• Latest
ಅನಂತರ ಹೆಸರು ಅಜರಾಮರ: ಅನ್ನ-ಅಕ್ಷರ-ಆರೋಗ್ಯದ ರೂವಾರಿ ಈ ಅದಮ್ಯ ಚೈತನ್ಯದ ಅನ್ನಪೂರ್ಣೇಶ್ವರಿ!

ಅನಂತರ ಹೆಸರು ಅಜರಾಮರ: ಅನ್ನ-ಅಕ್ಷರ-ಆರೋಗ್ಯದ ರೂವಾರಿ ಈ ಅದಮ್ಯ ಚೈತನ್ಯದ ಅನ್ನಪೂರ್ಣೇಶ್ವರಿ!

4 days ago
GST harassment Tough rules make life difficult for entrepreneurs!

GSTಕಿರುಕುಳ: ಕಠಿಣ ನಿಯಮದಿಂದ ಉದ್ಯಮಿಯ ಬದುಕು ದುಸ್ತರ!

15 hours ago
Prediction for June 29 2025

2025ರ ಜುಲೈ 21ರ ದಿನ ಭವಿಷ್ಯ

15 hours ago
ADVERTISEMENT

ಕೂಡಿಟ್ಟ ಅಡಿಕೆ ಕಳ್ಳರ ಪಾಲು

16 hours ago
Fair irregularities BJP's own trickery!

ಜಾತ್ರೆ ಅವ್ಯವಹಾರ: ಬಿಜೆಪಿಗರಿಂದಲೇ ಕುತಂತ್ರ!

16 hours ago

ಕಳ್ಳತನದಕ್ಕೆ ಅಡ್ಡಿಯಾದ ಬೆಳಕು: ಬೀದಿ ದೀಪವೇ ಕಾಣೆ!

16 hours ago
Monday, July 21, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಅನಂತರ ಹೆಸರು ಅಜರಾಮರ: ಅನ್ನ-ಅಕ್ಷರ-ಆರೋಗ್ಯದ ರೂವಾರಿ ಈ ಅದಮ್ಯ ಚೈತನ್ಯದ ಅನ್ನಪೂರ್ಣೇಶ್ವರಿ!

ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ಕುಮಟಾದಲ್ಲಿ ಅದಮ್ಯ ಚೈತನ್ಯದ 'ಪ್ಲೇಟ್ ಬ್ಯಾಂಕ್' ಇದೆ. ಪರಿಸರ‌ ಉಳಿಸುವ ಪರಿಕಲ್ಪನೆಯಲ್ಲಿ ನಾವು-ನೀವು ಸಹ ಈ ಬ್ಯಾಂಕ್ ಸ್ಥಾಪಿಸಲು ಸಾಧ್ಯ. ಡಾ ತೇಜಸ್ವಿನಿ ಅವರ ಸಹಕಾರ ಇಲ್ಲಿ ನಿರಂತರ

Achyutkumarby Achyutkumar
in ಲೇಖನ
Advertisement is not enabled. Advertisement is not enabled. Advertisement is not enabled.
ADVERTISEMENT

ಶ್ರಾದ್ದದ ದಿನ ಸಾವಿರಾರು ಬಡವರಿಗೆ ಊಟ ಬಡಿಸಲಾಯಿತು. ಅಲ್ಲಿ ನೆರೆದಿದ್ದವರು ನಾಳೆಯೂ ಇದೆಯಾ? ಎಂದು ಪ್ರಶ್ನಿಸಿದರು. ಮರುದಿನ ಶ್ರಾದ್ಧ ಇರಲಿಲ್ಲ. ಆದರೆ, ಊಟ ಇಲ್ಲ ಎನ್ನಲು ಯಾರಿಗೂ ಮನಸ್ಸು ಬರಲಿಲ್ಲ…

Advertisement. Scroll to continue reading.
ADVERTISEMENT

ಹೀಗಾಗಿಯೇ ಕಳೆದ ಐದು ವರ್ಷಗಳಿಂದ ‘ಅದಮ್ಯ ಚೈತನ್ಯ’ ಹಸಿದ ಹೊಟ್ಟೆಗಳಿಗೆ ಉಚಿತ ಊಟ ನೀಡುತ್ತಿದೆ. ನಿತ್ಯ ಸರಿಸುಮಾರು 50ಸಾವಿರ ಜನ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಅವರ ನೆನಪಿನ ಅಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಶುಚಿ-ಋಚಿ ಜೊತೆ ಸಾತ್ವಿಕ ಬೋಜನ ಇಲ್ಲಿನ ವಿಶೇಷ. ಅನ್ನ, ಅಕ್ಷರ, ಆರೋಗ್ಯದ ಜೊತೆ ಪರಿಸರ ಸಂರಕ್ಷಣೆಗಾಗಿ ಬೆಂಗಳೂರಿನ ‘ಅದಮ್ಯ ಚೈತನ್ಯ’ ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಮಾಜಿ ಸಚಿವ ಅನಂತಕುಮಾರ ಅವರ ಪತ್ನಿ ತೇಜಸ್ವಿನಿ ಅವರು ಅದಮ್ಯ ಚೈತನ್ಯದ ರೂವಾರಿ.

ADVERTISEMENT

ಬೆಂಗಳೂರಿನ ಗವಿಪುರಕ್ಕೆ ಹೋದರೆ ಅಲ್ಲಿ ಡಾ ತೇಜಸ್ವಿನಿ ಎಂಬ ಅನ್ನಪೂರ್ಣೇಶ್ವರಿ ಮಾತಿಗೆ ಸಿಗುತ್ತಾರೆ. ಬ್ಯಾಗಿನಲ್ಲಿ ಊಟದ ತಟ್ಟೆ, ಲೋಟದ ಜೊತೆ ಓಡಾಡುವ ಅವರು ಎಲ್ಲಿ ಹೋದರೂ ತಮ್ಮ ಊಟಕ್ಕೆ ಅದನ್ನೇ ಬಳಸುತ್ತಾರೆ.‌ ಈ ಬಗ್ಗೆ ಕುತೂಹಲದಿಂದ ಕೇಳಿದಾಗ ಪರಿಸರದ‌ ಮೇಲಿನ ಒತ್ತಡ ತಡೆಗೆ ಈ ವಿಧಾನ ಅನುಸಿರುತ್ತಿರುವ ಬಗ್ಗೆ ಅರಿವಾಯಿತು. ‘ಪ್ಲಾಸ್ಟಿಕ್ ಹಾಗೂ ಕಾಗದದ ತಟ್ಟೆ ಊಟದ ಬದಲು ಸ್ಟೀಲ್ ಬಳಕೆ ಮಾಡಬೇಕು. ಈ ಒಂದು ಸಣ್ಣ ಬದಲಾವಣೆ ದೊಡ್ಡ ಪರಿಣಾಮ ತರಲಿದೆ’ ಎಂದವರು ಆತ್ಮವಿಶ್ವಾಸದಿಂದ ಮಾತನಾಡಿದರು. ಇದೇ ನಿಲುವಿನ ಅಡಿ ತೇಜಸ್ವಿನಿ ಅವರು 26 ಪ್ಲೇಟ್ ಬ್ಯಾಂಕ್ ಸ್ಥಾಪನೆ ಮಾಡಿದ್ದಾರೆ. ಯಾವುದೇ ಸಭೆ-ಸಮಾರಂಬಗಳ ಊಟಕ್ಕಾಗಿ ಇಲ್ಲಿಂದ ಉಚಿತವಾಗಿ ತಟ್ಟೆ-ಲೋಟ-ಚಮಚಪಡೆಯಬಹುದು. ‘ಅದನ್ನು ಶುಚಿಯಾಗಿ ಬಳಸಬೇಕು. ಶುಚಿಯಾಗಿ ಮರಳಿಸಬೇಕು’ ಎಂಬುದು‌ ಮಾತ್ರ ಇಲ್ಲಿನ ನಿಯಮ. ನಿಮ್ಮೂರಿನ ಶಾಲೆ-ದೇವಾಲಯಗಳಲ್ಲಿಯೂ ಪ್ಲೇಟ್ ಬ್ಯಾಂಕ್ ಸ್ಥಾಪನೆಗೆ ಯೋಚಿಸುತ್ತಿದ್ದರೆ ಅದಕ್ಕೆ ಅದಮ್ಯ ಚೈತನ್ಯದ ಬೆಂಬಲ ಸಿಗುತ್ತದೆ. ಈ ಎಲ್ಲಾ ವಿಷಯ ಮಾತನಾಡುವ ವೇಳೆ ಊಟ ಮುಗಿದಿದ್ದು, ತೇಜಸ್ವಿನಿ ಅವರು ತಾವು ಊಟ ಮಾಡಿದ ತಟ್ಟೆ-ಲೋಟ ತೊಳೆದು ಬ್ಯಾಗಿನೊಳಗೆ ಹಾಕಿಕೊಂಡರು.

Advertisement. Scroll to continue reading.
ADVERTISEMENT

ಕಸವೇ ಕಾಣದ ಅಡುಗೆಮನೆ!
ಒಂದು ಲಕ್ಷ ಜನರಿಗೆ ಅಡುಗೆ ಸಾಮರ್ಥ್ಯ ಹೊಂದಿರುವ ಅದಮ್ಯ ಚೈತನ್ಯದ ಅಡುಗೆ ಮನೆಯಲ್ಲಿ ಕಸದ ಬುಟ್ಟಿಯೇ ಇಲ್ಲ. ಕಾರಣ ಅಲ್ಲಿನ ಕಸವನ್ನು ಸಹ ಸಂಪೂರ್ಣವಾಗಿ ಮರುಬಳಕೆ ಮಾಡಲಾಗುತ್ತದೆ. ಅಡುಗೆ ಮಾಡಲು ಗ್ಯಾಸ್, ಡಿಸೇಲ್ ಬದಲು ಒಣಕಸ ಒಟ್ಟುಗೂಡಿಸಿ ನಿರ್ಮಿಸಿದ ಬ್ರಿಕೆಟ್ಸ ಬಳಸಲಾಗುತ್ತದೆ. ಬ್ರಿಕೆಟ್ಸ ಸುಟ್ಟಾಗ ಬರುವ ಬೂದಿಯನ್ನು ಸಹ ಗಿಡಕ್ಕೆ ಗೊಬ್ಬರವಾಗಿ ಬಳಸಲಾಗುತ್ತದೆ. ಅದಮ್ಯ ಚೈತನ್ಯದಿಂದ ‘ಹಸಿರು ಭಾನುವಾರ’ ಎಂಬ ಅಭಿಯಾನದ ಅಡಿ ಪ್ರತಿ ಭಾನುವಾರ ಗಿಡ ನೆಡುವ ಕಾರ್ಯಕ್ರಮ ನಡೆಯುತ್ತಿದ್ದು, ನಿತ್ಯದ ಊಟಕ್ಕಾಗಿ ಅಕ್ಕಿ ತೊಳೆದ ಪೌಷ್ಟಿಕ ನೀರನ್ನು ಆ ಗಿಡಗಳಿಗೆ ಉಣಿಸಲಾಗುತ್ತದೆ. ಇದರಿಂದ ಅನಂತರ ಹೆಸರು ಅಜರಾ’ಮರ’ವಾಗಿ ಬೆಳೆಯುತ್ತಿದೆ.

ಬೆಂಗಳೂರಿನಲ್ಲಿ ಶುರುವಾದ ಅನ್ನದಾನದ ಯೋಜನೆ ಹುಬ್ಬಳ್ಳಿ-ಕಲಬುರ್ಗಿಗೂ ವಿಸ್ತರಿಸಿದೆ. ಕೋವಿಡ್ ಅವಧಿಯಲ್ಲಿಯೂ ಅನ್ನದಾನಕ್ಕೆ ರಜೆ ನೀಡಿಲ್ಲ. ಜೋದಪುರ, ಅಯೋಧ್ಯದಲ್ಲಿ ಸಹ ಅನ್ನದಾನ ಸೇವೆ ಶುರುವಾಗಲಿದೆ. ಪ್ರತಿ ದಿನ ಬೇರೆ ಬೇರೆ ವಿಧಾನದ ಮಸಾಲ ಬಳಸಿ ಬಗೆ ಬಗೆಯ ಖಾದ್ಯ ತಯಾರಿಕೆ ಇಲ್ಲಿನ ವಿಶೇಷ. ಬಳಸಿ ಬಿಸಾಡುವ ತೆಂಗಿನ ಚಿಪ್ಪನ್ನು‌ ಸಹ ಮಸಾಲೆ ಹೊರಿಯಲು ಬಳಸಲಾಗುತ್ತದೆ. ಕನಿಷ್ಟ 2500ರೂ ದೇಣಿಗೆ ನೀಡಿದರೆ ನೀವು ಸಹ ಅನ್ನದಾನದ ಪುಣ್ಯಕಾರ್ಯದಲ್ಲಿ ಕೈ ಜೋಡಿಸಲು ಸಾಧ್ಯ.

135 ಜನ ಅಡುಗೆ ಸಿಬ್ಬಂದಿ ಇಲ್ಲಿದ್ದಾರೆ. ಎಲ್ಲರೂ ಸೇವಾ‌ ಮನೋಭಾವನೆಯಿಂದ ದುಡಿಯುತ್ತಿದ್ದಾರೆ. ಇನ್ನೂ ತರಕಾರಿ ತ್ಯಾಜ್ಯದಿಂದ ಬಯೋಗ್ಯಾಸ್ ಉತ್ಪಾದನೆ, ಹಾಲಿನ ಪ್ಯಾಕೇಟಿನ ಅಲಂಕಾರಿಕ ಸಾಧನ‌ ನಿರ್ಮಾಣ, ಸಾಂಬಾರ್ ಸರೋವರ, ಅಕ್ಕಿಯ ಚೀಲದಿಂದ ಬ್ಯಾಗ್ ತಯಾರಿಕೆ ಸೇರಿ ಕಸದಿಂದ ರಸ ತೆಗೆಯುವ ಅನೇಕ ವಿಧಾನಗಳನ್ನು ಇಲ್ಲಿ ನೋಡಲು ಸಾಧ್ಯ.‌ ಇಲ್ಲಿ ಊಟದ ನಂತರ ತಾಟು ತೊಳೆಯುವ ಬ್ರೆಶ್ ಸಹ ಸಾವಯವ ಎಂಬುದು ಗಮನಿಸಬೇಕಾದ ಅಂಶ.

ಅದಮ್ಯ ಚೈತನ್ಯ ಪರಸರ ಕಾಳಜಿ ಬಗ್ಗೆ ಮನೆ ಮನೆ ಮಹಿಳೆಯರಿಗೆ ತರಬೇತಿ ನೀಡುವ ಗುರಿ ಹೊಂದಿದೆ. ಅನಂತ ಹಸಿರು ಜೀವನಶೈಲಿ ಪರಿಕರ ಕೇಂದ್ರವನ್ನು ಎಲ್ಲಡೆ ಸ್ಥಾಪಿಸುವ ಉದ್ದೇಶದೊಂದಿಗೆ ಮುನ್ನಡೆಯುತ್ತಿದೆ.

mobiletime.in ಪ್ರಕಟಿಸಿದ ಈ ಲೇಖನಕ್ಕೆ ಪರಿಸರ ನಿರ್ವಹಣೆ & ನೀತಿ ಸಂಶೋಧನಾ ಸಂಸ್ಥೆ ನಡೆಸಿದ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಸಿಕ್ಕಿದೆ.

ಮಾಹಿತಿ ಹಾಗೂ ಸಂವಹನ ಸಹಕಾರ: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ)

 

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಇದೀಗ ಬಂದ ಸುದ್ದಿ: ಈ ದಿನ ಶಾಲೆಗೆ ರಜೆ!

Next Post

ಅಪಾಯದಲ್ಲಿದ್ದ ಗರ್ಭಿಣಿಗೆ ಆಪತ್ಬಾಂದವನಾದ ಆಂಬುಲೆನ್ಸ‌ ಚಾಲಕ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋