• Latest
ಕೇಣಿ ಬಂದರು: ಹೋಯ್… ಸ್ವಲ್ಪ ಇಲ್ಲಿ ಕೇಣಿ!

ಕೇಣಿ ಬಂದರು: ಹೋಯ್… ಸ್ವಲ್ಪ ಇಲ್ಲಿ ಕೇಣಿ!

4 weeks ago

ಬೆಂಗಳೂರಿಗೆ ಹೋಗಿದ್ದ ಪತ್ನಿ: ಮರಳಿ ಬರುವಷ್ಟರಲ್ಲಿ ಶವವಾಗಿದ್ದ ಪತಿ!

4 minutes ago
ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

19 minutes ago
ADVERTISEMENT
Evil bear breaks into human home The forest is not enough for this wildlife to do that!

ಮಾನವನ ಮನೆಗೆ ನುಗ್ಗಿದ ದುಷ್ಟ ಕರಡಿ: ಈ ವನ್ಯಜೀವಿಗೆ ಆ ಕೆಲಸ ಮಾಡಲು ಕಾಡು ಸಾಕಾಗಿಲ್ಲ!

35 minutes ago
ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

ಮಹಾದೇವ ವಿನಾಯಕ ದೇಗುಲಕ್ಕೆ ನೂತನ ಸಮಿತಿ: ದೇವ ಭಕ್ತರಿಗೆ ಸಿಕ್ಕಿದ ಆಡಳಿತಾತ್ಮಕ ಅಧಿಕಾರ

3 hours ago
ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

ದಾಂಡೇಲಿಯಲ್ಲಿ ಮಿತಿ ಮೀರಿದ ನಾಯಿ ಕಾಟ:‌ ಮಕ್ಕಳನ್ನು ಶಾಲೆಗೆ ಕಳುಹಿಸಲು ಭಯ!

3 hours ago
ADVERTISEMENT
Sunday, August 3, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಕೇಣಿ ಬಂದರು: ಹೋಯ್… ಸ್ವಲ್ಪ ಇಲ್ಲಿ ಕೇಣಿ!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಸರ್ಕಾರ ಬಂದರು ನಿರ್ಮಿಸಲು ಉದ್ದೇಶಿಸಿದೆ. ವಾಣಿಜ್ಯ ಬಂದರು ನಿರ್ಮಾಣಕ್ಕೆ JSW ಕಂಪನಿಗೆ ಗುತ್ತಿಗೆ ನೀಡಿದೆ. ಬಂದರು ನಿರ್ಮಾಣ ವಿಷಯವಾಗಿ ಪರ-ವಿರೋಧ ಚರ್ಚೆ ನಡೆದಿದ್ದು, ಗೊಂದಲಗಳ ಬಗ್ಗೆ ಮೊಬೈಲ್ ಮಿಡಿಯಾ ನೆಟ್‌ವರ್ಕ ಪತ್ರದ ಮೂಲಕ ಕೇಳಿದ ಪ್ರಶ್ನೆಗಳಿಗೆ JSW ಕಂಪನಿ ತ್ವರಿತ ರೀತಿಯಲ್ಲಿ ಉತ್ತರಿಸಿದೆ.

mobiletime.inby mobiletime.in
in ವಾಣಿಜ್ಯ
Advertisement is not enabled. Advertisement is not enabled. Advertisement is not enabled.
ADVERTISEMENT

ಪ್ರಶ್ನೆ: ಬಂದರು ನಿರ್ಮಾಣಕ್ಕಾಗಿ ಸಮುದ್ರದಲ್ಲಿ ತಡೆಗೋಡೆ ಹಾಗೂ ಜಟ್ಟಿ ನಿರ್ಮಿಸುವುದರಿಂದ ಕೇಣಿ ಬಂದರಿಗೆ ನೈಸರ್ಗಿಕವಾಗಿ ಬರಬೇಕಿದ್ದ ಅರಬ್ಬಿ ಸಮುದ್ರದ ಅಲೆಗಳು ವಿರುದ್ಧ ದಿಕ್ಕಿನಲ್ಲಿ ಸಾಗುತ್ತವೆ. ಇದರಿಂದ ಬೇರೆ ಊರುಗಳಲ್ಲಿ ಕಡಲ ಕೊರೆತ ಉಲ್ಬಣವಾಗುವುದಿಲ್ಲವೇ?

JSW ಕಂಪನಿ ನೀಡಿದ ವಿವರಣೆ: ಕೇಣಿ ಸರ್ವಋತು ಆಳ ಬಂದರಿನಲ್ಲಿ ತಡೆಗೊಡೆ ಮತ್ತು ಜೆಟ್ಟಿಯನ್ನು ನಿರ್ಮಿಸಲಾಗುತ್ತಿದೆ. ಈ ಯೋಜನೆಯ ಬಗ್ಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಪ್ರತಿಷ್ಠಿತ ಕನ್ಸಲ್ಟೆಂಟ್ ರಾದ ಮೇ|| AECOM ರವರು ಯೋಜನಾ ವರದಿಯನ್ನು ತಯಾರಿಸಿದ್ದು ಯೋಜನೆಯ ಎಲ್ಲ ಸಾಧಕ ಬಾಧಕಗಳ ಬಗ್ಗೆ ವಿವರವಾದ ಅಧ್ಯಯನವನ್ನು ನಡೆಸಿರುತ್ತಾರೆ. ಯೋಜನೆಗೆ ಸಂಬ0ದಿಸಿದ Draft Environmental Impact Assessment ವರದಿಯನ್ನು ಅಂತರರಾಷ್ಟ್ರೀಯ ಎಂಜಿನಿಯರಿ0ಗ್ ಮತ್ತು ಯೋಜನಾ ನಿರ್ವಹಣಾ ಕಂಪನಿಯಾದ M/s Assystem India Limited ರವರು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದವರು ನೀಡಿದ ಷರತ್ತುಗಳ ಉಲ್ಲೇಕಗಳಿಗೆ (Terms of Reference)  ಅನುಗುಣವಾಗಿ ತಯಾರಿಸಿರುತ್ತಾರೆ. ಸದರಿ ವರದಿಯನ್ನು ಜಿಲ್ಲಾಡಳಿತ, ಪರಿಸರ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಪ್ರಾಧಿಕಾರಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಇರಿಸಲಾಗುವುದು.

ADVERTISEMENT

ಪ್ರಶ್ನೆ: ಕೇಣಿ ಬಂದರು ಯೋಜನೆಯಿಂದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಧ್ಯತೆಗೊಳ್ಳಲು ಸಹಕಾರಿ ಎಂದು ತಾವು ಪ್ರಕಟಣೆಯಲ್ಲಿ ತಿಳಿಸಿದ್ದು, ಇದಕ್ಕೆ ಪೂರಕವಾಗಿ ಹುಬ್ಬಳ್ಳಿಯಿಂದ ಅಂಕೋಲಾಗೆ ರೈಲು ಓಡಿದ ಗ್ರಾಫಿಕ್ ವಿಡಿಯೋವನ್ನು ತಾವು ಯೂಟೂಬ್ ಚಾನಲ್ ಮೂಲಕ ಹಂಚಿಕೊoಡಿದ್ದೀರಿ. ತಾವು ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಂಚರಿಸಬಹುದಾದ ಕ್ಷೇತ್ರದ ಅಧ್ಯಯನ ಮಾಡದೇ ಆ ಮಾರ್ಗದ ನಕ್ಷೆಯಲ್ಲಿ ರೈಲು ಓಡಿಸುವ ಗ್ರಾಫಿಕ್ ವಿಡಿಯೋ ಮಾಡಿರಲಿಕ್ಕಿಲ್ಲ. ಹುಬ್ಬಳ್ಳಿ – ಅಂಕೋಲಾ ರೈಲು ಮಾರ್ಗ ಯಾವ ಯಾವ ಕ್ಷೇತ್ರವನ್ನು ಹಾದು ಹೋಗಲಿದೆ? ಅದರಿಂದ ಯಾರು ಭೂಮಿ ಕಳೆದುಕೊಳ್ಳುತ್ತಾರೆ. ಆ ಭೂಮಿಗೆ ರೈಲ್ವೆ ಸಂಚಾರ ತಡೆಯುವಷ್ಟು ಧಾರಣಾ ಶಕ್ತಿ ಇದೆಯಾ? ಎಂಬ ಕುರಿತು ಅನೇಕ ಗೊಂದಲಗಳು ಜನರನ್ನು ಕಾಡುತ್ತಿದೆ. ಹೀಗಿರುವಾಗ ತಾವು ಗ್ರಾಫಿಕ್ ಡಿಸೈನ್ ಮೂಲಕ ಹುಬ್ಬಳ್ಳಿ-ಅಂಕೋಲಾ ರೈಲು ಓಡಾಟ ನಡೆಸಿದ್ದು, ಆ ಮಾರ್ಗದ ಸರ್ವೇ ನಂ ಮಾಲಕರಲ್ಲಿ ಇನ್ನಷ್ಟು ಗೊಂದಲ ಉಂಟಾಗಿದೆ. ಹೀಗಾಗಿ ಹುಬ್ಬಳ್ಳಿ ಅಂಕೋಲಾ ರೈಲು ಮಾರ್ಗ ಹಾದು ಹೋಗುವ ಸರ್ವೇ ನಂ, ಆ ಕ್ಷೇತ್ರದ ಭೂಮಿ ಮಣ್ಣಿನ ಧಾರಣಾ ಶಕ್ತಿ ಅಧ್ಯಯನ ವರದಿ ಹಾಗೂ ತಮ್ಮ ಬಳಿಯಿರುವ ಇನ್ನಿತರ ದಾಖಲೆಗಳನ್ನು ಬಹಿರಂಗಪಡಿಸಬಹುದಲ್ಲವೇ?

JSW ಕಂಪನಿ ನೀಡಿದ ವಿವರಣೆ: ಕೇಣಿ ಬಂದರು ಯೋಜನೆಯ ಮೊದಲ ಹಂತದಲ್ಲಿ ಮೂವತ್ತು ಮಿಲಿಯನ್ ಟನ್ಸ್ ವಿವಿಧ ಸರಕುಗಳನ್ನು ನಿರ್ವಹಿಸಲು ಉದ್ದೇಶಿಸಿದ್ದು ಇದರಿಂದ ಖಂಡಿತವಾಗಿ ಈ ಭಾಗದಲ್ಲಿ ಹುಬ್ಬಳ್ಳಿ ಅಂಕೋಲಾ ರೈಲ್ವೆ ಲೈನಿನ ಯೋಜನೆಯನ್ನು ಕಾರ್ಯಗತಗೊಳಿಸಲು ಸಹಕಾರಿಯಾಗಲಿದೆ. ಮತ್ತು ಕೇಂದ್ರ ಸರಕಾರದ ರೈಲ್ವೆ ಇಲಾಖೆಯ ಈ ಯೋಜನೆಯು ಆರ್ಥಿಕವಾಗಿ ಲಾಭದಾಯಕವಾಗಿ ಅನುಷ್ಠಾನಗೊಳಿಸಲು ಕೇಣಿ ಬಂದರು ಪೂರಕವಾಗಲಿದೆ. JSW ವತಿಯಿಂದ ಸಾರ್ವಜನಿಕರ ಮಾಹಿತಿಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಪಡಿಸಿರುವ ಗ್ರಾಫಿಕ್ ವಿಡಿಯೋ ಕೇವಲ ಪೂರ್ವಬಾವಿ ಮಾಹಿತಿಗಾಗಿ ಬಿಡುಗಡೆಗೊಳಿಸಿದ್ದು, ಇದು ಯಾವುದೇ ನೈಜ್ಯ ತಾಂತ್ರಿಕ ಮಾಹಿತಿಯನ್ನು ಒಳಗೊಂಡಿರುವುದಿಲ್ಲ. ಹುಬ್ಬಳ್ಳಿ ಅಂಕೋಲಾ ರೈಲ್ವೆ ಯೋಜನೆಯನ್ನು ಕೇಂದ್ರ ಸರಕಾರದ ನೈಋತ್ಯ ರೈಲ್ವೆ ವಿಭಾಗವು ಅನುಷ್ಠಾನಗೊಳಿಸಲಿದ್ದು, ಈ ಪ್ರಕ್ರಿಯೆಯಲ್ಲಿ JSWಒಳಗೊಂಡಿರುವುದಿಲ್ಲ ಆದರೆ ಕೇಣಿ ಬಂದರಿನಿ0ದ ಈ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಬಲ ಬರಲಿದೆ ಎಂಬುದನ್ನು ವ್ಯಕ್ತಪಡಿಸುವದು ಮಾತ್ರ ಗ್ರಾಫಿಕ್ ವಿಡಿಯೋದ ಉದ್ದೇಶವಾಗಿದೆ.

ಪ್ರಶ್ನೆ: ಕೇಣಿ ಬಂದರು ನಿರ್ಮಾಣ ವಿಷಯವಾಗಿ ಸ್ಥಳೀಯರ ಶೈಕ್ಷಣಿಕ ಅರ್ಹತೆ ಆಧಾರದಲ್ಲಿ ಉದ್ಯೋಗ ಸಿಗಲಿದೆ ಎಂದು ತಾವು ಪ್ರಕಟಣೆ ನೀಡಿದ್ದು, ಈಗಾಗಲೇ ಈ ಯೋಜನೆಗಾಗಿ ಹುದ್ದೆ ಭರ್ತಿ ಮಾಡಿಕೊಂಡಿರುವ ಕಂಪನಿ ಸ್ಥಳೀಯರಿಗೆ ಎಷ್ಟು ಮೀಸಲಾತಿ ನೀಡಿದೆ? ಸದ್ಯ ಎಷ್ಟು ಸಂಖ್ಯೆಯ ಸ್ಥಳೀಯ ಉದ್ಯೋಗಿಗಳು ಈ ಕಂಪನಿಯ ಉದ್ಯೋಗದಲ್ಲಿದ್ದಾರೆ?

Advertisement. Scroll to continue reading.

ಕಂಪನಿ ನೀಡಿದ ವಿವರಣೆ: ಪ್ರಸಕ್ತ ಕೇವಲ ಯೋಜನೆಯ ತಾಂತ್ರಿಕ ಅಧ್ಯಯನಗಳನ್ನು ಮಾತ್ರ ನಿರ್ವಹಿಸಲಾಗುತ್ತಿದ್ದು, ಸಾರ್ವಜನಿಕ ಅಹವಾಲಿನ ನಂತರ ಪರಿಸರ ಅನುಮತಿ ಪಡೆದು ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಯೋಜನೆಯ ಅನುಷ್ಠಾನದ ಸಮಯದಲ್ಲಿ ಸ್ಥಳೀಯರ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ವಿವಿಧ ವಿಭಾಗಗಳಲ್ಲಿ ಆದ್ಯತೆಯ ಮೇಲೆ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು. JSW ವತಿಯಿಂದ ಸ್ಥಳೀಯರ ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು ವಿವಿಧ ತರಬೇತಿಗಳನ್ನು ನೀಡಲು ಉದ್ದೇಶಿಸಲಾಗಿದ್ದು, ಅಂತಹ ಸ್ಥಳೀಯ ಅಭ್ಯರ್ಥಿಗಳಿಗೂ ಉದ್ಯೋಗಾವಕಾಶಗಳನ್ನು ಒದಗಿಸಲಾಗುವುದು. ಈ ಯೋಜನೆಯಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಸ್ರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಪ್ರಶ್ನೆ: ಉತ್ತರ ಕನ್ನಡ ಜಿಲ್ಲೆ ಪರಿಸರ ಸೂಕ್ಷ ಪ್ರದೇಶ ಎಂದು ಕಸ್ತೂರಿ ರಂಗನ್ ವರದಿ ಹೇಳಿದ್ದರಿಂದ ಅನೇಕ ಯೋಜನೆಗಳು ಇಲ್ಲಿ ಕಾರ್ಯಸಾಧುವಲ್ಲ ಎನ್ನಲಾಗುತ್ತಿದೆ. ಆದರೆ, ತಾವು ಕೇಣಿ ಬಂದರು ಯೋಜನೆ ಕಾರ್ಯಸಾಧು ಎಂದು ಅಧ್ಯಯನ ವರದಿ ಹೇಳಿರುವುದಾಗಿ ಪ್ರಕಟಣೆ ಮೂಲಕ ತಿಳಿಸಿದ್ದೀರಿ. ಈ ಯೋಜನೆ ಬಗ್ಗೆ ಆ ಅಧ್ಯಯನ ನಡೆಸಿದ ತಜ್ಞರು ಯಾರು? ಪರಿಸರ ವಿಷಯವಾಗಿ ಅವರ ಅಧ್ಯಯನ ಏನು? ಅವರು ನೀಡಿದ ಸಂಪೂರ್ಣ ವರದಿಯನ್ನು ಕಸ್ತೂರಿ ರಂಗನ್ ವರದಿ ಜೊತೆ ತುಲನೆ ಮಾಡಿ ನೋಡಲಾಗಿದೆಯಾ?

ಕಂಪನಿ ನೀಡಿದ ವಿವರಣೆ: ಕರ್ನಾಟಕ ರಾಜ್ಯ ಸರಕಾರವು ಅವಶ್ಯವಿರುವ ಪೂರ್ವ ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿಯಲ್ಲಿ ಸರ್ವಋತು ಆಳ ಸಮುದ್ರದ ಗ್ರೀನ್ ಫೀಲ್ಡ್ ಬಂದರನ್ನು ನಿರ್ಮಿಸುವ ಬಗ್ಗೆ ಜಾಗತಿಕ ಟೆಂಡರ್ ಅನ್ನು ಕರೆದಿರುತ್ತಾರೆ. ಸದರಿ ಟೆಂಡರ್ JSW ಕಂಪೆನಿಯು ಯಶಸ್ವಿ ಬಿಡ್ಡುದಾರರಾಗಿ ಆಯ್ಕೆಯಾಗಿದ್ದು ಕರ್ನಾಟಕ ಜಲಸಾರಿಗೆ ಮಂಡಳಿಯು ಈ ಯೋಜನೆಯ ಅನುಷ್ಠಾನದ ಬಗ್ಗೆ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ಈ ಯೋಜನೆಯ ಬಗ್ಗೆ ಅಂತಾರಾಷ್ಟ್ರೀಯ ಮಾನ್ಯತೆಯುಳ್ಳ ಪ್ರತಿಷ್ಠಿತ ಕನ್ಸಲ್ಟೆಂಟ್ ರಾದ ಮೇ|| AECOM ರವರು ಯೋಜನಾ ವರದಿಯನ್ನು ತಯಾರಿಸಿದ್ದು ಯೋಜನೆಯ ಎಲ್ಲ ಸಾಧಕ ಬಾಧಕಗಳ ಬಗ್ಗೆ ವಿವರವಾದ ಅಧ್ಯಯನವನ್ನು ನಡೆಸಿರುತ್ತಾರೆ. ಯೋಜನೆಗೆ ಸಂಬ0ದಿಸಿದ Draft Environmental Impact Assessment ವರದಿಯನ್ನು ಅಂತರರಾಷ್ಟ್ರೀಯ ಎಂಜಿನಿಯರಿOಗ್ ಮತ್ತು ಯೋಜನಾ ನಿರ್ವಹಣಾ ಕಂಪನಿಯಾದ M/s Assystem India Limited ರವರು ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದವರು ನೀಡಿದ ಷರತ್ತುಗಳ ಉಲ್ಲೇಕಗಳಿಗೆ (Terms of Reference) ಅನುಗುಣವಾಗಿ ತಯಾರಿಸಿರುತ್ತಾರೆ.

ಸದರಿ ವರದಿಯನ್ನು ಜಿಲ್ಲಾಡಳಿತ, ಪರಿಸರ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಪ್ರಾಧಿಕಾರಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಇರಿಸಲಾಗುವುದು. ಸಾರ್ವಜನಿಕ ಅಹವಾಲು ಸಭೆಯಲ್ಲಿ ಈ ಬಗ್ಗೆ ಏರ್ಪಡುವ ವಿಚಾರ ವಿನಿಮಯ / ಚಿಂತನೆಗೆ ಅನುಗುಣವಾಗಿ MoEF&CC  ರವರ ನಿರ್ದೇಶನಗಳಿಗೆ ಅನುಗುಣವಾಗಿ ಅಂತಿಮ EIA  ವರದಿಯನ್ನು ತಯಾರಿಸಲಾಗುವುದು. ಅಂತಿಮವಾಗಿ ಕೇಂದ್ರ ಸರಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ  (MoEF&CC) ಅನುಮತಿ ನೀಡಿದ ನಂತರವೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳುವ ಬಗ್ಗೆ ನಿರ್ಧರಿಸಲಾಗುವುದು.

ಕಂಪನಿ ಹೇಳಿದ ಇನ್ನಷ್ಟು ವಿಷಯ ಏನೇಂದರೆ….

ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಆಧಾರದ ಮೇಲೆ ಕೇಣಿಯಲ್ಲಿ ಸರ್ವಋತು ಆಳ ಸಮುದ್ರ ಗ್ರೀನ್‌ಫೀಲ್ಡ್ ಬಂದರಿನ ಅಭಿವೃದ್ಧಿ – ಸಾರ್ವಜನಿಕರ ಮಾಹಿತಿಗಾಗಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕೇಣಿಯಲ್ಲಿ ಗ್ರೀನ್ಫೀಲ್ಡ್ ಸರ್ವಋತು ಬಂದರು ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಸದರಿ ಬಂದರನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಡಿಯಲ್ಲಿ ಅಭಿವೃದ್ಧಿಪಡಿಸಲು ಕರ್ನಾಟಕ ಜಲಸಾರಿಗೆ ಮಂಡಳಿಯು ರಾಷ್ಟ್ರದ ಪ್ರತಿಷ್ಠಿತ ಬಂದರು ಉದ್ದಿಮೆದಾರರಾದ ಜೆಎಸ್ಡಬ್ಲ್ಯೂ ಕಂಪನಿಯೊoದಿಗೆ ಒಪ್ಪಂದವನ್ನು ಮಾಡಿಕೊಂಡಿದೆ.

ಯೋಜನೆಯ ಸಂಬ0ಧಿತ ಅಧ್ಯಯನಗಳನ್ನು ನಡೆಸಲಾಗಿದ್ದು, ಯೋಜನೆಯು ಕಾರ್ಯಸಾಧ್ಯವೆಂದು ಕಂಡುಬAದಿದೆ. ಯೋಜನೆಯನ್ನು ಮತ್ತಷ್ಟು ಮುಂದಕ್ಕೆ ಕೊಂಡೊಯ್ಯಲು, ಜಿಲ್ಲಾಧಿಕಾರಿಗಳು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆಗೆ ಸಾರ್ವಜನಿಕರು, ಜನಪ್ರತಿನಿಧಿಗಳು ಮತ್ತು ಯೋಜನೆಯಲ್ಲಿ ಹಿತಾಸಕ್ತಿ ಹೊಂದಿರುವವರ ಸಮ್ಮುಖದಲ್ಲಿ ಯೋಜನೆಯ ಬಗ್ಗೆ ಅಭಿಪ್ರಾಯ ಮತ್ತು ಸಲಹೆಗಳನ್ನು ಪಡೆಯಲು ಸಾರ್ವಜನಿಕ ಅಹವಾಲು ಸಭೆಯನ್ನು ನಡೆಸಲಾಗುವುದು. ಈ ಸಾರ್ವಜನಿಕ ಅಹವಾಲು ಸಭೆಯಲ್ಲಿ ಸ್ಥಳೀಯರು ಭಾಗವಹಿಸಿ, ಸಾಮಾಜಿಕ-ಪರಿಸರ ಸಮಸ್ಯೆಗಳು ಮತ್ತು ಅದರ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಲು ಅವಕಾಶವನ್ನು ನೀಡುತ್ತದೆ.

ಈ ಬಂದರು ಯೋಜನೆಯಿಂದ ಉತ್ತರ ಕನ್ನಡ, ಕರಾವಳಿ ಕರ್ನಾಟಕ, ಉತ್ತರ ಮತ್ತು ದಕ್ಷಿಣ ಕರ್ನಾಟಕದ ಹಿನ್ನಾಡಿನ ಪ್ರದೇಶಗಳ ಕೈಗಾರಿಕೆಗಳ ಅಗತ್ಯ ಸರಕುಗಳು, ಕೃಷಿ, ಮೀನುಗಾರಿಕಾ ಉತ್ಪನ್ನಗಳು ಹಾಗೂ ಇನ್ನಿತರ ಸರಕು ಸಾಗಾಣಿಕೆಗೆ ಸಹಾಯವಾಗುತ್ತದೆ. ಉತ್ಪಾದನೆ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಬಂದರನ್ನು ಸಂಪರ್ಕಿಸುವ ರಸ್ತೆಗಳು ರಾಷ್ಟ್ರೀಯ ಹೆದ್ದಾರಿಗಳೊಂದಿಗೆ ಉತ್ತಮವಾಗಿ ಸಂಯೋಜಿಸಲ್ಪಡುತ್ತವೆ, ಇದು ಸ್ಥಳೀಯ ನಿವಾಸಿಗಳಿಗೂ ಪ್ರಯೋಜನಕಾರಿಯಾಗಲಿದೆ.

ಈ ಕೇಣಿ ಬಂದರು ನಿರ್ಮಾಣದಿಂದ ಜನರ ಬಹುಕಾಲದ ಬೇಡಿಕೆಗಳಲ್ಲೊಂದಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಸಾಧ್ಯತೆಗೊಳಲು ಸಹಕಾರಿಯಾಗಲಿದೆ. ಇದರ ಜೊತೆಗೆ ಈ ಯೋಜನೆಯು ಅಂಕೋಲಾ ತಾಲ್ಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕ ಸಂಪರ್ಕದ ಉತ್ತೇಜನ, ಕೈಗಾರಿಕಾ, ಆರ್ಥಿಕ, ವಾಣಿಜ್ಯಾತ್ಮಕ ಅಭಿವೃದ್ಧಿಯಾಗುವುದರೊಂದಿಗೆ ವಿವಿಧ ಅವಕಾಶಗಳ ಮೂಲಕ ಜೀವನಮಟ್ಟವನ್ನು ಉನ್ನತಗೊಳಿಸುವ ಮಾರ್ಗವನ್ನು ಒದಗಿಸಲಿದೆ.

ಜೆಎಸ್ಡಬ್ಲ್ಯೂ ಕಂಪನಿಯು ಕೇಣಿ, ಬಾವಿಕೆರೆ, ಅಂಕೋಲಾ, ಅಲಗೇರಿ, ಶಿರಕುಳಿ, ಬೊಗ್ರಿಬೈಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರರು ಮತ್ತು ಸ್ಥಳೀಯ ಸಮುದಾಯಗಳ ಸರ್ವೋತೋಮುಖ ಅಭಿವೃದಿಗಾಗಿ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ಅಡಿಯಲ್ಲಿ ಶೈಕ್ಷಣಿಕ, ಸಮುದಾಯ ಆರೋಗ್ಯ, ಸ್ಥಳೀಯರು ಹಾಗೂ ಮೀನುಗಾರರ ಸಮುದಾಯದವರಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳು, ಕೌಶಲ್ಯ ಅಭಿವೃದ್ಧಿ, ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಇನ್ನಿತರ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಯೋಜಿಸಿದೆ. ಇದರಿಂದಾಗಿ ಈ ಪ್ರದೇಶದ ಅಭಿವೃದ್ಧಿ ಖಂಡಿತವಾಗಿ ನಿಶ್ಚಿತವಾಗಿದೆ.

ಕೇಣಿ ಬಂದರಿನ ನಿರ್ಮಾಣವು ನಗರೀಕರಣವನ್ನು ಉತ್ತೇಜಿಸುವುದರೊಂದಿಗೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಣಿಜ್ಯ, ಪ್ರವಾಸೋದ್ಯಮ, ಆತಿಥ್ಯ ಮತ್ತು ವಸತಿ ಅಭಿವೃದ್ಧಿ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಇದರಿಂದಾಗಿ ಈ ಪ್ರದೇಶದ ಆರ್ಥಿಕ, ವಾಣಿಜ್ಯಾತ್ಮಕ, ಕೈಗಾರಿಕಾ ಅಭಿವೃದ್ಧಿಯೊಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗುತ್ತದೆ. ಒಟ್ಟಾರೆ ಈ ಯೋಜನೆಯಿಂದ ಅಂಕೋಲಾ ತಾಲೂಕು ಮತ್ತು ಉತ್ತರ ಕನ್ನಡ ಜಿಲ್ಲೆಯ ಜನರ ಜೀವನ ಮಟ್ಟ ಖಂಡಿತವಾಗಿಯೂ ಸುಧಾರಿಸುತ್ತದೆ.

ಈ ಯೋಜನೆಯು ಕಾರ್ಯಗತಗೊಳ್ಳುವುದರಿಂದ ಸ್ಥಳೀಯರಿಗೆ ಅವರ ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ಹಲವಾರು ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ಒದಗುತ್ತವೆ ಮತ್ತು ಸಾಕಷ್ಟು ವ್ಯಾಪಾರ ಅವಕಾಶಗಳು ಸೃಷ್ಟಿಯಾಗುತ್ತವೆ. ಈ ಯೋಜನೆಯು ಉತ್ತರ ಕನ್ನಡ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ (ಗೇಮ್ ಚೇಂಜರ್) ಪೂರಕವಾಗಲಿದೆ ಎಂದು ನಾವು ನಿಮಗೆ ಭರವಸೆ ನೀಡುತ್ತೇವೆ.

ADVERTISEMENT

ಯೋಜನೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಕಂಪನಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ. ರೇಶ್ಮಾ ಉಳ್ಳಾಲ್ ಅವರನ್ನು ಮೊಬೈಲ್ ಸಂಖ್ಯೆ: 7411061555, reshma.ullal@jsw.in ನಲ್ಲಿ ಸಂಪರ್ಕಿಸಬಹುದು. ಈ ಯೋಜನೆಯ ವಿಸ್ತೃತ ಮಾಹಿತಿಗಳನ್ನು ಈ ಕೆಳಗಿನ ಸಾಮಾಜಿಕ ಜಾಲತಾಣಗಳಲ್ಲಿ (Social Media) ನೋಡಬಹುದು

ಯೋಜನಾ ಮುಖ್ಯಸ್ಥರು
JSW ಕೇಣಿ ಪೋರ್ಟ್ ಪ್ರೈವೇಟ್ ಲಿಮಿಟೆಡ್

Youtube www.youtube.com/@JSWKeniPortPrivateLimited

facebook: https://www.facebook.com/share/195xiQXxF6/

Advertisement. Scroll to continue reading.

instagram: https://www.instagram.com/jswkeniport/profilecard/?igsh=MXBnNTl1djR6bmhzbw==

ವಾಣಿಜ್ಯ ಬಂದರು ಕುರಿತಾಗಿ ಕಂಪನಿ ಬಿಡುಗಡೆ ಮಾಡಿದ ವಿಡಿಯೋ ಇಲ್ಲಿ ನೋಡಿ..

#sponsored

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಹಳ್ಳಿ ಹಳ್ಳಿಯಲ್ಲಿಯೂ ಮಿನಿ ಬಾರು: ಅಕ್ರಮ ಮದ್ಯ ಮಾರಾಟಗಾರರದ್ದೇ ಕಾರುಬಾರು!

Next Post

ವಕ್ಫ್ ತಿದ್ದುಪಡಿಗೆ ವಿರೋಧ: ನಮ್ದೂ ಒಂದು ಪ್ರತಿಭಟನೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋