• Latest
That resort is his grandfather's property.. Even the police are not allowed here!

ಆ ರೆಸಾರ್ಟ ಅವನ ಅಜ್ಜನ ಆಸ್ತಿ.. ಇಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ!

1 month ago
Retired officer's walking service Walks 800 km to visit Tirupati!

ನಿವೃತ್ತ ಅಧಿಕಾರಿಯ ಕಾಲ್ನಡಿಗೆ ಸೇವೆ: ತಿರುಪತಿ ದರ್ಶನಕ್ಕೆ 800ಕಿಮೀ ನಡಿಗೆ!

8 hours ago
Bhatkal Two more fishermen found dead!

ಭಟ್ಕಳ: ಶವವಾಗಿ ಬಂದರು ಮತ್ತಿಬ್ಬರು ಮೀನುಗಾರರು!

8 hours ago
ADVERTISEMENT
Khan who doesn't want the money of those he meets!

ಕಂಡವರ ಕಾಸಿಗೆ ಆಸೆಪಡದ ಖಾನ್!

9 hours ago
The lamp lit for God burned down the house!

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

9 hours ago

ಬುಲೆರೋ ಪಲ್ಟಿ: ಐವರಿಗೆ ಪೆಟ್ಟು

9 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಆ ರೆಸಾರ್ಟ ಅವನ ಅಜ್ಜನ ಆಸ್ತಿ.. ಇಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ!

ಸಾರ್ವಜನಿಕ ಸಮಸ್ಯೆ ಆಲಿಸಲು ಹೋಗಿದ್ದ 112 ವಾಹನದ ಪೊಲೀಸ್ ಸಿಬ್ಬಂದಿ ಮೇಲೆ ದುಷ್ಕರ್ಮಿಯೊಬ್ಬರು ದಾಳಿ ನಡೆಸಿದ್ದಾರೆ. ಕತ್ತಿಯ ಏಟಿನಿಂದ ತಪ್ಪಿಸಿಕೊಂಡ ಪೊಲೀಸ್ ಸಿಬ್ಬಂದಿ ರಕ್ಷಣೆಗಾಗಿ ಹಿರಿಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
That resort is his grandfather's property.. Even the police are not allowed here!
Advertisement is not enabled. Advertisement is not enabled. Advertisement is not enabled.
ADVERTISEMENT

ಕುಮಟಾ ದುಬ್ಬಿನಸಸಿ ಗ್ರಾಮದಲ್ಲಿನ ಗಲಾಟೆ ಬಿಡಿಸಲು ಹೋಗಿದ್ದ ಪೊಲೀಸರ ಮೇಲೆ ದುಷ್ಕರ್ಮಿಯೊಬ್ಬ ಕತ್ತಿ ಬೀಸಿದ್ದು, ಈ ಹೊಡೆದಾಟದಲ್ಲಿ ಪೊಲೀಸ್ ಸಿಬ್ಬಂದಿಯ ಸಮವಸ್ತ್ರ ಹರಿದಿದೆ. ಗಾಯಗೊಂಡ ಪೊಲೀಸ್ ಸಿಬ್ಬಂದಿ ರಕ್ಷಣೆ ಕೋರಿ ಪೊಲೀಸ್ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ಕುಮಟಾ ದುಬ್ಬಿನಸಸಿಯ ಶಶಿಹಿತ್ಲಲ್ ಬಳಿ ಪ್ರತೀಕ ನಾಯಕ ಎಂಬಾತರು ರೆಸಾರ್ಟ ನಡೆಸುತ್ತಾರೆ. ಅವರ ಆತಿಥ್ಯ ಬೀಚ್ ಪ್ರಂಟ್ ರೆಸಾರ್ಟಗೆ ನಿತ್ಯ ಮಹಾಬಲೇಶ್ವರ ಗೌಡ ಎಂಬಾತರು ಆಗಮಿಸುತ್ತಾರೆ. `ಇದು ನನ್ನ ಅಜ್ಜನ ಜಾಗ. ನೀವು ಖಾಲಿ ಮಾಡಿ’ ಎಂದು ಗಲಾಟೆ ಮಾಡುತ್ತಾರೆ. ರೆಸಾರ್ಟಿನ ಬಾಗಿಲು ಬಡಿಯವುದು, ಅಲ್ಲಿರುವ ಅತಿಥಿಗಳಿಗೆ ತೊಂದರೆ ನೀಡುವುದು ಮಹಾಬಲೇಶ್ವರ ಗೌಡ ಅವರ ನಿತ್ಯದ ಕೆಲಸ. ರೆಸಾರ್ಟಿನ ಒಳಗಿನ ಗಾಜುಗಳನ್ನು ಒಡೆಯುವುದು ಸಹ ಅವರಿಗೆ ಹೊಸದಲ್ಲ.

ADVERTISEMENT

ಈ ಎಲ್ಲಾ ಕೃತ್ಯದಿಂದ ಬೇಸತ್ತ ಪ್ರತೀಕ ನಾಯಕ ಅವರು ಜುಲೈ 2ರ ಸಂಜೆ ಪೊಲೀಸರಿಗೆ ಫೋನ್ ಮಾಡಿದ್ದರು. ಪೊಲೀಸರು ಪ್ರತೀಕ ನಾಯಕ ಅವರ ಅಳಲು ಆಲಿಸಿ ವಿಚಾರಣೆ ನಡೆಸಿದ್ದರು. ಅದಾದ ನಂತರ 112 ಪೊಲೀಸ್ ವಾಹನ ಸಿಬ್ಬಂದಿ ನಾರಾಯಣ ಗೌಡ ಅವರು ಮಹಾಬಲೇಶ್ವರ ಗೌಡರನ್ನು ವಿಚಾರಿಸಲು ಅವರ ಮನೆ ಬಳಿ ತೆರಳಿದ್ದರು. ಇದರಿಂದ ಸಿಟ್ಟಾದ ಮಹಾಬಲೇಶ್ವರ ಗೌಡ ಪೊಲೀಸ್ ಸಿಬ್ಬಂದಿ ನಾರಾಯಣ ಗೌಡ ವಿರುದ್ಧ ಕೂಗಾಡಿದರು.

Advertisement. Scroll to continue reading.

ಮನೆ ಜಗುಲಿ ಮೇಲಿದ್ದ ಕತ್ತಿ ತೆಗೆದು ನಾರಾಯಣ ಗೌಡರ ಕುತ್ತಿಗೆ ಕಡೆ ಬೀಸಿದರು. ಕ್ಷಣಮಾತ್ರದಲ್ಲಿ ತಪ್ಪಿಸಿಕೊಂಡ ಪರಿಣಾಮ ನಾರಾಯಣ ಗೌಡ ಅವರು ಪ್ರಾಣ ಉಳಿಸಿಕೊಂಡರು. ಅದಾಗಿಯೂ ಬಿಡದ ಮಹಾಬಲೇಶ್ವರ ಗೌಡರು ನಾರಾಯಣ ಗೌಡರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ತುಳಿದರು. ಅವರು ಧರಿಸಿದ್ದ ಪೊಲೀಸ್ ಯುನಿಪಾರಂ’ನ್ನು ಹರಿದರು.

Advertisement. Scroll to continue reading.
ADVERTISEMENT

`ಅದು ನನ್ನ ಅಜ್ಜನ ಆಸ್ತಿ. ಅಲ್ಲಿ ಪೊಲೀಸರಿಗೂ ಪ್ರವೇಶವಿಲ್ಲ’ ಎಂದು ಮಹಾಬಲೇಶ್ವರ ಗೌಡ ದೊಡ್ಡದಾಗಿ ಕೂಗಾಡದರು. `ಆ ಆಸ್ತಿ ಬಿಟ್ಟು ಹೋಗಿ’ ಎಂದು ಬೊಬ್ಬೆ ಹೊಡೆದರು. `ನೀವು ಪೊಲೀಸರಾದರೇನು? ನನಗೆ ಸಂಬoಧವಿಲ್ಲ’ ಎನ್ನುತ್ತ ಇನ್ನಷ್ಟು ನಾರಾಯಣ ಗೌಡರ ಮೇಲೆ ಇನ್ನಷ್ಟು ದಾಳಿ ಮಾಡಿದರು. ಕಾಲಿನಿಂದ ಒದ್ದು ನೋವುಂಟು ಮಾಡಿದರು.

ಈ ಎಲ್ಲಾ ವಿದ್ಯಮಾನದ ಬಗ್ಗೆ ಪೊಲೀಸ್ ಸಿಬ್ಬಂದಿ ನಾರಾಯಣ ಗೌಡ ಅವರು ಗೋಕರ್ಣ ಠಾಣೆಗೆ ಬಂದು ವರದಿ ಒಪ್ಪಿಸಿದರು. ಪಿಎಸ್‌ಐ ಖಾದರ್ ಭಾಷಾ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಬಾಲಕಿ ಅಪಹರಣ ಪ್ರಕರಣ: ಮುಂಬೈಯಲ್ಲಿ ಸಿಕ್ಕಿಬಿದ್ದ ಕಳ್ಳ ಖಾನ್!

Next Post

ಜುಲೈ 4: ನಾಲ್ಕು ತಾಲೂಕಿನ ಶಾಲೆಗಳಿಗೆ ಮಳೆ ರಜೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋