• Latest
Forest encroachment The answer to the lawyer's question is to take action!

ಅರಣ್ಯ ಅತಿಕ್ರಮಣ: ನ್ಯಾಯವಾದಿ ಪ್ರಶ್ನೆಗೆ ಕ್ರಮ ಜರುಗಿಸುವುದೇ ಉತ್ತರ!

8 hours ago
Prediction for June 29 2025

ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ: 04 ಜುಲೈ 2025ರ ದಿನ ಭವಿಷ್ಯ

42 minutes ago
Public opinion Kageri passed in first class!

ಜನಮತ: ಕಾಗೇರಿ ಫಸ್ಟ್ ಕ್ಲಾಸಿನಲ್ಲಿ ಪಾಸು!

54 minutes ago
ADVERTISEMENT
Kali Basin Artificial waterfall at Kadra Dam!

ಕಾಳಿ ಜಲಾನಯನ: ಕದ್ರಾ ಅಣೆಕಟ್ಟಿನಲ್ಲಿ ಕೃತಕ ಜಲಪಾತ!

2 hours ago
Waste piled up inside the house Clearance

ಮನೆಯೊಳಗೂ ತುಂಬಿದ ತ್ಯಾಜ್ಯ: ತೆರವು

4 hours ago
The cause of her death was never known!

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

4 hours ago
Thursday, July 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs
ADVERTISEMENT

ಅರಣ್ಯ ಅತಿಕ್ರಮಣ: ನ್ಯಾಯವಾದಿ ಪ್ರಶ್ನೆಗೆ ಕ್ರಮ ಜರುಗಿಸುವುದೇ ಉತ್ತರ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Forest encroachment The answer to the lawyer's question is to take action!
Advertisement is not enabled. Advertisement is not enabled. Advertisement is not enabled.
ADVERTISEMENT

ಪತ್ರ ಸ್ವೀಕರಿಸಿದ 15 ದಿನದ ಒಳಗೆ ಆ ಪತ್ರಕ್ಕೆ ಸೂಕ್ತ ಹಿಂಬರಹ ನೀಡಬೇಕು ಎಂಬುದು ಸರ್ಕಾರಿ ನಿಯಮ. ಆದರೆ, ಅರಣ್ಯ ಅತಿಕ್ರಮಣದಾರರ ವಿಷಯದಲ್ಲಿ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಹೊನ್ನಾವರ ಅರಣ್ಯಾಧಿಕಾರಿಗಳಿಗೆ ಪತ್ರ ನೀಡಿ ತಿಂಗಳು ಕಳೆದರೂ ಆ ಪತ್ರಕ್ಕೆ ಸರಿಯಾದ ಉತ್ತರ ಬಂದಿಲ್ಲ!

ಅರಣ್ಯವಾಸಿಗಳ ಸಾಗುವಳಿ ಭೂಮಿ ಹಾಗೂ ಅರಣ್ಯ ಸಿಬ್ಬಂದಿ ವರ್ತನೆ ಬಗ್ಗೆ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಮೇ 26ರಂದು ಪತ್ರ ಬರೆದಿದ್ದರು. ಪ್ರಮುಖ 5 ವಿಷಯಗಳ ಸ್ಪಷ್ಠನೆ ಕೋರಿ ಅವರು ಅರಣ್ಯಾಧಿಕಾರಿಗಳಿಗೆ ಪತ್ರ ನೀಡಿದ್ದರು. ಆದರೆ, ಆ ಪತ್ರಕ್ಕೆ ಅರಣ್ಯಾಧಿಕಾರಿಗಳು ಸೂಕ್ತ ಉತ್ತರ ನೀಡಿಲ್ಲ.

ADVERTISEMENT

ಐದು ವಿಷಯಗಳ ಪೈಕಿ ಮೂರು ವಿಷಯಗಳಿಗೆ `ಕ್ರಮ ಜರುಗಿಸಲಾಗುವುದು’ ಎಂಬ ಹಿಂಬರಹ ನೀಡಲಾಗಿದೆ. ಅದರಲ್ಲಿ ಮೊದಲನೆಯದಾಗಿ ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸಲು ಕಾನೂನಿನಲ್ಲಿ ಅವಕಾಶವಿದೆಯಾ? ಎಂದು ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದರು. ಇದಕ್ಕೆ `ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಇಲಾಖೆ ಉತ್ತರಿಸಿದೆ. ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ಮುನ್ನ 64ಎ ಪ್ರಕ್ರಿಯೆ ಅಗತ್ಯವೇ? ಎಂದು ಅವರು ಪ್ರಶ್ನಿಸಿದ್ದರು. ಇದಕ್ಕೆ ಸಹ ಅರಣ್ಯ ಇಲಾಖೆ `ಕ್ರಮ ಜರುಗಿಸಲಾಗುವುದು’ ಎಂಬ ಸಿದ್ಧ ಉತ್ತರ ನೀಡಿದೆ!

ADVERTISEMENT

ಅರಣ್ಯವಾಸಿಗಳ ಮೂಲಸೌಲಭ್ಯದ ಬಗ್ಗೆ ಕೇಳಿದ ಪ್ರಶ್ನೆಗೆ `ಮೇಲಧಿಕಾರಿಗಳಿಂದ ಉತ್ತರಪಡೆಯಬಹುದು’ ಎಂದು ಹೊನ್ನಾವರ ವಲಯ ಅರಣ್ಯಾಧಿಕಾರಿ ಲಿಖಿತವಾಗಿ ತಿಳಿಸಿದ್ದು, ಆ ಮೇಲಧಿಕಾರಿಗಳ ವಿವರ ನೀಡಿಲ್ಲ. ಅರಣ್ಯವಾಸಿಗಳ ದೈಹಿಕ ಹಿಂಸೆ, ನಿಂದನೆಗೆ ಅವಕಾಶವಿದೆಯೇ? ಎಂದು ಕೇಳಲಾದ ಪ್ರಶ್ನೆಗೆ `ಈ ಪ್ರಶ್ನೆ ಅರಣ್ಯ ಕಾಯ್ದೆಗೆ ಸಂಬAಧಿಸಿಲ್ಲ’ ಎಂದು ಉತ್ತರಿಸಿದೆ.

ಅರಣ್ಯ ಅತಿಕ್ರಮಣದಾರರನ್ನು ಒಕ್ಕಲೆಬ್ಬಿಸುವ ವಿಷಯವಾಗಿ ಕೇಳಿದ ಪ್ರಶ್ನೆಗೆ ಸಹ `ಮಾಹಿತಿಪಡೆದು ಕ್ರಮ ಜರುಗಿಸಲಾಗುವುದು’ ಎಂದು ಅರಣ್ಯ ಇಲಾಖೆ ಉತ್ತರ ನೀಡಿದೆ. ಕಾನೂನಾತ್ಮಕ ಅಂಶಗಳ ಉತ್ತರಿಸದೇ ಅಸ್ಪಷ್ಟ ಉತ್ತರ ನೀಡಿದ ಅರಣ್ಯ ಅಧಿಕಾರಿ ನಡೆಯ ವಿರುದ್ಧ ಅರಣ್ಯ ಅತಿಕ್ರಮಣದಾರರು ಆಕ್ರೋಶವ್ಯಕ್ತಪಡಿಸಿದ್ದಾರೆ.

ADVERTISEMENT

Discussion about this post

Previous Post

ಧಾರಾಕಾರ ಮಳೆ: ಕಾರವಾರ-ಶಿರಸಿಯಲ್ಲಿ ಭೂ ಕುಸಿತ!

Next Post

ಹೊಲಕ್ಕೆ ಅಳವಡಿಸಿದ ಬೇಲಿ: ಬಲೆಗೆ ಬಿದ್ದ ಜಿಂಕೆಗೆ ಮರುಜೀವ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Popup Ads

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋