SSLC ನಂತರ ಮುಂದೇನು? ಎಂಬುದು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಕಾಡುವ ಪ್ರಶ್ನೆ. ಪರೀಕ್ಷೆ ಫಲಿತಾಂಶದ ತರುವಾಯ ವಿದ್ಯಾಕಾಶಿ ಧಾರವಾಡಕ್ಕೆ ಶಿಕ್ಷಣ ಅರೆಸಿ ಹೋಗುವವರಿಗೆ ಎದುರಾಗುವುದು ನೂರಾರು ಕಾಲೇಜು. ಅದರಲ್ಲಿಯೂ, ಉತ್ತಮ ಆಡಳಿತ ಮಂಡಳಿ, ನುರಿತ ಸಿಬ್ಬಂದಿ, ಅತ್ಯುನ್ನತ ಉಪನ್ಯಾಸಕ ವರ್ಗ, ವಿಶಾಲವಾದ ಕಾಲೇಜು ಕ್ಯಾಂಪಸ್ಸಿನ ಸ್ನೇಹಮಯ ವಾತಾವರಣದಲ್ಲಿ ಕಲಿಕೆ ಬಯಸುವವರಿಗೆ ಅರ್ಜುನ PU ಕಾಲೇಜಿಗಿಂತಲೂ ಉತ್ತಮ ಆಯ್ಕೆ ಇಲ್ಲ!
Advertisement. Scroll to continue reading.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆ ಬೆಳಸಬೇಕು ಎಂಬುದು ಅರ್ಜುನ ಕಾಲೇಜಿನ ಮುಖ್ಯ ಉದ್ದೇಶ. ಹೀಗಾಗಿ SSLC ಪಾಸಾದ ವಿದ್ಯಾರ್ಥಿಗಳನ್ನು PUC ವಿಜ್ಞಾನ ವಿಭಾಗಕ್ಕಾಗಿ ಅರ್ಜುನ ಕಾಲೇಜು ಕರೆಯುತ್ತದೆ. ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ದಾಖಲೆಗಳ ಆಧಾರದಲ್ಲಿ ಜ್ಞಾನಾರ್ಜನೆ ಮಾಡಿಸುತ್ತದೆ. ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳ ನಡುವೆ ಸಂವಾದ, ಚರ್ಚೆ, ಕ್ಷೇತ್ರ ಭೇಟಿ ಅಧ್ಯಯನಗಳಿಂದಲೂ ಅರ್ಜುನ ಕಾಲೇಜು ಪ್ರಸಿದ್ಧಿ ಪಡೆದಿದೆ. ದೇಶಕ್ಕೆ ಅತ್ಯುತ್ತಮ ವಿಜ್ಞಾನಿಗಳನ್ನು ಕೊಡುಗೆಯಾಗಿ ನೀಡುವ ಕಾಯಕದಲ್ಲಿ ಅರ್ಜುನ ಪಿಯು ಕಾಲೇಜು ಮುಂಚೂಣಿಯಲ್ಲಿದೆ. 2019ರಲ್ಲಿ 25 ವಿದ್ಯಾರ್ಥಿಗಳಿಂದ ಶುರುವಾದ ಈ ಕಾಲೇಜು ಐದು ವರ್ಷದಲ್ಲಿ ಶೈಕ್ಷಣಿಕ ವಿಷಯವಾಗಿ ಹೆಮ್ಮರವಾಗಿ ಬೆಳೆದಿದೆ. ಸುಸಜ್ಜಿತವಾದ ಕಟ್ಟಡ, ಆಟದ ಮೈದಾನ, ಅತ್ಯಾಧುನಿಕ ಪ್ರಯೋಗಾಲಯ, ಅಚ್ಚುಕಟ್ಟಾದ ವಿದ್ಯಾರ್ಥಿ ನಿಲಯ, ಕಲಿಕೆ ಜೊತೆ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆಯೂ ಕಾಳಜಿವಹಿಸುವುದು ಇಲ್ಲಿನ ವಿಶೇಷ.
Advertisement. Scroll to continue reading.
ನುರಿತ ಉಪನ್ಯಾಸಕರಿಂದ ಪಾಠ
ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
ಸರಸ್ವತಿಪುರದಲ್ಲಿರುವ ಅರ್ಜುನ ಕಾಲೇಜು ವಿದ್ಯೆಗೆ ಮಾತ್ರ ಸೀಮಿತವಲ್ಲ. ವಿದ್ಯೆ ಕಲಿತವರಿಗೆ ಯೋಗ್ಯ ಉದ್ಯೋಗ ದೊರಕಿಸುವುದಕ್ಕೆ ಸಹ ಪ್ರಯತ್ನಿಸುತ್ತದೆ. ಈ ಹಿನ್ನಲೆ ಪ್ರತಿ ವಿದ್ಯಾರ್ಥಿಗಳಿಗೂ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ತರಬೇತಿ ನೀಡಲಾಗುತ್ತದೆ. ಈ ಕಾಲೇಜಿನಲ್ಲಿರುವ ಎಲ್ಲಾ ಉಪನ್ಯಾಸಕರು IIT/NIT/ M.Sc ಪದವಿಧೀರರು. ಸ್ಪರ್ಧಾತ್ಮಕ ಪರೀಕ್ಷೆಗಳಾದ JEE Mains/JEE, Advanced/NEET/KVPY/ KCET ತರಬೇತಿ ನೀಡುವಲ್ಲಿಯೂ ಅವರೆಲ್ಲರೂ ಪರಿಣಿತರು!
ADVERTISEMENT
ADVERTISEMENT
ವಿದ್ಯಾರ್ಜನೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು
ಮಕ್ಕಳ ಸಾಧನೆ ನಿರಂತರ!
ಪ್ರತಿಷ್ಠಿತ NDA ಪರೀಕ್ಷೆಯಲ್ಲಿ ಅರ್ಜುನ ಕಾಲೇಜಿನ ವಿದ್ಯಾರ್ಥಿಗಳು ನಿರಂತರ ಸಾಧನೆ ಮಾಡುತ್ತಿದ್ದಾರೆ. ಕಳೆದ ವರ್ಷ 9 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಈ ಬಾರಿ ಪರೀಕ್ಷೆ ಎದುರಿಸಿದ ಐವರು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ನೀಟ್ ಪರೀಕ್ಷೆಯಲ್ಲಿ 625 ಅಂಕ ಪಡೆದಿರುವ ಗೌಥಮ ಪಟೇಲ್, 601 ಅಂಕಪಡೆದು ಸಾಧನೆ ಮಾಡಿರುವ ಪ್ರಜ್ಞಾ ಈಶ್ವರಪ್ಪಗೋಳ್ ಸೇರಿ ಅನೇಕರು ಅರ್ಜುನ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.
Advertisement. Scroll to continue reading.
ಹೈದರಾಬಾದಿನ ITIನಲ್ಲಿ ಓದುತ್ತಿರುವ ಸಿದ್ದಾಪುರದ ರಜತ್ ಹೆಗಡೆ, `ತಮ್ಮ ಸಾಧನೆಗೆ ಅರ್ಜುನ ಕಾಲೇಜು ಕಾರಣ’ ಎಂದು ನೆನೆಯುತ್ತಾರೆ. ಇಲ್ಲಿ ಕಲಿತ ಪ್ರಣವ ಕಾಮತ್ ವಾರಣಾಸಿಯಲ್ಲಿ ಐಟಿಐ ಪ್ರವೇಶ ಪಡೆದಿದ್ದಾರೆ. ಧಾರವಾಡ ಐಟಿಐ ಪ್ರವೇಶಿಸಿದ ಅಹ್ಮದ್ ನಬಿಲ್, ಕಲ್ಬುರ್ಗಿಯ ನೈಟಿ ಕಾಲಿಕಟ್ ಪ್ರವೇಶಿಸಿದ ಸಾತ್ವಿಕ್ ಬಲ್ಬುರ್ಗಿ, ಐಐಐಟಿ ಹೈದ್ರಾಬಾದಿನಲ್ಲಿರುವ ನಂದನ್ ಕಾಮತ್, ಧಾರವಾಡದ ಐಐಐಟಿಯಲ್ಲಿರುವ ತೇಜಸ್ವಿ ಮದ್ಗುಣಿ, ಹರ್ಷ ಕುಡ್ತರರ್ಕರ ಸಹ ಅರ್ಜುನ ಕಾಲೇಜಿನ ಹಿರಿಮೆಯ ಬಗ್ಗೆ ಮಾತನಾಡುತ್ತಾರೆ. ಅರ್ಜುನ ಕಾಲೇಜಿನ ಮೂವರು ವಿದ್ಯಾರ್ಥಿಗಳು ಈ ವರ್ಷ ಸರ್ಕಾರಿ ಮೆಡಿಕಲ್ ವಿಭಾಗದಲ್ಲಿ ಸ್ಥಾನ ಪಡೆದಿದ್ದಾರೆ. ಸಾಮಾನ್ಯ ವಿದ್ಯಾರ್ಥಿಯನ್ನು ಸಂಪನ್ಮೂಲ ವ್ಯಕ್ತಿಯನ್ನಾಗಿ ರೂಪಿಸುವಲ್ಲಿ ಧಾರವಾಡದ ಅರ್ಜುನ ಪಿಯು ವಿಜ್ಞಾನ ಕಾಲೇಜಿನ ಕೊಡುಗೆ ಅಪಾರ. ನಿಮ್ಮ ಮಗುವನ್ನು ಭವಿಷ್ಯದ ವಿಜ್ಞಾನಿಯನ್ನಾಗಿಸಲು ಅರ್ಜುನ ಕಾಲೇಜಿಗೆ ಬನ್ನಿ..
ಇಲ್ಲಿ ಭೇಟಿ ಕೊಡಿ: ಅರ್ಜುನ ಪದವಿಪೂರ್ವ ಕಾಲೇಜು ಶಾನಭಾಗ ಕಟ್ಟಡ, ಟೋಲ್ ನಾಕಾ ಸಮೀಪ ಪಿಬಿ ರಸ್ತೆ, ಸರಸ್ವತಿಪುರ, ಧಾರವಾಡ