ಕಾರವಾರದ ಸರ್ಕಾರಿ ಇಂಜಿನಿಯರಿoಗ್ ಕಾಲೇಜಿನ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದ ಅರ್ಪಿತಾ ಜಿ ಎ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ.
ಅರ್ಪಿತಾ ಜಿ ಎ ಅವರು ಸಾಧರಪಡಿಸಿದ `ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ಇಂಜಿನಿಯರಿoಗ್ ಸೈನ್ಸಸ್’ ವಿಭಾಗದ ಮಹಾಪ್ರಬಂಧವನ್ನು ಮನ್ನಿಸಿ ಈ ಪದವಿ ನೀಡಿದೆ. ಅರ್ಪಿತಾ ಅವರು ಕಾರವಾರದ ಸರ್ಕಾರಿ ಇಂಜಿನಿಯರಿoಗ್ ಕಾಲೇಜಿನ ಇ & ಸಿ ವಿಭಾಗದ ಪ್ರಾಧ್ಯಾಪಕ ಡಾ ಎ ಎಲ್ ಚೂಡಾರತ್ನಾಕರ ಅವರ ಮಾರ್ಗದರ್ಶನದಲ್ಲಿ Landslide Susceptibility Mapping for Kodagu Region using Machine Learning Techniques ವಿಷಯವಾಗಿ ಸಂಶೋಧನೆ ನಡೆಸಿದ್ದರು. ಕೊಡಗು ಜಿಲ್ಲೆಯ ಸಮಗ್ರ ಭೂಕುಸಿತ ಸಂವೇದನಾಶೀಲತೆಯ ನಕ್ಷೆಯನ್ನು ಅವರು ಅಭಿವೃದ್ಧಿಪಡಿಸಿದ್ದು, ಭೂ ಕುಸಿತ ದಾಸ್ತಾನು ನಕ್ಷೆಯನ್ನು ಸಂಗ್ರಹಿಸಿದ್ದರು. ಜೊತೆಗೆ ಹೆಚ್ಚಿನ ಸಂಶೋಧನೆ ಮತ್ತು ವಿಪತ್ತು ನಿರ್ವಹಣಾ ಪ್ರಯತ್ನಗಳನ್ನು ಬೆಂಬಲಿಸಲು ಸಂಶೋಧನಾ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ದತ್ತಾಂಶ ಸಿಗುವಂತೆ ಮಾಡಿದ್ದಾರೆ.
ಸದ್ಯ ಅರ್ಪಿತಾ ಜಿ ಎ ಅವರು ಪ್ರಸ್ತುತ ಉಜಿರೆಯ ಧರ್ಮಸ್ಥಳ ಮಂಜುನಾಥೇಶ್ವರ ತಂತ್ರಜ್ಞಾನ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಷನ್ ಇಂಜಿನಿಯರಿoಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿದ್ದಾರೆ. ಅರ್ಪಿತಾ ಅವರು ಭಾರತೀಯ ವಾಯುಪಡೆಯಲ್ಲಿ ಸೇವೆ ನಿರ್ವಹಿಸುತ್ತಿರುವ ಯಶವಂತ್ ಪಿ ಜಿ ಅವರ ಪತ್ನಿ. ಜೊತೆಗೆ BSNL ನಿವೃತ್ತ ಉದ್ಯೋಗಿ ಜಿ ಎನ್ ಅಚಯ್ಯ ಹಾಗೂ ನಿವೃತ್ತ ಶಿಕ್ಷಕಿ ವೇದಾವತಿ ಅವರ ಪುತ್ರಿ. ಅರ್ಚನಾ ಅವರ ಸಾಧನೆ ನೋಡಿ ಕಾರವಾರದ ಸರ್ಕಾರಿ ಇಂಜಿನಿಯರಿ0ಗ್ ಕಾಲೇಜಿನ ಪ್ರಾಚಾರ್ಯೆ ಡಾ ಶಾಂತಲಾ ಬಿ ಹರ್ಷವ್ಯಕ್ತಪಡಿಸಿದರು.
Discussion about this post