್ವಾಸಗಳಿಸಿ ಕಾಡು ಉಳಿಸಿ’ ಎಂದು ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದ್ದಾರೆ.
Advertisement. Scroll to continue reading.
ಅರಣ್ಯಾಧಿಕಾರಿ ಕಚೇರಿ ಆವರಣದಲ್ಲಿ ಗಿಡ ನೆಟ್ಟ ಅವರು ನೇರವಾಗಿ ಕಚೇರಿ ಒಳಗೆ ಪ್ರವೇಶಿಸಿದರು. ಹೊಸದಾಗಿ ಈ ಅರಣ್ಯ ವಿಭಾಗಕ್ಕೆ ಬಂದ ಸಿಬ್ಬಂದಿಯನ್ನು ಮಾತನಾಡಿಸಿದ ಅವರು `ಎಲ್ಲಿಂದ ಬಂದ್ದಿದ್ದೀರಿ?’ ಎಂದು ವಿಚಾರಿಸಿದರು. ನಾನಾ ಭಾಗದಿಂದ ಇಲ್ಲಿಗೆ ವರ್ಗವಾಗಿ ಬಂದವರನ್ನು ಉದ್ದೇಶಿಸಿ `ಕಾನೂನು ಪುಸ್ತಕ ಇಲ್ಲಿ ಕೆಲಸಕ್ಕೆ ಬರುವುದಿಲ್ಲ. ಕಾಡು ರಕ್ಷಣೆಗಾಗಿ ಜನರ ವಿಶ್ವಾಸಗಳಿಸಿ ಕೆಲಸ ಮಾಡಬೇಕು’ ಎಂದು ಸೂಚಿಸಿದರು.
Advertisement. Scroll to continue reading.
Advertisement. Scroll to continue reading.
ಮನೆಯಿಂದ ಹೊರಗೆ ಬಿದ್ದರೆ ಕಾಡು ಸಿಗುತ್ತದೆ. ಅರಣ್ಯವನ್ನು ಉಳಿಸಿ ಜನರನ್ನು ಸಂಬಾಳಿಸಿ’ ಎಂದು ಶಿವರಾಮ ಹೆಬ್ಬಾರ್ ಕಿವಿಮಾತು ಹೇಳಿದರು. `ಈ ವರ್ಷ ಎಷ್ಟು ಗಿಡ ನೆಡಲು ಸಿದ್ಧತೆ ಮಾಡಿಕೊಂಡಿದ್ದೀರಿ? ಕಾಡು ರಕ್ಷಣೆಗೆ ಹೊಸದಾಗಿ ಯಾವ ಯೋಜನೆ ತಂದ್ದೀರಿ?’ ಎಂದು ವಲಯ ಅರಣ್ಯಾಧಿಕಾರಿ ಅಜಯ್ ನಾಯ್ಕ ಹಾಗೂ ಎಸಿಎಫ್ ಭಾಗ್ಯಶ್ರೀ ಬೀರಾರ್ ಅವರನ್ನು ಪ್ರಶ್ನಿಸಿದರು.
2 ಲಕ್ಷ ಗಿಡ ನೆಡಲು ಸಿದ್ಧತೆ ನಡೆದಿದೆ. ಈ ಬಾರಿ ಅರಣ್ಯದಲ್ಲು ಗಿಡ ನೆಡುವ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರ ಸಹಯೋಗಪಡೆಯಲಾಗುತ್ತದೆ. ಈ ಬಗ್ಗೆ ಇಲಾಖೆಯಿಂದಲೂ ಸೂಚನೆ ಬಂದಿದೆ’ ಎಂದು ಅರಣ್ಯಾಧಿಕಾರಿ ಅಜಯ ನಾಯ್ಕ ಮಾಹಿತಿ ನೀಡಿದರು.