ಮೇಷ ರಾಶಿ: ಕಲಾವಿದರಿಗೆ ಈ ದಿನ ಶುಭವಾಗಲಿದೆ. ಕಲಾ ಆರಾಧಕರಿಗೆ ಯೋಗ್ಯ ಅವಕಾಶ ಸಿಗಲಿದೆ. ಅನ್ನಪೂರ್ಣೇಶ್ವರಿಯ ಆರಾಧನೆಯಿಂದ ಎಲ್ಲಾ ಕೆಲಸ ತೊಡಕಿಲ್ಲದೇ ನಡೆಯುತ್ತದೆ.
ವೃಷಭ ರಾಶಿ: ಕೃಷಿಗೆ ಸಂಬoಧಿಸಿದ ವಸ್ತು ಖರೀದಿಗೆ ಯೋಗ್ಯ ದಿನ. ವಾಹನ ಓಡಿಸುವಾಗ ಜಾಗೃತೆಯಿರಲಿ. ಆತುರದ ನಿರ್ಧಾರ ಬೇಡ.
ಮಿಥುನ ರಾಶಿ: ಈ ದಿನದ ಎಲ್ಲಾ ಕಾರ್ಯಗಳು ಆತ್ಮ ವಿಶ್ವಾಸದಿಂದ ಕೂಡಿರುತ್ತದೆ. ಆತ್ಮ ವಿಶ್ವಾಸದಿಂದ ಮಾಡಿದ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಹಿರಿಯರ ಅನುಗ್ರಹಪಡೆಯುವುದರಿಂದ ಇಷ್ಟಾರ್ಥ ಸಿದ್ಧಿ ಸಾಧ್ಯ.
ಕರ್ಕ ರಾಶಿ: ಅತಿಯಾದ ಓಡಾಟದಿಂದ ದೇಹದಲ್ಲಿ ಅಶಕ್ತಿ ಉಂಟಾಗುವ ಲಕ್ಷಣಗಳಿವೆ. ಆರೋಗ್ಯದ ಬಗ್ಗೆ ಕಾಳಜಿಯಿರಲಿ. ದುರ್ಗಾದೇವಿ ಆರಾಧನೆ ಮಾಡಿ.
ಸಿಂಹ ರಾಶಿ: ಅನಗತ್ಯವಾಗಿ ಕೋಪ ಮಾಡಿಕೊಳ್ಳಬೇಡಿ. ಜನರ ಜೊತೆ ಸಂವಹನ ನಡೆಸುವಾಗ ಎಚ್ಚರವಾಗಿರಿ. ಕೋಪದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.
ಕನ್ಯಾ ರಾಶಿ: ಅವಕಾಶಗಳು ಕೈ ತಪ್ಪಿದರೆ ನಿರಾಸೆಯಾಗುವುದು ಬೇಡ. ಹೊಸ ದಾರಿ ಗೋಚರವಾಗುವ ಸಾಧ್ಯತೆಯಿದೆ. ಅನೇಕ ಅವಕಾಶಗಳು ಸಿಗಲಿದೆ.
ತುಲಾ ರಾಶಿ: ಹಿರಿಯರ ಆಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಉಂಟಾಗಲಿದೆ. ಇಡೀ ದಿನ ಚೈತನ್ಯದಿಂದ ಕೂಡಿರಲಿದೆ.
ವೃಶ್ಚಿಕ ರಾಶಿ: ಗುರಿ ಸಾಧನೆಗೆ ಕಾರ್ಯ ಶುರು ಮಾಡಿ. ದೊಡ್ಡ ದೊಡ್ಡ ಕೆಲಸಗಳ ಆರಂಬಕ್ಕೆ ಯೋಗ್ಯ ದಿನ. ಸೂರ್ಯನಾರಾಯಣನ ಅನುಗ್ರಹದಿಂದ ಆತ್ಮವಿಶ್ವಾಸ ಹೆಚ್ಚಲಿದೆ.
ಧನು ರಾಶಿ: ಹಿತಶತ್ರುಗಳಿಂದ ದೂರವಿರಿ. ಎಚ್ಚರಿಕೆಯೂ ಅಗತ್ಯ. ಹೊಸ ವಾಹನ ಖರೀದಿಗೆ ಶುಭ ದಿನ.
ಮಕರ ರಾಶಿ: ಪ್ರಯತ್ನ ಪಟ್ಟರೂ ಫಲ ಸಿಗದಕ್ಕಾಗಿ ಬೇಸರ ಬೇಡ. ಗುರಿಯ ಕಡೆ ನಿರಂತರ ಪ್ರಯತ್ನ ಮುಂದುವರೆಯಲಿ. ಏಕಾಗೃತೆಯ ಮನಸ್ಸಿನಿಂದ ಸಾಧನೆ ಮಾಡಿ.
ಕುಂಭ ರಾಶಿ: ಹೊಸದಾಗಿ ಉದ್ಯೋಗ ಶುರು ಮಾಡುವವರಿಗೆ ಯಶಸ್ಸು ಸಾಧ್ಯ. ಆಂಜನೇಯನ ಅನುಗ್ರಹವನ್ನು ಪಡೆಯುವುದರಿಂದ ಇಷ್ಟಾರ್ಥ ಪ್ರಾಪ್ತಿ. ಲವಲವಿಕೆಯಿಂದ ಕೆಲಸ ಮಾಡಿ.
ಮೀನ ರಾಶಿ: ಉತ್ತಮ ಕಾರ್ಯ ಮಾಡಿದವರಿಗೆ ಉನ್ನತಿ ಸಾಧ್ಯ. ಉದ್ಯೋಗದಲ್ಲಿಯೂ ಪದೋನ್ನತಿ-ಮೆಚ್ಚುಗೆ ಸಿಗುವ ಲಕ್ಷಣಗಳಿವೆ. ಕುಲದೇವರ ಅನುಗ್ರಹವನ್ನು ಪಡೆಯಿರಿ.
Discussion about this post