• Latest
A wild man under house arrest is reborn!

ಗೃಹಬಂಧನದಲ್ಲಿದ್ದ ಕಾಡು ಮನುಷ್ಯನಿಗೆ ಪುನರ್ಜನ್ಮ!

3 weeks ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

50 minutes ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

1 hour ago
ADVERTISEMENT

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

2 hours ago

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

2 hours ago
Kaiga Nuclear Power Plant which has given 20 crores for wildlife protection How many employees are there How much electricity has been generated so far

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

2 hours ago
ADVERTISEMENT
Tuesday, August 5, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಗೃಹಬಂಧನದಲ್ಲಿದ್ದ ಕಾಡು ಮನುಷ್ಯನಿಗೆ ಪುನರ್ಜನ್ಮ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
A wild man under house arrest is reborn!
Advertisement is not enabled. Advertisement is not enabled. Advertisement is not enabled.
ADVERTISEMENT

ದಟ್ಟ ಕಾಡಿನ ನಡುವೆ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಅನೇಕ ವರ್ಷಗಳಿಂದ ಗೃಹ ಬಂಧನದಲ್ಲಿದ್ದ ವಿನಾಯಕ ಸೋನಶೇಟ್ ಎಂಬಾತರಿಗೆ ಮಂಗಳವಾರ ಈ ಬಂಧನದಿ0ದ ಬಿಡುಗಡೆಯಾಗಿದೆ. ಅಂಚೆ ಇಲಾಖೆ ನೌಕರರಾಗಿದ್ದ ವಿನಾಯಕ ಅವರನ್ನು ಮಾನಸಿಕ ಅಸ್ವಸ್ಥ ಎಂದು ಹಣೆಪಟ್ಟಿ ಕಟ್ಟಿ ಅವರ ಕುಟುಂಬದವರೇ ಕೂಡಿ ಹಾಕಿದ್ದರು.

10 ವರ್ಷಗಳ ಹಿಂದೆ ದಾಂಡೇಲಿಯ ಆಲೂರಿನಲ್ಲಿ ಕಬ್ಬಿನಗದ್ದೆಗೆ ಬೆಂಕಿ ಬಿದ್ದಿತ್ತು. ಗದ್ದೆಗೆ ಬೆಂಕಿ ಹಚ್ಚಿದ ಆರೋಪ ವಿನಾಯಕ ಸೋನಶೇಟ್ ಅವರ ಮೇಲಿದ್ದು, ಆ ದಿನದಿಂದಲೇ ಅವರ ಕಾಲಿಗೆ ಸರಪಳಿ ಬಿಗಿದು ಕೋಣೆಯಲ್ಲಿ ಕೂಡಿಹಾಕಲಾಗಿತ್ತು. ಸರಿಸುಮಾರು 25 ಎಕರೆ ಭೂಮಿಯಿದ್ದರೂ ಅದನ್ನು ಅನುಭವಿಸುವ ಯೋಗ ವಿನಾಯಕ ಅವರ ಪಾಲಿಗಿರಲಿಲ್ಲ. ಕೋಣೆಯಲ್ಲಿ ಕೂಡಿಹಾಕಿದ್ದರಿಂದಲೇ ಅವರು ಮಾನಸಿಕವಾಗಿ ಕುಗ್ಗಿದ್ದರು.

ADVERTISEMENT

ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ವಿನಾಯಕ ಸೋನಶೇಟ್ ಜೀವಿಸುತ್ತಿದ್ದು, ಕಾರವಾರದ ಜನಶಕ್ತಿ ವೇದಿಕೆಯವರಿಗೆ ಈ ವಿಷಯ ತಲುಪಿತು. ಪೊಲೀಸ್, ಆರೋಗ್ಯ ಇಲಾಖೆ, ತಾಲೂಕು ಆಡಳಿತ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿದ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಬಂಧನದಲ್ಲಿದ್ದ ವಿನಾಯಕ ಸೋನಶೇಟ್ ಅವರನ್ನು ಬಿಡುಗಡೆ ಮಾಡಿದರು. ಅವರಿಗೆ ತುರ್ತಾಗಿ ವೈದ್ಯಕೀಯ ಸೇವೆಯನ್ನು ಒದಗಿಸಿದರು.

ಆಲೂರಿನ ಕಬ್ಬಿನಗದ್ದೆಯೊಳಗೆ ರಾಡಿ ನೀರಿನಲ್ಲಿ ಸಂಚರಿಸಿದ ರಕ್ಷಣಾ ಘಟಕದವರು ಮೊದಲು ದನದ ಕೊಟ್ಟಿಗೆ ಪ್ರವೇಶಿಸಿದರು. ಆಗ, ಅಲ್ಲಿ ವಾಸಕ್ಕೆ ಯೋಗ್ಯವಿಲ್ಲದ ಕಟ್ಟಡದಲ್ಲಿನ ಕಿಟಕಿಗೆ ಸರಪಳಿ ಬಿಗಿದು ವಿನಾಯಕ ಸೋನಶೇಟ್ ಅವರನ್ನು ಕಟ್ಟಿ ಹಾಕಿರುವುದು ಕಾಣಿಸಿತು. ಪೇಂಟಿ0ಗ್ ಡಬ್ಬಿಯಲ್ಲಿ ವಿನಾಯಕ ಸೋನಶೇಟ್ ಅವರಿಗೆ ಕುಡಿಯಲು ನೀರಿಟ್ಟಿದ್ದು, ಸ್ನಾನ-ಶೌಚಕ್ಕೂ ಅದೇ ನೀರು ಬಳಸುವ ಷರತ್ತು ವಿಧಿಸಲಾಗಿತ್ತು. ಮಲಗಲು ಹಾಸಿಗೆ-ದಿಂಬು ಸಹ ಇರಲಿಲ್ಲ. ದಿನಕ್ಕೆ ಒಂದು ಹೊತ್ತಿನ ಊಟ ಮಾತ್ರ ನೀಡುತ್ತಿರುವುದು ಗಮನಕ್ಕೆ ಬಂದಿತು.

Advertisement. Scroll to continue reading.
Advertisement. Scroll to continue reading.
ADVERTISEMENT

ಪ್ರಾಣಿಗಳು ಸಹ ಬದುಕಲು ಸಾಧ್ಯವಾಗದ ಸ್ಥಿತಿಯಲ್ಲಿ 37 ವರ್ಷದ ವಿನಾಯಕ ಶೇಟ್ ಕಳೆದ 10 ವರ್ಷಗಳಿಂದ ವಾಸವಾಗಿರುವುದನ್ನು ನೋಡಿ ಅಲ್ಲಿದ್ದವರು ಅಚ್ಚರಿಗೆ ಒಳಗಾದರು. ರೆಡ್ ಕ್ರಾಸಿನ ರಾಮ ನಾಯ್ಕ, ಬಾಬು ಶೇಖ್, ದಾಂಡೇಲಿ ಪಿಎಸ್‌ಐ ಅಮೀನ್ ಅತ್ತಾರ್, ಎಎಸ್‌ಐ ಸುರೇಶ್, ವೈದ್ಯಾಧಿಕಾರಿ ಡಾ ಅನೀಲಕುಮಾರ ನಾಯ್ಕ, ಆರೋಗ್ಯ ನಿರೀಕ್ಷಕ ಗೋಪಿ ಚೌವ್ಹಾಣ್ ಜೊತೆ ಇನ್ನೂ ಅನೇಕರು ಕಾರ್ಯಾಚರಣೆ ನಡೆಸಿ ವಿನಾಯಕ ಸೋನಶೇಟ್ ಅವರನ್ನು ಬಿಡುಗಡೆ ಮಾಡಿದರು. ಸದ್ಯ ಅವರಿಗೆ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗಿದ್ದು, ಕುಟುಂಬದವರಿಗೆ ಸಹ ಮನವರಿಕೆ ಮಾಡಲಾಗಿದೆ.

 

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಪದೇ ಪದೇ ಅಪಘಾತ: ಹೈಕೋರ್ಟ ಅಂಗಳದಲ್ಲಿ ಅಘನಾಶಿನಿ ರಸ್ತೆ!

Next Post

ಕಳಚೆ: ಭೂ ಕುಸಿತ ಪ್ರದೇಶದವರಿಗೆ ಪುನರ್ವಸತಿಯ ನಿರೀಕ್ಷೆ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋