• Latest
The share of those who have accumulated money The people of Sadashivagad are furious against the society!

ಕೂಡಿಟ್ಟ ದುಡ್ಡು ಕಂಡವರ ಪಾಲು: ಸೊಸೈಟಿ ವಿರುದ್ಧ ಸಿಡಿದೆದ್ಧ ಸದಾಶಿವಗಡದ ಜನ!

1 month ago
Prediction for July 23 2025

2025 ಅಗಸ್ಟ್ 1ರ ದಿನ ಭವಿಷ್ಯ

6 hours ago
May the remover of obstacles be blessed!

ವಿಘ್ನ ನಿವಾರಕನಿಗೆ ಹರಕೆಯೇ ಬಾರ!

6 hours ago
ADVERTISEMENT

ದಾಂಡೇಲಿ: ಡೆಂಟಲ್ ಡಾಕ್ಟರ್ ಅಸಿಸ್ಟೆಂಟ್’ಗೆ ಧರ್ಮದೇಟು!

7 hours ago

ಬಸ್ಸು ಅಡ್ಡಗಡ್ಡಿ ನೌಕರರಿಗೆ ಥಳಿತ: ಮೂವರು ಬೈಕ್ ಸವಾರರ ವಿರುದ್ಧ ದೂರು

7 hours ago

ಕೊಂಕಣ ರೈಲ್ವೆಗೆ ಕದ್ರಾದಿಂದ ನೇರ ಕರೆಂಟು!

8 hours ago
Friday, August 1, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಕೂಡಿಟ್ಟ ದುಡ್ಡು ಕಂಡವರ ಪಾಲು: ಸೊಸೈಟಿ ವಿರುದ್ಧ ಸಿಡಿದೆದ್ಧ ಸದಾಶಿವಗಡದ ಜನ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
The share of those who have accumulated money The people of Sadashivagad are furious against the society!
Advertisement is not enabled. Advertisement is not enabled. Advertisement is not enabled.
ADVERTISEMENT

ಕಾರವಾರದ ಸದಾಶಿವಗಡದಲ್ಲಿರುವ ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿದ್ದು, ಠೇವಣಿದಾರರು ದಿಕ್ಕೆಟ್ಟಿದ್ದಾರೆ. ತಮ್ಮ ಠೇವಣಿ ತಮಗೆ ಮರಳಿಸಿ ಎಂದು ಅವರು ಪಟ್ಟು ಹಿಡಿದಿದ್ದಾರೆ.

`ದುರ್ಗಾಮಾತಾ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ 13 ಶಾಖೆ ಹೊಂದಿದ್ದು, ಜನ ನಂಬಿಕೆಯಿoದ ಹೂಡಿಕೆ ಮಾಡಿದ್ದರು. ಆದರೆ, ಜನವರಿ 2025ರಿಂದ ಯಾವುದೇ ಠೇವಣಿ ಹಣವನ್ನು ಹಿಂತಿರುಗಿಸುತ್ತಿಲ್ಲ’ ಎಂದು ಅಜಿತ್ ನಾಯ್ಕ ಆಕ್ರೋಶವ್ಯಕ್ತಪಡಿಸಿದರು. `ಸೊಸೈಟಿಯಲ್ಲಿ ಕಳೆದ ಎರಡು ವರ್ಷಗಳಿಂದ ಆಡಿಟ್ ನಡೆದಿಲ್ಲ. 56 ಕೋಟಿ ಠೇವಣಿ ಸಂಗ್ರಹವಾದರೂ 6 ಕೋಟಿಯ ಲೆಕ್ಕವಿಲ್ಲ. ಠೇವಣಿ ಹಣ ಹಿಂದಿರುಗಿಸಲು ಹಣವಿಲ್ಲ ಎನ್ನುತ್ತಿದ್ದಾರೆ’ ಎಂದು ಅಳಲು ತೋಡಿಕೊಂಡರು.

ADVERTISEMENT

`ಏಪ್ರಿಲ್ 30ರೊಳಗೆ ಹಣ ನೀಡುವುದಾಗಿ ಸಂಘ ಭರವಸೆ ನೀಡಿತ್ತು. ಆದರೆ, ಲಿಖಿತ ಭರವಸೆಯನ್ನು ಈಡೇರಿಸಿಲ್ಲ. ಜೂನ್ 25ರ ಬೆಳಗ್ಗೆ 9 ಗಂಟೆಯಿoದ ಸಂಜೆ 3 ಗಂಟೆಯವರೆಗೆ ಪ್ರಧಾನ ಕಚೇರಿಯಲ್ಲಿ ಠೇವಣಿದಾರರು ಕಾದಿದ್ದರೂ ಯಾವುದೇ ಹಣ ಸಿಕ್ಕಿಲ್ಲ’ ಎಂದು ವೆಂಕಟರಮಣ ಹರಿಕಾಂತ ದೂರಿದರು. `ಆ ಸಂದರ್ಭದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಲಿಂಗರಾಜು ಪುಟ್ಟು ಕಲ್ಲುಟಕರ ಅವರು ಕಚೇರಿಯಲ್ಲಿ ಇರಲಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗಲಿಲ್ಲ. ಆಗ ಉಪಾಧ್ಯಕ್ಷೆ ದೀಕ್ಷಾ ದತ್ತಾರಾಮ ಕಲ್ಲುಟಕರ ಮತ್ತು ವ್ಯವಸ್ಥಾಪಕ ನಿರ್ದೇಶಕರ ಅಕ್ಕ ಹಾಗೂ ಅಕೌಂಟೆoಟ್ ಆಗಿರುವ ಅರ್ಪಿತಾ ಅಂಬರೀಶ ಕಲ್ಲುಟಕರ ಅವರು ಮಧ್ಯಾಹ್ನ 12:30ರೊಳಗೆ ಮುಖ್ಯ ಕಚೇರಿಗೆ ಹಣ ಬರುವುದಾಗಿ ತಿಳಿಸಿದ್ದರು. ನಂತರ ಸಂಜೆ 4:30 ರೊಳಗೆ ಖಾತೆಗೆ ವರ್ಗಾಯಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಯಾವುದೇ ಹಣ ಖಾತೆಗೆ ಜಮಾ ಆಗಿಲ್ಲ’ ಎಂದು ವಿವರಿಸಿದರು.

ADVERTISEMENT

`ಸಂಘದ ಉಪಾಧ್ಯಕ್ಷೆ ದೀಕ್ಷಾ ದತ್ತಾರಾಮ ಕಲ್ಲುಟಕರ ಅವರೊಂದಿಗೆ ಚಿತ್ತಾಕುಲ ಪೊಲೀಸ್ ಠಾಣೆಗೆ ತೆರಳಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ದೂರು ದಾಖಲಿಸಲು ಪ್ರಯತ್ನಿಸಿದಾಗ, ಠಾಣಾಧಿಕಾರಿಗಳು ದೂರು ಸ್ವೀಕರಿಸಿಲ್ಲ’ ಎಂದು ಅಜಿತ್ ನಾಯ್ಕ ದೂರಿದರು. ತದನಂತರ, ಜೂನ್ 25, 2025ರಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಬೋರ್ಡ್ ಆಫ್ ಡೈರೆಕ್ಟರ್ಸ್ ಮತ್ತು ಶಾಖಾ ವ್ಯವಸ್ಥಾಪಕರು ಈ ವಂಚನೆಯಲ್ಲಿ ಶಾಮೀಲಾಗಿದ್ದಾರೆ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

ಮನೋಜ ನಾಯ್ಕ, ಅಕ್ಷತಾ ಬೆಳೂರಕರ್, ರೋಹಿದಾಸ ತಾಮ್ಸೆ, ಮತ್ತು ಶಗುಪ್ತಾ ತಾಳಿಕೋಟೆ ಇತರರಿದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಜಲಪಾತದಲ್ಲಿ ಕಾಣೆಯಾದ ಪವನ ಕೊನೆಗೂ ಸಿಕ್ಕಿದ್ದು ಶವವಾಗಿ!

Next Post

ಮಳೆ ಹಬ್ಬ: ಶಾಲಾ ಮಕ್ಕಳಿಗೆ ಮಳೆ ಆಹ್ವಾದಿಸುವ ಪಾಠ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋