• Latest

ಡಿಜಿಟಲ್ ಅರೆಸ್ಟ್: ಪೊಲೀಸರಿಗೆ ಹೆದರಿ ಕಾಸು ಬಿಚ್ಚಿದ ಅಡಿಕೆ ವ್ಯಾಪಾರಿ!

21 hours ago
Yellapur Unqueen's Everywhere - Complaint to Dutch!

ಯಲ್ಲಾಪುರ: ಎಲ್ಲೆಂದರಲ್ಲಿ ಅಶುಚಿತ್ವ – ಡೀಸಿಗೆ ದೂರು!

16 minutes ago
Prediction for July 23 2025

2025ರ ಜುಲೈ 31ರ ದಿನ ಭವಿಷ್ಯ

18 hours ago
ADVERTISEMENT
Sirsige District Hospital Vaccine for monkeypox soon!

ಶಿರಸಿಗೆ ಜಿಲ್ಲಾ ಆಸ್ಪತ್ರೆ: ಮಂಗನ ಕಾಯಿಲೆಗೆ ಶೀಘ್ರದಲ್ಲಿಯೇ ಲಸಿಕೆ!

18 hours ago
Tata.. Boy Boy The Health Minister who came to Kumta but did not come to the hospital!

ಟಾಟಾ.. ಬಾಯ್ ಬಾಯ್: ಕುಮಟಾಗೆ ಬಂದರೂ ಆಸ್ಪತ್ರೆಗೆ ಬರದ ಆರೋಗ್ಯ ಸಚಿವ!

19 hours ago

ಅಂದರ್ ಬಾಹರ್: ಮುಂಡಗೋಡಿನ 16 ಜನರ ಮೇಲೆ ಕಾನೂನು ಅಸ್ತ್ರ!

19 hours ago
Thursday, July 31, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಡಿಜಿಟಲ್ ಅರೆಸ್ಟ್: ಪೊಲೀಸರಿಗೆ ಹೆದರಿ ಕಾಸು ಬಿಚ್ಚಿದ ಅಡಿಕೆ ವ್ಯಾಪಾರಿ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಬ್ಯಾಂಕ್ ಖಾತೆಯಲ್ಲಿ ಕೋಟಿ ಹಣವಿಟ್ಟುಕೊಂಡಿದ್ದ ಅಡಿಕೆ ವ್ಯಾಪಾರಿ ರವೀಂದ್ರ ಹೆಗಡೆ ಪೊಲೀಸರಿಗೆ ಬೆದರಿ ಆ ಹಣ ಕಳೆದುಕೊಂಡಿದ್ದಾರೆ. `ಕಪ್ಪು ಹಣ ವರ್ಗಾವಣೆ ವಿಷಯದಲ್ಲಿ ನಿಮ್ಮನ್ನು ಬಂದಿಸುತ್ತೇವೆ’ ಎಂಬ ಅಪರಿಚಿತ ಕರೆಯೊಂದು ಅವರ ಮೂರು ಬ್ಯಾಂಕಿನ ಖಾತೆಯನ್ನು ಖಾಲಿ ಮಾಡಿದೆ.

ಶಿರಸಿ ಪ್ರಗತಿನಗರದ ರವೀಂದ್ರ ಹೆಗಡೆ ಅವರು ಅಡಿಕೆ ವ್ಯಾಪಾರ ಮಾಡಿಕೊಂಡಿದ್ದರು. ಕಾನೂನುಬದ್ಧವಾಗಿಯೇ ಅವರು ವ್ಯಾಪಾರ-ವಹಿವಾಟು ನಡೆಸುತ್ತಿದ್ದರು ಕಣ್ತಪ್ಪಿನಿಂದ ಸಣ್ಣಪುಟ್ಟ ಪ್ರಮಾದಗಳು ನಡೆಯುತ್ತಿದ್ದವು. ಹೀಗಾಗಿ ಅವರು ಮೊದಲಿನಿಂದಲೂ ಆತಂಕದಲ್ಲಿಯೇ ವಹಿವಾಟು ಮಾಡುತ್ತಿದ್ದರು.

ADVERTISEMENT

ಈ ನಡುವೆ ಸಂಜಯ ಎಂಬ ಹೆಸರಿನಿಂದ ಫೋನ್ ಅವರಿಗೆ ಫೋನ್ ಬಂದಿತು. `ತಾನು ಮುಂಬೈ ಪೊಲೀಸ್’ ಎಂದು ಪರಿಚಯಿಸಿಕೊಂಡ ಸಂಜಯ್ ಕಪ್ಪು ಹಣ ವ್ಯವಹಾರದ ಬಗ್ಗೆ ಮಾತನಾಡಿದರು. ರವೀಂದ್ರ ಹೆಗಡೆ ಅವರ ಬಳಿ `ಮುಂಬೈನ ಕೊಲಬಾದಲ್ಲಿ ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆಯಿದ್ದು, ಅದಕ್ಕೆ ಕಪ್ಪು ಹಣ ವರ್ಗಾವಣೆಯಾಗಿದೆ. ಜಟ್ ಎರಿವೆಸನ್ ಮನಿಷ್ ಗೊಯಲ್ ಎಂಬಾತರಿAದ ಹಣ ವರ್ಗಾವಣೆಯಾಗಿದ್ದರಿಂದ ನಿಮ್ಮನ್ನು ಬಂಧಿಸಲಾಗುತ್ತದೆ’ ಎಂದು ಬೆದರಿಸಿದರು.

ADVERTISEMENT

ಮುಂಬೈ ಪೊಲೀಸರ ಹೆಸರು ಕೇಳಿದ ಕೂಡಲೇ ಬೆದರಿದ್ದ ರವೀಂದ್ರ ಹೆಗಡೆ ಅವರಿಗೆ ಸಂಜಯ್ ಇನ್ನಷ್ಟು ಭಯಪಡಿಸಿದರು. `ಇಡಿ ಅವರಿಗೆ ಮಾಹಿತಿ ನೀಡಿ ನಿಮ್ಮನ್ನು ಇನ್ನಷ್ಟು ಸಂಕಷ್ಟಕ್ಕೆ ತರುತ್ತೇವೆ’ ಎಂದು ಹೇಳಿದಾಗ ರವೀಂದ್ರ ಹೆಗಡೆ ಇನ್ನಷ್ಟು ಕುಗ್ಗಿದರು. ಅದೂ-ಇದು ಮಾತುಕಥೆ ನಂತರ ಕೊನೆಗೆ ಸಂಜಯ್ ಲಂಚಕ್ಕೆ ಕೈ ಚಾಚಿದ್ದು, ರವೀಂದ್ರ ಹೆಗಡೆ ಅವರು ತಮ್ಮ ಶಿರಸಿಯ ಕೆನರಾ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸಂಜಯ್ ಹೇಳಿದ ಖಾತೆಗೆ ವರ್ಗಾಯಿಸಿದರು. ಅದು ಸಾಲದಿದ್ದಾಗ ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಲಂಚವಾಗಿ ನೀಡಿದರು.

ADVERTISEMENT

ಅದಕ್ಕೆ ಸಹ ಸಂಜಯ್ ನಿಲ್ಲದೇ ಇದ್ದಾಗ ಕರ್ಣಾಟಕ ಬ್ಯಾಂಕಿನಲ್ಲಿದ್ದ ಉಳಿತಾಯದ ಹಣವನ್ನು ಸಂಜಯ್ ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಿದರು. ಇದಾದ ನಂತರ ಆ ಸಂಜಯ್ ಪೊಲೀಸ್ ಅಧಿಕಾರಿಯೇ ಅಲ್ಲ ಎಂಬ ವಿಷಯ ರವೀಂದ್ರ ಹೆಗಡೆ ಅವರ ಅರಿವಿಗೆ ಬಂದಿತು. ಆದರೆ, ಅಷ್ಟರೊಳಗೆ ರವೀಂದ್ರ ಹೆಗಡೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 89.30 ಲಕ್ಷ ರೂ ವಂಚಕರ ಕೈ ಸೇರಿತ್ತು.

ಹಣ ಕಳೆದುಕೊಂಡ ನೋವಿನಲ್ಲಿದ್ದ ರವೀಂದ್ರ ಹೆಗಡೆ ಅವರಿಗೆ ಕುಟುಂಬದವರು ಸಮಾಧಾನ ಮಾಡಿದರು. ಮಾಹಿತಿ ತಂತ್ರಜ್ಞಾನ ದುರುಪಯೋಗಪಡಿಸಿಕೊಂಡು ವಂಚನೆ ಮಾಡಿದ ಬಗ್ಗೆ ಪೊಲೀಸ್ ದೂರು ನೀಡುವಂತೆ ಹಿರಿಯರು ಬುದ್ದಿವಾದ ಹೇಳಿದರು. `ತಾನು ದುಡಿದ ಹಣ ತನಗೆ ಮರಳಿಸಿ’ ಎಂದು ಶಿರಸಿ ಶಹರ ಪೊಲೀಸ್ ಠಾಣೆಗೆ ಬಂದು ರವೀಂದ್ರ ಹೆಗಡೆ ಅವರು ಅಳಲು ತೋಡಿಕೊಂಡರು. ಪೊಲೀಸರು ಪ್ರಕರಣ ದಾಖಲಿಸಿದ್ದು, ವಂಚಕರ ಹುಡುಕಾಟ ಶುರು ಮಾಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಹಾದಿಬೀದಿಯಲ್ಲಿ ಹೋಗುವವರೆಲ್ಲರೂ ಉರುಗ ತಜ್ಞರು: ಹಲ್ಲಿಲ್ಲದ ಹಾವಿಗೂ ಭಾರೀ ಡಿಮ್ಯಾಂಡು!

Next Post

ಸಮುದ್ರದಲ್ಲಿ ಮುಳುಗಿದ ದೋಣಿ: ನಾಲ್ವರ ಕಣ್ಮರೆ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋