• Latest
Torrential rain Landslides in Karwar-Shirasi!

ಧಾರಾಕಾರ ಮಳೆ: ಕಾರವಾರ-ಶಿರಸಿಯಲ್ಲಿ ಭೂ ಕುಸಿತ!

10 hours ago
Kali Basin Artificial waterfall at Kadra Dam!

ಕಾಳಿ ಜಲಾನಯನ: ಕದ್ರಾ ಅಣೆಕಟ್ಟಿನಲ್ಲಿ ಕೃತಕ ಜಲಪಾತ!

1 hour ago
Waste piled up inside the house Clearance

ಮನೆಯೊಳಗೂ ತುಂಬಿದ ತ್ಯಾಜ್ಯ: ತೆರವು

2 hours ago
ADVERTISEMENT
The cause of her death was never known!

ಆಕೆಯ ಸಾವಿಗೆ ಕಾರಣವೇ ಗೊತ್ತಾಗಲಿಲ್ಲ!

3 hours ago
Iyengar Bakery Even rotten cake costs money!

ಅಯ್ಯಂಗಾರ್ ಬೇಕರಿ: ಕೊಳೆತ ಕೇಕ್’ಗೂ ಕಾಸು!

3 hours ago
Ananthamurthy batting for the contractors

ಗುತ್ತಿಗೆದಾರರ ಪರ ಅನಂತಮೂರ್ತಿ ಬ್ಯಾಟಿಂಗ್

3 hours ago
Thursday, July 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs https://www.instagram.com/shreeshloka5/profilecard/?igsh=NW91NzFiNDh1azZs
ADVERTISEMENT

ಧಾರಾಕಾರ ಮಳೆ: ಕಾರವಾರ-ಶಿರಸಿಯಲ್ಲಿ ಭೂ ಕುಸಿತ!

Achyutkumarby Achyutkumar
in ನಮ್ಮೂರು - ನಮ್ಮ ಜಿಲ್ಲೆ
Torrential rain Landslides in Karwar-Shirasi!
Advertisement is not enabled. Advertisement is not enabled. Advertisement is not enabled.
ADVERTISEMENT

ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಸ್ಥಳಗಳಲ್ಲಿ ಧಾರಾಕಾರ ಮಳೆಯಗುತ್ತಿದೆ. ಪರಿಣಾಮ ಕಾರವಾರ ಹಾಗೂ ಶಿರಸಿಯಲ್ಲಿ ಗುರುವಾರ ಭೂ ಕುಸಿತವಾಗಿದೆ.

ಕಾರವಾರದಿಂದ ಕದ್ರಾ ಕೊಡಳಸ್ಳಿ ಅಣೆಕಟ್ಟಿಗೆ ಸಂಪರ್ಕ ಕಲ್ಪಿಸುವ ಬಾಳೆಮನೆ ಬಳಿ ರಸ್ತೆ ಮೇಲೆ ಮಣ್ಣು ಬಿದ್ದಿದೆ. ಮಣ್ಣಿನ ಜೊತೆ 150ಕ್ಕೂ ಅಧಿಕ ಗಿಡ-ಮರಗಳು ನೆಲಕ್ಕೆ ಅಪ್ಪಳಿಸಿದೆ. ಸುಮಾರು 50ಮೀಟರ್ ಅಗಲದವರೆಗೆ ಇಲ್ಲಿ ಭೂ ಕುಸಿತವಾಗಿದೆ. ಜಿಲ್ಲಾ ಪಂಚಾಯತ ಅಧೀನದ ರಸ್ತೆಯಾಗಿದ್ದರೂ ಈ ಮಾರ್ಗದಲ್ಲಿ ವಾಹನ ಸಂಚಾರ ವಿರಳವಾಗಿದ್ದರಿಂದ ಹೆಚ್ಚಿನ ಅಪಾಯವಾಗಿಲ್ಲ.

ADVERTISEMENT

ಕದ್ರಾ ಅಣೆಕಟ್ಟಿನಿಂದ 12 ಕಿಮೀ ದೂರದಲ್ಲಿ ಈ ಭೂ ಕುಸಿತ ಉಂಟಾಗಿದೆ. ಪರಿಣಾಮ ಅಣೆಕಟ್ಟಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ. ಭೂ ವಿಜ್ಞಾನಿಗಳು ಗುಡ್ಡ ಕುಸಿತ ಪರಿಶೀಲನೆಗೆ ತೆರಳಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಆ ರಸ್ತೆ ಮಾರ್ಗದ ಸಂಚಾರವನ್ನು ನಿಷೇಧಿಸಿದೆ. ಜಲಾನಯನ ಪ್ರದೇಶದ ಸಾಮಿಪ್ಯದಲ್ಲಿ ಕುಸಿತವಾಗಿದ್ದರಿಂದ ಜನ ಆತಂಕಗೊAಡಿದ್ದಾರೆ. ಭೂ ಕುಸಿತದಿಂದ ಅಣೆಕಟ್ಟಿಗೆ ಯಾವುದೇ ಅಪಾಯವಿಲ್ಲ ಎಂದು ಕೆಪಿಸಿ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ಬಾಳೆಮನೆ ಗ್ರಾಮ ಹಾಗೂ ಜೊಯಿಡಾದ ಸೂಳಗೇರಿ ಗ್ರಾಮದ ಜನ ಮಾತ್ರ ಈ ರಸ್ತೆಯಲ್ಲಿ ಹೆಚ್ಚಿಗೆ ಸಂಚರಿಸುತ್ತಿದ್ದರು. ಅವರಿಗೆ ಇದೀಗ ಸಂಚಾರಕ್ಕೆ ಪರ್ಯಾಯ ರಸ್ತೆ ಇಲ್ಲ. ಕೊಡಸಳ್ಳಿ ಅಣೆಕಟ್ಟಿನ ನಿರ್ವಹಣೆಗೆ ಅಧಿಕಾರಿಗಳು ಸಹ ಇದೇ ರಸ್ತೆ ಉಪಯೋಗಿಸುತ್ತಿದ್ದು, ಸದ್ಯ ಅವರ ಸಂಚಾರವೂ ಸ್ಥಗಿತವಾಗಿದೆ.

ಶಿರಸಿಯಲ್ಲಿಯೂ ಧರೆ ಕುಸಿತ
ಶಿರಸಿಯ ಗಣೇಶ ನಗರದಲ್ಲಿ ಸಹ ಧರೆ ಕುಸಿತವಾಗಿದೆ. ಗಣೇಶ ನಗರದ ನೀರಿನ ಟ್ಯಾಂಕ್ ಬಳಿ ಇರುವ ತಿರುಕಪ್ಪನ ಮನೆ ಹಿಂದಿನ ಮಣ್ಣು ಕುಸಿದಿದೆ. ಆ ಮಣ್ಣು ಅಲ್ಲಿರುವ ಮನೆ ಬಾಗಿಲಿನವರೆಗೂ ಬಂದು ಬಿದ್ದಿದೆ.

ಧರೆ ಮಣ್ಣು ಕುಸಿತದಿಂದ ಧರೆ ಕೆಳಗಿದ್ದವರು ಅಪಾಯಕ್ಕೆ ಸಿಲುಕಿದ್ದಾರೆ. ಧರೆ ಮೇಲ್ಬಾಗದವರು ಸಹ ಆತಂಕದಲ್ಲಿದ್ದಾರೆ. ಬುಧವಾರ ಶಾಸಕ ಭೀಮಣ್ಣ ನಾಯ್ಕ ಅವರು ಈ ವಾರ್ಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಆಗಲು ಕೆಲವರು ಧರೆ ಕುಸಿತದ ಆತಂಕವ್ಯಕ್ತಪಡಿಸಿದ್ದರು. ಅದರ ಬೆನ್ನಲ್ಲೆ ಧರೆ ಕುಸಿದಿದ್ದು, ಜನ ಸಂಕಷ್ಟದಲ್ಲಿದ್ದಾರೆ. ಗಣೇಶನಗರದಲ್ಲಿನ ಧರೆ ಕುಸಿತದಿಂದ ಒಟ್ಟು 5 ಮನೆಗಳಿಗೆ ಇಲ್ಲಿ ಅಪಾಯವಾಗುವ ಸಾಧ್ಯತೆಯಿದೆ. ಅಧಿಕಾರಿಗಳು ಸ್ಥಳಕೆಕ ಬಂದು ಪರಿಹಾರ ಒದಗಿಸಬೇಕು ಎಂದು ಜನ ಆಗ್ರಹಿಸುತ್ತಿದ್ದಾರೆ.

ಶಿರಸಿಯ ಬದನಗೋಡ ಪಂಚಾಯತ ವ್ಯಾಪ್ತಿಯ ರಂಗಾಪುರದಲ್ಲಿಯೂ ಮಳೆ ರಭಸಕ್ಕೆ ಕೊಟ್ಟಿಗೆಯೊಂದು ಕುಸಿದು ಬಿದ್ದಿದೆ. ಗುರುವಾರ ನಸುಕಿನಲ್ಲಿ ಕೊಟ್ಟಿಗೆ ನೆಲಸಮವಾಗಿದೆ. 10ಕ್ಕೂ ಅಧಿಕ ಜಾನುವಾರುಗಳು ಕೊಟ್ಟಿಗೆಯಲ್ಲಿದ್ದು, ಅವೆಲ್ಲವೂ ಗಾಯಗೊಂಡಿವೆ. ಲಕ್ಷಣ ಗುಂಡಿಹAದ್ರಾಳ ಅವರಿಗೆ ಸೇರಿದ ಕೊಟ್ಟಿಗೆ ಇದಾಗಿತ್ತು. ಜಾನುವಾರುಗಳು ಜೀವಾಪಾಯದಿಂದ ಪಾರಾಗಿದ್ದರೂ, ನೋವು ಅನುಭವಿಸುತ್ತಿವೆ. ಕೊಟ್ಟಿಗೆ ಕುಸಿತದಿಂದ ಮಾಲಕರಿಗೆ 74 ಸಾವಿರ ರೂ ಹಾನಿಯಾಗಿದೆ.

ADVERTISEMENT

Discussion about this post

Previous Post

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ: 03 ಜುಲೈ 2025ರ ದಿನ ಭವಿಷ್ಯ

Next Post

ಅರಣ್ಯ ಅತಿಕ್ರಮಣ: ನ್ಯಾಯವಾದಿ ಪ್ರಶ್ನೆಗೆ ಕ್ರಮ ಜರುಗಿಸುವುದೇ ಉತ್ತರ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Popup Ads

No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋