• Latest
Harsh punishment for an innocent teacher Savita the teacher who fell off her bike is no more

ಅಮಾಯಕ ಶಿಕ್ಷಕಿಗೆ ಘನಘೋರ ಶಿಕ್ಷೆ: ಬೈಕಿನಿಂದ ಬಿದ್ದ ಸವೀತಾ ಟೀಚರ್ ಇನ್ನಿಲ್ಲ

18 hours ago
Prediction for July 23 2025

2025ರ ಜುಲೈ 30ರ ದಿನ ಭವಿಷ್ಯ

15 hours ago
Naga returns to town despite being released into the forest This reptile has completed its circumambulation and returned to its nest!

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

15 hours ago
ADVERTISEMENT
ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

15 hours ago
Cockfight in the forest Police custody for the wrestling chickens!

ಕಾಡಿನಲ್ಲಿ ಕೋಳಿ ಕಾಳಗ: ಕುಸ್ತಿಯಾಡಿದ ಕೋಳಿಗಳಿಗೆ ಪೊಲೀಸ್ ಕಸ್ಟಡಿ!

16 hours ago
Lokayukta files complaint against PSI for illegal association!

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

16 hours ago
Wednesday, July 30, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಅಮಾಯಕ ಶಿಕ್ಷಕಿಗೆ ಘನಘೋರ ಶಿಕ್ಷೆ: ಬೈಕಿನಿಂದ ಬಿದ್ದ ಸವೀತಾ ಟೀಚರ್ ಇನ್ನಿಲ್ಲ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Harsh punishment for an innocent teacher Savita the teacher who fell off her bike is no more
Advertisement is not enabled. Advertisement is not enabled. Advertisement is not enabled.
ADVERTISEMENT

ಇತರರ ಮಕ್ಕಳನ್ನು ತಮ್ಮ ಮಕ್ಕಳಂತೆಯೇ ಪ್ರೀತಿ-ವಾತ್ಸಲ್ಯದಿಂದ ನೋಡಿಕೊಳ್ಳುತ್ತಿದ್ದ ಶಿರಸಿಯ ಶಿಕ್ಷಕಿ ಸವಿತಾ ಗೌಡ ಅವರು ಬೈಕಿನಿಂದ ಬಿದ್ದು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸುವುದರೊಳಗೆ ಸಾವನಪ್ಪಿದ್ದಾರೆ.

ಶಿರಸಿ ಬನವಾಸಿ ರಸ್ತೆಯ ಶ್ರೀನಗರ ಸರಕಾರಿ ಶಾಲೆಯಲ್ಲಿ ಸವಿತಾ ಗೌಡ ಅವರು ಶಿಕ್ಷಕಿಯಾಗಿದ್ದರು. ಅನೇಕ ವರ್ಷಗಳಿಂದ ಅವರು ಶಿಕ್ಷಣ ಇಲಾಖೆಯ ಸೇವೆಯಲ್ಲಿದ್ದರು. ನೂರಾರು ಮಕ್ಕಳಿಗೆ ಪಾಠ ಕಲಿಸಿದ್ದ ಅವರು ಅಡ್ಡದಾರಿ ಹಿಡಿಯುತ್ತಿದ್ದ ಮಕ್ಕಳನ್ನು ತಿದ್ದಿ-ತೀಡಿ ಮುಖ್ಯವಾಹಿನಿಗೆ ತಂದಿದ್ದರು. ಪಠ್ಯದ ಜೊತೆ ಪಠ್ಯೆತರ ಚಟುವಟಿಕೆಗಳಲ್ಲಿ ಸಹ ಮಕ್ಕಳು ಭಾಗವಹಿಸುವಂತೆ ಪ್ರೇರೇಪಿಸುತ್ತಿದ್ದರು. ಶಿಕ್ಷಣ ಇಲಾಖೆ ನೀಡಿದ ಕೆಲಸಗಳನ್ನು ಸಹ ಅವರು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು.

ADVERTISEMENT

ಬಿಳೂರು ಸರಕಾರಿ ಪ್ರೌಢ ಶಾಲೆಯ ಶಿಕ್ಷಕರಾಗಿರುವ ಪತಿ ಮಂಜುನಾಥ ಗೌಡ ಅವರ ಜೊತೆ ಸವಿತಾ ಗೌಡ ಅವರು ಮಂಗಳವಾರ ಮಂಚಗುಣಿ ದೇವಾಲಯಕ್ಕೆ ಹೋಗಿದ್ದರು. ದೇವರಿಗೆ ಕೈ ಮುಗಿದು ಮಧ್ಯಾಹ್ನದ ವೇಳೆ ಬೈಕಿನಲ್ಲಿ ಮರಳುತ್ತಿದ್ದರು. ಆಗ, ಒಮ್ಮೆಲೆ ಮಳೆ ಬಂದಿದ್ದು ಬೈಕ್ ಸಂಚರಿಸುವಾಗಲೇ ಬ್ಯಾಗಿನಿಂದ ಕೊಡೆ ಹೊರ ತೆಗೆದರು. ಕೊಡೆ ಬಿಡಿಸುವಾಗ ಗಾಳಿ ಬೀಸಿದ್ದು, ಕೊಡೆಯ ಜೊತೆ ಆಯತಪ್ಪಿ ಬೈಕಿನಿಂದ ಕೆಳಗೆ ಬಿದ್ದರು.

ADVERTISEMENT

ಬೈಕಿನಿಂದ ಬಿದ್ದ ಸವಿತಾ ಗೌಡ ಅವರ ತಲೆಗೆ ಕಲ್ಲು ಬಡಿಯಿತು. ಪರಿಣಮ ಅವರಿಗೆ ಗಂಭೀರ ಪ್ರಮಾಣದಲ್ಲಿ ಪೆಟ್ಟಾಯಿತು. ಜೊತೆಗಿದ್ದ ಮಂಜುನಾಥ ಗೌಡ ಅವರು ಪತ್ನಿಯನ್ನು ಬದುಕಿಸಿಕೊಳ್ಳಲು ಹರಸಾಹಸ ನಡೆಸಿದರು. ಅಮಿನಳ್ಳಿ ಬಳಿ ದುರಂತ ನಡೆದಿದ್ದು, ಅವರಿವರನ್ನು ಕಾಡಿಬೇಡಿ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದರು.

ADVERTISEMENT

ಅದೇ ಮಾರ್ಗದಲ್ಲಿ ತೆರಳುತ್ತಿದ್ದ ಆರಿಫ್ ಖಾನ್ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಸವಿತಾ ಗೌಡ ಅವರನ್ನು ತಮ್ಮ ಕಾರಿಗೆ ಹತ್ತಿಸಿದರು. ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಧಾರವಾಡಕ್ಕೆ ಕರೆದೊಯ್ಯುವ ಪ್ರಯತ್ನ ನಡೆಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. ಅರ್ದದಾರಿಯಲ್ಲಿಯೇ ಸವಿತಾ ಗೌಡ ಅವರ ಪ್ರಾಣ ಹಾರಿ ಹೋಯಿತು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಕಾರವಾರದಲ್ಲಿ ಕಾರ್ಮಿಕ ಸಚಿವರ ಸಂಚಾರ: ಕನಿಷ್ಟ ವೇತನ ಕೊಡದ ಕಂಪನಿ ವಿರುದ್ಧ ದೂರು ಸ್ವೀಕಾರ!

Next Post

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Video Popup Ads
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT