• Latest
Kannada Kalarava in the Frontier Honored with awards for meritorious children

ಗಡಿನಾಡಿನಲ್ಲಿ ಕನ್ನಡ ಕಲರವ: ಸಾಧಕ ಮಕ್ಕಳಿಗೆ ಪುರಸ್ಕಾರದ ಗೌರವ

3 weeks ago
Prediction for July 23 2025

2025ರ ಅಗಷ್ಟ 4ರ ದಿನ ಭವಿಷ್ಯ

8 hours ago

ಗೌಂಡಿ ಜೊತೆ ಸೇರಿ ಹೊಟೇಲ್ ಕಾರ್ಮಿಕ ಮಾಡಿದ್ದು ಗಾಂಜಾ ವ್ಯಾಪಾರ!

8 hours ago
ADVERTISEMENT

ಬೆಂಗಳೂರಿಗೆ ಹೋಗಿದ್ದ ಪತ್ನಿ: ಮರಳಿ ಬರುವಷ್ಟರಲ್ಲಿ ಶವವಾಗಿದ್ದ ಪತಿ!

8 hours ago
ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

ಜನೌಷಧಿ ಕೇಂದ್ರದಲ್ಲಿ ಖಾಸಗಿ ಕಂಪನಿ ಗುಳಗೆ ಮಾರಾಟ!

9 hours ago
Evil bear breaks into human home The forest is not enough for this wildlife to do that!

ಮಾನವನ ಮನೆಗೆ ನುಗ್ಗಿದ ದುಷ್ಟ ಕರಡಿ: ಈ ವನ್ಯಜೀವಿಗೆ ಆ ಕೆಲಸ ಮಾಡಲು ಕಾಡು ಸಾಕಾಗಿಲ್ಲ!

9 hours ago
ADVERTISEMENT
Monday, August 4, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಗಡಿನಾಡಿನಲ್ಲಿ ಕನ್ನಡ ಕಲರವ: ಸಾಧಕ ಮಕ್ಕಳಿಗೆ ಪುರಸ್ಕಾರದ ಗೌರವ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Kannada Kalarava in the Frontier Honored with awards for meritorious children
Advertisement is not enabled. Advertisement is not enabled. Advertisement is not enabled.
ADVERTISEMENT

ಕನ್ನಡ ನಾಡು, ನುಡಿ ವಿಷಯವಾಗಿ ಶ್ರಮಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತು ಕಾರವಾರದಲ್ಲಿ ಕನ್ನಡ ಕಲರವ ಮೊಳಗಿಸಿದೆ. ಜೊತೆಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ವೇದಿಕೆಗೆ ಕರೆದು ಪುರಸ್ಕರಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮತ್ತು ಕಾರವಾರ ತಾಲೂಕು ಘಟಕದಿಂದ ಭಾನುವಾರ ಕಾರವಾರ ನಗರದ ಹಿಂದೂ ಪ್ರೌಢಶಾಲೆ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಅಧ್ಯಕ್ಷ ರವಿರಾಜ್ ಅಂಕೋಲೆಕರ್ ‘ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಪ್ರೌಢಶಾಲೆ ಹಂತದಲ್ಲೇ ಪ್ರಯತ್ನ ಆರಂಭಿಸಬೇಕು. ಕನ್ನಡ ಕಲಿಕೆಯನ್ನು ಎಂದಿಗೂ ಕೈಬಿಡಬಾರದು’ ಎಂದು ಕರೆ ನೀಡಿದರು. ಮಕ್ಕಳ ಮೊಬೈಲ್ ಬಳಕೆ ಹಾಗೂ ಅದರ ಅಪಾಯಗಳ ಬಗ್ಗೆ ಅವರು ಪಾಲಕರಿಗೆ ಮನವರಿಕೆ ಮಾಡಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ನಾಯ್ಕ ಮಾತನಾಡಿ `ಎಷ್ಟೇ ಉನ್ನತ ಹುದ್ದೆಗೆ ಏರಿದರೂ ಮಾತೃಭಾಷೆ ಮರೆಯಬಾರದು. ನಾಡಭಾಷೆಯ ಜೊತೆಗೆ ಹಿಂದಿ, ಇಂಗ್ಲಿಷ್ ಕಲಿಕೆಗೆ ಅವಕಾಶಗಳಿವೆ’ ಎಂದರು. ಕಸಾಪ ತಾಲೂಕು ಘಟಕದ ಅಧ್ಯಕ್ಷ ರಾಮಾ ನಾಯ್ಕ `ರಾಜ್ಯದ ಗಡಿಭಾಗದಲ್ಲಿ ಕನ್ನಡ ಭಾಷೆಯ ಕಲಿಕೆಯನ್ನು ಪರಿಣಾಮಕಾರಿಯನ್ನಾಗಿಸಲು ಶಿಕ್ಷಕರ ಪ್ರಯತ್ನ ಅಗತ್ಯ’ ಎಂದರು. ಸಾಹಿತಿ ಶ್ರೀದೇವಿ ಕೆರೆಮನೆ ಮಾತನಾಡಿ `ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಸ್ಪರ್ಧಾತ್ಮಕ ಪ್ರಪಂಚಕ್ಕೆ ಕೊಂಡಯ್ಯೊವ ನಿಟ್ಟಿನಲ್ಲಿ ಶ್ರಮಿಸಬೇಕು’ ಎಂದರು. ಕಸಾಪ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಜಾರ್ಜ ಫರ್ನಾಂಡಿಸ್ `ಕನ್ನಡ ಭಾಷೆಗೆ ಹೆಚ್ಚಿನ ಕೃತಿಗಳು ಬರಬೇಕು. ಅದರ ಪ್ರಕಟಣೆಗೆ ನಮ್ಮ ಸಹಕಾರ ನಿರಂತರ’ ಎಂದರು.

ಗೌರವಾನ್ವಿತ ಅತಿಥಿಗಳಾದ್ದ ಪ್ರೇಮಾ ಡಿ ಎಮ್ ಆರ್ `ಕನ್ನಡ ಸಾಹಿತ್ಯ ಪರಿಷತ್ತಿನ ಮಹತ್ವಾಕಾಂಕ್ಷೆಯ ನೋಟವು ನನ್ನನ್ನು ಬೆರಗುಗೊಳಿಸಿದೆ’ ಎಂದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಜೈರಂಗನಾಥ ಮಾತನಾಡಿದರು. ಅಧ್ಯಕ್ಷತೆವಹಿಸಿದ್ದ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ ಎನ್ ವಾಸರೆ `ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ನೂರಕ್ಕೆ ನೂರರಷ್ಟು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಕನ್ನಡದ ಬೀಜ ಬಿತ್ತುವ ಪ್ರಯತ್ನ ನಡೆದಿದೆ. ಈ ಕಾರ್ಯಕ್ರಮಕ್ಕೆ ದಾನಿಗಳ ಸಹಕಾರ ಅತಿದೊಡ್ಡದು’ ಎಂದರು. ಈ ವರ್ಷ 825 ವಿದ್ಯಾರ್ಥಿಗಳನ್ನು ಗೌರವಿಸುವುದಾಗಿ ಘೋಷಿಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT

Kannada Kalarava in the Frontier Honored with awards for meritorious childrenಸಾಧನೆ ಮಾಡಿದ 41 ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಗೌರವಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲಕು ಘಟಕದ ಅಧ್ಯಕ್ಷ ಆರ್ ಪಿ ಗೌಡ, ಕಸಾಪ ಪದಾಧಿಕಾರಿಗಳಾದ ಜಿ ಡಿ ಮನೋಜೆ, ತಾಲೂಕು ಘಟಕ ಗೌರವ ಕಾರ್ಯದರ್ಶಿ ಬಾಬು ಶೇಖ್, ಜೋಯಿಡಾ ತಾಲ್ಲಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಯಶ್ವಂತ ನಾಯ್ಕ, ಜೋಯಿಡಾ ಕಸಾಪ ಅಧ್ಯಕ್ಷ ಪಾಂಡುರoಗ ಪಟಗಾರ ಇದ್ದರು. ಈ ಸಮಾರಂಭದಲ್ಲಿ ಹಿರಿಯ ಸಾಹಿತಿ ಜಿ ಡಿಪಾಲೇಕರ, ಕೆಯುಡಿ ಸಿಂಡಿಕೇಟ್ ಸದಸ್ಯರಾದ ಶಿವಾನಂದ ನಾಯಕ, ಹಿರಿಯರಾದ ಕೆ ಡಿ ಪೆಡ್ನೇಕರ, ದೇವಿದಾಸ ನಾಯ್ಕ ಇತರರು ಹಾಜರಿದ್ದರು.

Kannada Kalarava in the Frontier Honored with awards for meritorious childrenಹಿಂದು ಪ್ರೌಢಶಾಲಾ ಶಿಕ್ಷಕಿ ವನಿತಾ ಶೇಟ ಪ್ರಾರ್ಥಿಸಿದರು. ಕಸಾಪ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ ಬಿಷ್ಠಣ್ಣನವರ್ ನಿರ್ವಹಿಸಿದರು. ಕಸಾಪ ಕೋಶಾಧ್ಯಕ್ಷ ಶಿವಾನಂದ ತಾಂಡೇಲ ವಂದಿಸಿದರು. ಕಸಾಪ ಪದಾಧಿಕಾರಿಗಳಾದ ರಮೇಶ್ ಗುನಗಿ, ಎನ್ ಜಿ ನಾಯ್ಕ, ಜ್ಞಾನೇಶ್ವರ ಗುನಗಿ, ನಾಗೇಂದ್ರ ಅಂಚೇಕರ, ಮಚ್ಚೇಂದ್ರ ಮಹಾಲೆ, ಸೂರಜ ಕುರಮಕರ, ವಿದ್ಯಾನಾಯ್ಕ, ಮಿಲನ ನಾಯ್ಕ, ನಿವೇದಿತಾ ಕೊಳಂಬಕರ, ಖೈರುನ್ನಿಸಾ ಶೇಖ, ದಿವ್ಯಾ ದೇವಿದಾಸ ನಾಯ್ಕ ಸಂಘಟನೆಗೆ ಸಹಕರಿಸಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ವಿವಾಹ ವಾರ್ಷಿಕೋತ್ಸವ: ಶುಭಾಶಯ ಹೇಳಿದ ಪತ್ನಿ.. ಮನೆ ಬಿಟ್ಟು ಹೋದ ಪತಿ!

Next Post

ಉತ್ತರ ಕನ್ನಡ ಅಭಿವೃದ್ಧಿಗೆ ರೈಲ್ವೆ ಯೋಜನೆ: ಕಾರ್ಯಾಗಾರಕ್ಕೆ ಬರಲು ಒಪ್ಪಿದ ಸಚಿವ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋