• Latest
Lokayukta files complaint against PSI for illegal association!

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

16 hours ago
Prediction for July 23 2025

2025ರ ಜುಲೈ 30ರ ದಿನ ಭವಿಷ್ಯ

14 hours ago
Naga returns to town despite being released into the forest This reptile has completed its circumambulation and returned to its nest!

ಕಾಡಿಗೆ ಬಿಟ್ಟರೂ ಊರಿಗೆ ಮರಳಿದ ನಾಗ: ಪ್ರದಕ್ಷಿಣೆಯ ಪೂಜೆ ಮುಗಿಸಿ ಗೂಡು ಸೇರಿತು ಈ ಉರಗ!

15 hours ago
ADVERTISEMENT
ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

ನೈಜ ನಾಗರದೊಂದಿಗೆ ಹಬ್ಬ: ಮಕ್ಕಳ ಹೊಟ್ಟೆ ಸೇರಿದ ಪೌಷ್ಠಿಕ ಹಾಲು

15 hours ago
Cockfight in the forest Police custody for the wrestling chickens!

ಕಾಡಿನಲ್ಲಿ ಕೋಳಿ ಕಾಳಗ: ಕುಸ್ತಿಯಾಡಿದ ಕೋಳಿಗಳಿಗೆ ಪೊಲೀಸ್ ಕಸ್ಟಡಿ!

15 hours ago
Harsh punishment for an innocent teacher Savita the teacher who fell off her bike is no more

ಅಮಾಯಕ ಶಿಕ್ಷಕಿಗೆ ಘನಘೋರ ಶಿಕ್ಷೆ: ಬೈಕಿನಿಂದ ಬಿದ್ದ ಸವೀತಾ ಟೀಚರ್ ಇನ್ನಿಲ್ಲ

18 hours ago
Wednesday, July 30, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

PSI ವಿರುದ್ಧ ಅಕ್ರಮ ಒಕ್ಕೂಟ ಆರೋಪ: ಲೋಕಾಯುಕ್ತ ದೂರು!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ, ವಿಡಿಯೋ
Lokayukta files complaint against PSI for illegal association!
Advertisement is not enabled. Advertisement is not enabled. Advertisement is not enabled.
ADVERTISEMENT

ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್‌ಐ ಮಹಾಂತೇಶ್ ವಾಲ್ಮೀಕಿ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ಗರಂ ಆಗಿದ್ದಾರೆ. ಪಿಎಸ್‌ಐ ವಿರುದ್ಧ ಹಲವು ಆರೋಪ ಮಾಡಿರುವ ಕರವೇ ಕಾರ್ಯಕರ್ತರು ಈ ಬಗ್ಗೆ ಪೊಲೀಸ್ ಅಧೀಕ್ಷಕ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.

ಮಹಾಂತೇಶ ವಾಲ್ಮೀಕಿ ಅವರು ಸರಿಸುಮಾರು ಎರಡು ವರ್ಷಗಳಿಂದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿದ್ದಾರೆ. ಅವರ ಅಧಿಕಾರ ಅವಧಿಯಲ್ಲಿ ಅಮಾಯಕರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ ಎಂಬುದು ಕರವೇ ಜಿಲ್ಲಾಧ್ಯಕ್ಷ ಅಕ್ಷಯ್ ಎಸ್ ಬಿ ಅವರ ದೂರು. `ಈ ಹಿಂದೆ ದಿಲೀಪ ಗಜಣಕರ್ ಎಂಬಾತರನ್ನು ಮಹಾಂತೇಶ ವಾಲ್ಮೀಕಿ ಅವರು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದ್ದರು. ಜುಲೈ 26ರಂದು ಸಹ ಪೊಲೀಸರು ವ್ಯಕ್ತಿಯೊಬ್ಬರನ್ನು ಠಾಣೆಗೆ ಕರೆದೊಯ್ದು ಬೆದರಿಸಿದ್ದಾರೆ’ ಎಂದು ಅಕ್ಷಯ ಎಸ್ ಬಿ ದೂರಿದ್ದಾರೆ.

ADVERTISEMENT

ಇದರೊಂದಿಗೆ `ದುರ್ಗಾಮಾತಾ ಕೋ ಆಪರೇಟಿವ್ ಬ್ಯಾಂಕಿನ ಲಿಂಗರಾಜ ಕಲ್ಗುಟಕರ್ ಅವರ ಮೇಲೆಯೂ ಪಿಎಸ್‌ಐ ಹಲ್ಲೆ ನಡೆಸಿದ್ದರು. ಅವರ ಕಾರನ್ನು ಅನಧಿಕೃತವಾಗಿ ಕೊಂಡೊಯ್ದಿದ್ದು, ಆ ಬಗ್ಗೆಯೂ ದೂರು ನೀಡಲಾಗಿದೆ. ಆದರೆ, ಪಿಎಸ್‌ಐ ಪ್ರಭಾವಿಯಾಗಿರುವ ಕಾರಣ ಕಾನೂನು ಕ್ರಮವಾಗಿಲ್ಲ’ ಎಂದು ಅವರು ಲಿಖಿತವಾಗಿ ದೂರಿದ್ದಾರೆ. `ಅಮಾಯಕರನ್ನು ಠಾಣೆಗೆ ಕರೆಯಿಸಿ ಅವರ ವಿರುದ್ಧ ಡ್ರಿಂಕ್ & ಡ್ರೆವ್ ಕೇಸ್ ಹಾಕುವುದಾಗಿ ಬೆದರಿಸಿದ ವಿಡಿಯೋಗಳಿವೆ’ ಎಂದಿದ್ದಾರೆ.

`ಪಿಎಸ್‌ಐ ಮಹಾಂತೇಶ ವಾಲ್ಮಿಕಿ ಅವರು ಅಕ್ರಮ ಮರಳುಗಾರಿಕೆ, ಅಕ್ರಮ ಮದ್ಯ ಮಾರಾಟ ಹಾಗೂ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಈ ಬಗ್ಗೆ ವಿಡಿಯೋಸಹಿತ ಕೆಲ ದಾಖಲೆಗಳಿದ್ದು, ಅದನ್ನು ದೂರಿನ ಜೊತೆ ಸಲ್ಲಿಸುತ್ತಿದ್ದೇವೆ’ ಎಂದು ಕರವೇ ಕಾರ್ಯಕರ್ತರು ವಿವರಿಸಿದ್ದಾರೆ.

ADVERTISEMENT
ADVERTISEMENT

`ಮೇಲಧಿಕಾರಿಗಳ ಹೆಸರಿನಲ್ಲಿಯೂ ಪಿಎಸ್‌ಐ ದುಬಾರಿ ಬೆಲೆಯ ಮದ್ಯದ ಬಾಟಲಿಯನ್ನು ಲಂಚವಾಗಿ ಸ್ವೀಕರಿಸಿದ್ದಾರೆ. ಪೊಲೀಸ್ ಅಧೀಕ್ಷಕರ ಬೀಳ್ಕೊಡುಗೆಗೆ ಉಡುಗರೆ ಕೊಡುವಂತೆ ಅವರು ಅಕ್ರಮ ಮದ್ಯ ಮಾರಾಟಗಾರರಲ್ಲಿ ಬೇಡಿಕೆಯಿಟ್ಟಿದ್ದು, ತಮ್ಮ ಬೇಡಿಕೆ ಈಡೇರಿಸದೇ ಇದ್ದರೆ ಅನಗತ್ಯ ತೊಂದರೆ ಕೊಡುವುದಾಗಿ ಬೆದರಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

`ತಾವು ಒದಗಿಸಿರುವ ದಾಖಲೆ ಹಾಗೂ ದೂರನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಜರುಗಿಸಬೇಕು. ಪೊಲೀಸ್ ಇಲಾಖೆಯ ಗೌರವ ಕಾಪಾಡುವನಿಟ್ಟಿನಲ್ಲಿ ಪಿಎಸ್‌ಐ ಮಹಾಂತೇಶ ವಾಲ್ಮೀಕಿ ಅವರ ಅಮಾನತು ನಡೆಯಬೇಕು’ ಎಂದು ಆಗ್ರಹಿಸಿದ್ದಾರೆ.
ಕರವೇ ಕಾರ್ಯಕರ್ತರು ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಅಮಾಯಕ ಶಿಕ್ಷಕಿಗೆ ಘನಘೋರ ಶಿಕ್ಷೆ: ಬೈಕಿನಿಂದ ಬಿದ್ದ ಸವೀತಾ ಟೀಚರ್ ಇನ್ನಿಲ್ಲ

Next Post

ಕಾಡಿನಲ್ಲಿ ಕೋಳಿ ಕಾಳಗ: ಕುಸ್ತಿಯಾಡಿದ ಕೋಳಿಗಳಿಗೆ ಪೊಲೀಸ್ ಕಸ್ಟಡಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
Video Popup Ads
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋

ADVERTISEMENT