• Latest
Gram Panchayat Politics: Gajanana's obstacle to Ganapati's work!

ವಜ್ರಳ್ಳಿ | ದಾಖಲೆ ಇಲ್ಲದೇ ದ್ವೇಷ ರಾಜಕಾರಣ: ಬಿಜೆಪಿ ಅಧಪತಃನಕ್ಕೆ ಕಾರಣ!

1 day ago
Prediction for July 23 2025

2025ರ ಜುಲೈ 30ರ ದಿನ ಭವಿಷ್ಯ

46 minutes ago
Naga returns to town despite being released into the forest This reptile has completed its circumambulation and returned to its nest!

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

1 hour ago
ADVERTISEMENT
ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

1 hour ago
Cockfight in the forest Police custody for the wrestling chickens!

ಕಾಡಿನಲ್ಲಿ ಕೋಳಿ ಕಾಳಗ: ಕುಸ್ತಿಯಾಡಿದ ಕೋಳಿಗಳಿಗೆ ಪೊಲೀಸ್ ಕಸ್ಟಡಿ!

2 hours ago
Lokayukta files complaint against PSI for illegal association!

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

2 hours ago
Tuesday, July 29, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ವಜ್ರಳ್ಳಿ | ದಾಖಲೆ ಇಲ್ಲದೇ ದ್ವೇಷ ರಾಜಕಾರಣ: ಬಿಜೆಪಿ ಅಧಪತಃನಕ್ಕೆ ಕಾರಣ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Gram Panchayat Politics: Gajanana's obstacle to Ganapati's work!
Advertisement is not enabled. Advertisement is not enabled. Advertisement is not enabled.
ADVERTISEMENT

ಗ್ರಾಮ ಪಂಚಾಯತ ಸದಸ್ಯರಾಗಿ ಪುತ್ರನ ಮೂಲಕ ಗುತ್ತಿಗೆ ಕಾಮಗಾರಿ ನಿರ್ವಹಿಸಿದ ಕಾರಣ ಯಲ್ಲಾಪುರದ ವಜ್ರಳ್ಳಿ ಗ್ರಾ ಪಂ ಸದಸ್ಯ ಜಿ ಆರ್ ಭಾಗ್ವತ್ ಅವರ ಸದಸ್ಯತ್ವ ರದ್ಧಾಗಿದೆ. ಈ ವೇಳೆ ಅವರು ಎದುರಾಳಿಗಳ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದು, ಮಾಡಿದ ಆರೋಪಕ್ಕೆ ಅವರು ಈವರೆಗೂ ಯಾವುದೇ ದಾಖಲೆ ಒದಗಿಸಿಲ್ಲ. `ದಾಖಲೆ ಕೊಡುವೆ’ ಎಂದು ಹೇಳಿ ಹೊರಟ ಅವರು ಫೋನ್ ಕರೆಯನ್ನು ಸ್ವೀಕರಿಸುತ್ತಿಲ್ಲ!

ಯಲ್ಲಾಪುರದ ವಜ್ರಳ್ಳಿ ಭಾಗದಲ್ಲಿ ಬಿಜೆಪಿ ಸಂಘಟನೆ ಪ್ರಭಲವಾಗಿದೆ. ಎದುರಾಳಿ ಕಾಂಗ್ರೆಸ್ ಸಹ ಅಷ್ಟೇ ಘಟಾನುಘಟಿ ನಾಯಕರನ್ನು ಹೊಂದಿದೆ. ಆದರೆ, ಬಿಜೆಪಿ ಪ್ರಮುಖರಾದ ಜಿ ಆರ್ ಭಾಗ್ವತ್ ಅವರು ತಮ್ಮ ಆರೋಪಗಳಿಗೆ ಸೂಕ್ತ ದಾಖಲೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. `ನಿಜವಾಗಿಯೂ ಭ್ರಷ್ಟಾಚಾರದ ಬಗ್ಗೆ ದಾಖಲೆಗಳಿದ್ದರೆ ಅದನ್ನು ಬಹಿರಂಗವಾಗಿ ಬಿಡುಗಡೆ ಮಾಡಬೇಕು. ಕುಮಾರಸ್ವಾಮಿ ಅವರ ಸಿಡಿ ಪ್ರಕಾರ ಮಾಧ್ಯಮ ಹೇಳಿಕೆಗಳಿಗೆ ಮಾತ್ರ ಅದು ಸೀಮಿತವಾಗಿರಬಾರದು’ ಎಂಬುದು ಅನೇಕರ ಅಭಿಪ್ರಾಯ. ದಾಖಲೆ ಒದಗಿಸದೇ ಆರೋಪ ಮಾಡಿದ ಜಿ ಆರ್ ಭಾಗ್ವತ್ ಅವರ ಕ್ರಮ ಬಿಜೆಪಿ ವಲಯದಲ್ಲಿಯೇ ಅಸಮಧಾನ ಹಾಗೂ ಅನುಮಾನಕ್ಕೆ ಕಾರಣವಾಗಿದೆ.

ADVERTISEMENT

`ಕೈಬಿಟ್ಟು ಹೋದ ಆಸ್ತಿ ಹೊಸ ಸೇರ್ಫಡೆ ವಿಷಯದಲ್ಲಿ ಗ್ರಾ ಪಂ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಅವರು ಪ್ರತಿಯೊಬ್ಬರಿಂದ 15ರಿಂದ 20 ಸಾವಿರ ರೂ ಹಣಪಡೆದಿದ್ದಾರೆ’ ಎಂಬುದು ಜಿ ಆರ್ ಭಾಗ್ವತ್ ಅವರು ಮಾಡಿದ ಮೊದಲ ಆರೋಪ. `ಒಂದೇ ರಸ್ತೆಗೆ ಪದೇ ಪದೇ ಬಿಲ್ ಮಾಡಿ ಹಣ ಹೊಡೆಯಲಾಗಿದೆ’ ಎಂಬುದು ಅವರ ಮತ್ತೊಂದು ಆರೋಪ. ಗ್ರಾ ಪಂ ಸದಸ್ಯೆ ರತ್ನಾ ಬಾಂದೇಕರ್ ಅವರು ನರೆಗಾ ಕೆಲಸದಲ್ಲಿ ಅವ್ಯವಹಾರ ನಡೆಸುತ್ತಿದ್ದಾರೆ’ ಎಂದು ಸಹ ಜಿ ಆರ್ ಭಾಗ್ವತ್ ಅವರು ದೂರಿದ್ದಾರೆ. ಇದರೊಂದಿಗೆ ಗ್ರಾಮ ಪಂಚಾಯತಗೆ ಅರಿವಿಲ್ಲದೇ, ನಕಲಿ ದಾಖಲೆಗಳ ಮೂಲಕ ಅವರು ಕೇಂದ್ರ ಸರ್ಕಾರದ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿರುವ ಬಗ್ಗೆಯೂ ಆರೋಪಿಸಿದ್ದಾರೆ. `ತಮ್ಮ ಬಳಿ ದಾಖಲೆಗಳಿವೆ’ ಎಂದಿರುವ ಅವರು ಅದನ್ನು ಬಹಿರಂಗಪಡಿಸುವoತೆ ಪದೇ ಪದೇ ಪ್ರಶ್ನಿಸಿದರೂ ಹೊರ ಹಾಕಿಲ್ಲ.

ADVERTISEMENT

`ಜಿ ಆರ್ ಭಾಗ್ವತ್ ಒಳ್ಳೆಯ ಮನುಷ್ಯ. ದಾಖಲೆಗಳಿಲ್ಲದೇ ಅವರು ಏನನ್ನು ಮಾತನಾಡುವುದಿಲ್ಲ’ ಎಂದು ಅವರ ಬೆಂಬಲಿಗರು ಹೇಳುತ್ತಾರೆ. `ತಮ್ಮ ಅಪರಾತಪರ ಮುಚ್ಚಿಕೊಳ್ಳುವುದಕ್ಕಾಗಿ ಜಿ ಆರ್ ಭಾಗ್ವತ್ ಅವರು ಎದುರಾಳಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದು ಅವರ ಎದುರಾಳಿ ಬಣದವರು ಹೇಳುತ್ತಿದ್ದಾರೆ. ಭ್ರಷ್ಟಾಚಾರ, ಅವ್ಯವಹಾರ, ಇನ್ನಿತರ ಗ್ರಾ ಪಂ ಸದಸ್ಯರ ಅಕ್ರಮಗಳ ಬಗ್ಗೆ ಜಿ ಆರ್ ಭಾಗ್ವತ ಅವರು ಮಾಡಿದ ಆರೋಪಗಳೆಲ್ಲವೂ ಗಂಭೀರ ಪ್ರಮಾಣದಲ್ಲಿವೆ. ಹೀಗಾಗಿ ಈ ಬಗ್ಗೆ ಅವರು ಲೋಕಾಯುಕ್ತ ದೂರು ನೀಡಲು ಅರ್ಹರಾಗಿದ್ದು, ಅಕ್ರಮಗಳ ಬಗ್ಗೆ ಈವರೆಗೂ ಅವರು ಯಾವುದೇ ದೂರು ದಾಖಲಿಸಿಲ್ಲ. ಅಕ್ರಮ-ಅವ್ಯವಹಾರಗಳನ್ನು ಬಹಿರಂಗಪಡಿಸುವುದಾಗಿ ಮಾಧ್ಯಮಗಳ ಮುಂದೆ ಸಿಡಿದೆದ್ದ ಅವರು ನಂತರ ಮೌನಕ್ಕೆ ಶರಣಾಗಿರುವುದು ಚರ್ಚೆಗೆ ಗ್ರಾಸವಾಗಿದೆ.

ADVERTISEMENT

ಅಕ್ರಮ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಬಗ್ಗೆ ಈ ಮೊದಲೇ ಮಾಹಿತಿಯಿದ್ದರೂ ಇಷ್ಟು ದಿನಗಳ ಕಾಲ ಜಿ ಆರ್ ಭಾಗ್ವತ್ ಅವರು ಅದನ್ನು ಸಹಿಸಿಕೊಂಡಿದ್ದು ಏಕೆ? ಆ ಬಗ್ಗೆ ಮೊದಲೇ ಧ್ವನಿ ಎತ್ತದಿರುವುದು ಏತಕೆ? ಎಂಬ ಪ್ರಶ್ನೆಯೂ ಹಾಗೇ ಉಳಿದಿದೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಶಾಸಕರ ತಾಕೀತು: ಖಾಸಗಿ ಬಸ್ಸಿಗೂ ಪ್ರೀ ಟಿಕೇಟು!

Next Post

ಉತ್ತರ ಕನ್ನಡ | ಸಂಗೀತ ಸಾಧಕನಿಗೆ ಆಕಾಶವಾಣಿ ಗೌರವ: ರಾಷ್ಟ್ರೀಯ ಮನ್ನಣೆ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Video Popup Ads
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋