ಕುಮಟಾ ಹೊಸ್ಕಟ್ಟಾ-ಸಿದ್ದೇಶ್ವರ ಮದ್ಯದ ಖಾರ್ಖಾಂಡ್ ಜಂತ್ರಡಿ ಭಾಗದಲ್ಲಿ ಪೊಲೀಸರು ಸಿಸಿ ಟಿವಿ ಅಳವಡಿಸಿದ್ದಾರೆ.
Advertisement. Scroll to continue reading.
Advertisement. Scroll to continue reading.
ಕೆಲ ತಿಂಗಳಿನಿoದ ಈ ಪ್ರದೇಶದಲ್ಲಿ ವಾಗ್ವಾದ-ಹೊಡೆದಾಟ ನಡೆಯುತ್ತಿದೆ. ಮೀನು ಹಿಡಿಯುವ ವಿಷಯ, ಭೂ ವ್ಯಾಜ್ಯ ಸೇರಿ ವಿವಿಧ ಕಾರಣಗಳಿಂದ ಗಲಾಟೆ ಉಂಟಾಗುತ್ತಿದೆ. ಇಚೆಗೆ ಎರಡು ಗುಂಪುಗಳ ನಡುವೆ ಇಲ್ಲಿ ಮಾರಾಮಾರಿ ನಡೆದಿದ್ದು, ತಪ್ಪಿಸಲು ಹೋದ ಪೊಲೀಸರು ಒದೆ ತಿಂದಿದ್ದರು. ಈ ವಿಷಯವಾಗಿ ಪ್ರಕರಣ ದಾಖಲಾಗಿ ಆರೋಪಿಗಳು ಜೈಲು ಸೇರಿದ್ದಾರೆ.
Advertisement. Scroll to continue reading.
ಸುರಕ್ಷತೆ ಹಾಗೂ ಮುನ್ನಚ್ಚರಿಕೆ ದೃಷ್ಟಿಯಿಂದ ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಮಂಗಳವಾರ ಅಲ್ಲಿ ಕ್ಯಾಮರಾ ಅಳವಡಿಸಿದರು. ಪೊಲೀಸ್ ಠಾಣೆಯಿಂದಲೇ ಕ್ಯಾಮರಾ ವೀಕ್ಷಿಸುವ ಅವಕಾಶವಿದ್ದು, ಅಹಿತಕರ ಘಟನೆ ತಡೆಯಲು ಸಹಕಾರಿಯಾಗುವ ನಿರೀಕ್ಷೆಯಿದೆ.