ಭೂ ಕುಸಿತದ ಕಾರಣದಿಂದ ಸಂಚಾರ ನಿಷೇಧಿಸಿದ ರಸ್ತೆಗೆ ನುಗ್ಗಲು ಯತ್ನಿಸಿದ ವಾಹನವೊಂದನ್ನು ಪೊಲೀಸರು ಅಡ್ಡಗಟ್ಟಿದ್ದು, ಆ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿರುವುದು ಗೊತ್ತಾಗಿದೆ. ಬೆಳಗಾವಿಯಿಂದ ಗೋವಾ ಕಡೆ ಅಕ್ರಮವಾಗಿ ರಪ್ತಾಗುತ್ತಿದ್ದ ಗೋಮಾಂಸವನ್ನು ಜೊಯಿಡಾ ರಾಮನಗರ ಪೊಲೀಸರು ತಡೆದಿದ್ದಾರೆ.
ಜುಲೈ 7ರಂದು ರಾಮನಗರ ಪೊಲೀಸ್ ಠಾಣೆಯ ಪಿಎಸ್ಐ ಉದಯ ನಾಯಕ ಅವರು ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಗಸ್ತು ತಿರುಗುತ್ತಿದ್ದರು. ರಾಮನಗರದ ಶಿವಾಜಿ ಸರ್ಕಲ್’ನಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ರಾಜಪ್ಪ ದೊಡ್ಡಮನಿ ಅವರು ಬೆಳಗಾವಿ ಕಡೆಯಿಂದ ಬಂದ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ಆದರೆ, ಆ ವಾಹನ ಚಾಲಕ ಗಾಡಿ ನಿಲ್ಲಿಸದೇ ವೇಗವಾಗಿ ಆನಮೋಡು ಕಡೆ ಹೊರಟಿದ್ದು, ಈ ವಿಷಯವನ್ನು ರಾಜಪ್ಪ ದೊಡ್ಡಮನಿ ಅವರು ಮೇಲಧಿಕಾರಿಗಳ ಗಮನಕ್ಕೆ ತಂದರು.
ರಾಮನಗರದ ಜಾಮಿಯಾ ಮಸೀದಿ ಬಳಿ ಪಿಎಸ್ಐ ಉದಯ ನಾಯಕ ಅವರು ಆ ಗಾಡಿಯನ್ನು ಅಡ್ಡಗಟ್ಟಿದರು. ಆಗ ವಾಹನ ಚಾಲಕ ಸಿದ್ದಪ್ಪ ಬುದ್ನೂರು ಹಾಗೂ ಕ್ಲೀನರ್ ರಾಜು ನಾಯ್ಕ ಗೋಮಾಂಸವಿರುವುದನ್ನು ಒಪ್ಪಿಕೊಂಡರು. ಒಟ್ಟು 6.75 ಲಕ್ಷ ರೂ ಮೌಲ್ಯದ ಗೋಮಾಂಸ ಆ ವಾಹನದ ಮೂಲಕ ರವಾನೆಯಾಗುತ್ತಿತ್ತು. ಬೆಳಗಾವಿಯ ಅಮೂಲ್ ಮೋಹನದಾಸ್ ಅವರು ಈ ಅಕ್ರಮ ಸಾಗಾಟದ ರೂವಾರಿಯಾಗಿದ್ದರು.
1930 ಕೆಜಿ ಗೋಮಾಂಸ ವಶಕ್ಕೆಪಡೆದ ಪೊಲೀಸರು ಚಾಲಕ, ಕ್ಲೀನರ್ ಜೊತೆ ಅಮೂಲ್ ಮೋಹನದಾಸ್ ವಿರುದ್ಧ ಪ್ರಕರಣ ದಾಖಲಿಸಿದರು.
Discussion about this post