ಶಿವಾಜಿ ಕಾಲದಿಂದಲೂ ನೆಲೆನಿಂತಿರುವ ಭುವನೇಶ್ವರಿ ದೇವಿಗೆ ಯಲ್ಲಾಪುರದಲ್ಲಿ ಇದೀಗ ದೇವಾಲಯ ಕಟ್ಟಲು ಸಂಕಲ್ಪ ಮಾಡಲಾಗಿದೆ. ಅಂಬೇಡ್ಕರ ನಗರದ ಜನರೆಲ್ಲ ಸೇರಿ ತಾಯಿ ದೇಗುಲ ನಿರ್ಮಾಣಕ್ಕೆ ಶ್ರಮಿಸುತ್ತಿದ್ದಾರೆ.
Advertisement. Scroll to continue reading.
1650ರ ಆಸುಪಾಸಿನಲ್ಲಿ ಅಂಬೇಡ್ಕರ್ ನಗರದಲ್ಲಿ ಭುವನೇಶ್ವರಿ ದೇವಿಯ ಆರಾಧನೆ ನಡೆಯುತ್ತಿತ್ತು. ಶಿವಾಜಿ ಮಹಾರಾಜರ ಸೈನ್ಯದಲ್ಲಿದ್ದ ಪರಿಶಿಷ್ಟ ಸಮುದಾಯದವರು ಈ ದೇವಿಯನ್ನು ಭಕ್ತಿಯಿಂದ ಪೂಜಿಸುತ್ತಿದ್ದರು. ಋಷಿಮುನಿಗಳಿಂದ ಬಳುವಳಿಯಾಗಿ ಬಂದ ದೇವಿ ಇದಾಗಿದ್ದು, ಇಷ್ಟಾರ್ಥ ಸಿದ್ಧಿಗೆ ಪ್ರಸಿದ್ಧಿಪಡೆದಿತ್ತು.
Advertisement. Scroll to continue reading.
ಇಲ್ಲಿ ನೆಲೆನಿಂತ ದೇವಿಗೆ ಕ್ರಮೇಣ ಪೂಜೆ – ಪುನಸ್ಕಾರಗಳು ಕಡಿಮೆಯಾದವು. ಅದರ ಪರಿಣಾಮ ಸಾವು-ನೋವುಗಳು ಸಂಭವಿಸಿದವು. ಕಷ್ಟಕಾಲದ ಬಗ್ಗೆ ಜ್ಯೋತಿಷ್ಯರಲ್ಲಿ ಪ್ರಶ್ನೆ ಕೇಳಿದಾಗ ದೇವಿ ಮಹಾತ್ಮೆ ಗೊತ್ತಾಯಿತು. ಹೀಗಾಗಿ ಊರಿನವರೆಲ್ಲರೂ ಸೇರಿ ದೇವಿಗೆ ದೇಗುಲ ನಿರ್ಮಿಸಲು ಉದ್ದೇಶಿಸಿದರು. ದೇವಿ ಇಚ್ಚೆ ಎಂಬAತೆ ಪುರಾತನ ಕಾಲದಲ್ಲಿ ಪೂಜಿಸುತ್ತಿದ್ದ ಕಲ್ಲು ಸಹ ಸಿಕ್ಕಿತು.
Advertisement. Scroll to continue reading.
ಅಂಬೇಡ್ಕರ್ ನಗರದಲ್ಲಿ ಭುವನೇಶ್ವರಿ ದೇವಿ ಕಟ್ಟಡ ನಿರ್ಮಾಣದ ಬಗ್ಗೆ ಅಲ್ಲಿನವರು ಗ್ರಾಮದೇವಿಯಲ್ಲಿ ದೇವರಲ್ಲಿ ಪ್ರಾರ್ಥಿಸಿದರು. 25 ಲಕ್ಷ ರೂ ವೆಚ್ಚದಲ್ಲಿ ಶಿಲಾಮಯ ದೇಗುಲ ನಿರ್ಮಿಸುವ ಬಗ್ಗೆ ಚರ್ಚಿಸಿದರು. ಈ ಬಗ್ಗೆ ಸಮಿತಿ ರಚಿಸಿಕೊಂಡು ದೇಗುಲ ನಿರ್ಮಾಣದ ಬಗ್ಗೆ ಸಾರ್ವಜನಿಕವಾಗಿ ಪ್ರಕಟಿಸಿದರು.
ದೇವರ ಪುನರ್ ಪ್ರತಿಷ್ಠೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶಲಾಗಿದೆ. ಈ ದೇಗುಲಕ್ಕೆ ಸರ್ವರಿಗೂ ತನು-ಧನ-ಮನ ಸಹಾಯ ನೀಡಲು ಅವಕಾಶವಿದ್ದು, ಭುವನೇಶ್ವರಿ ದೇವಿ ಸೇವೆ ಮಾಡಲಿಚ್ಚಿಸುವವರು ಇಲ್ಲಿ ಫೋನ್ ಮಾಡಿ: 9590973214