• Latest
Kaiga Nuclear Power Plant which has given 20 crores for wildlife protection How many employees are there How much electricity has been generated so far

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

7 hours ago
Prediction for July 23 2025

2025 ಅಗಷ್ಟ 6ರ ದಿನ ಭವಿಷ್ಯ

6 hours ago

ಸರಾಯಿ ನಶೆಯಲ್ಲಿ ಇಲಿ ಪಾಷಣ ಕುಡಿದ!

6 hours ago
ADVERTISEMENT

ಭ್ರಷ್ಟಾಚಾರ: ತನಿಖೆಗೆ ಬಂದ ಅಧಿಕಾರಿಯದೇ ಮತ್ತೊಂದು ಹಗರಣ!

6 hours ago

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

7 hours ago
There is no funding for development.. No one listens to the arrogant problem!

ಅಭಿವೃದ್ಧಿಗೆ ಅನುದಾನವಿಲ್ಲ.. ಸೊಕ್ಕಿನಮಕ್ಕಿ ಸಮಸ್ಯೆ ಕೇಳುವವರಿಲ್ಲ!

8 hours ago
ADVERTISEMENT
Wednesday, August 6, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ವನ್ಯಜೀವಿ ರಕ್ಷಣೆಗೆ 20 ಕೋಟಿ ಕೊಟ್ಟ ಕೈಗಾ ಅಣು ಘಟಕ: ಇಲ್ಲಿರುವ ಉದ್ಯೋಗಿಗಳೆಷ್ಟು? ಈವರೆಗೆ ಉತ್ಪಾದಿಸಿದ ವಿದ್ಯುತ್ ಎಷ್ಟು?

ಕೈಗಾ ಅಣು ವಿದ್ಯುತ್ ಘಟಕ ಈವರೆಗೆ ಸ್ಥಳೀಯ ಜನ ಜೀವನ ಅಭಿವೃದ್ಧಿಗಾಗಿ 110 ಕೋಟಿ ಹಣ ವೆಚ್ಚ ಮಾಡಿದೆ. ಕಾಳಿ ಹುಲಿ ಮೀಸಲು ವಲಯದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿಯೇ 20 ಕೋಟಿ ಹಣ ಕೊಟ್ಟಿದೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Kaiga Nuclear Power Plant which has given 20 crores for wildlife protection How many employees are there How much electricity has been generated so far
Advertisement is not enabled. Advertisement is not enabled. Advertisement is not enabled.
ADVERTISEMENT

ಕೈಗಾದಲ್ಲಿ ಕೆಲಸ ನಿರ್ವಹಿಸುತ್ತಿರುವ 4 ಅಣು ವಿದ್ಯುತ್ ಘಟಕಗಳು ಸೇರಿ ಈವರೆಗೆ 13 ಸಾವಿರ ಕೋಟಿ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಿದೆ. ಕೈಗಾ ಅಧಿಕಾರಿಗಳ ಮಾಹಿತಿ ಪ್ರಕಾರ ಇದು ಅಂತರಾಷ್ಟ್ರೀಯ ಮಟ್ಟದ ಸಾಧನೆಯಾಗಿದೆ.

ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ನ 6ನೇ ಪರಮಾಣು ವಿದ್ಯುತ್ ಕೇಂದ್ರ ಕೈಗಾದಲ್ಲಿದೆ. ಸದ್ಯ ಕೈಗಾದಲ್ಲಿ 4 ಅಣು ವಿದ್ಯುತ್ ಘಟಕಗಳಿವೆ. ಅವೆಲ್ಲವೂ 220 ಮೆಗಾವ್ಯಾಟ್ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಗೆ ಸಮರ್ಥವಾಗಿದೆ. ಸದ್ಯ 700 ಮೆಗಾವ್ಯಾಟ್ ಸಾಮರ್ಥ್ಯದ ಇನ್ನೆರಡು ಭಾರಜಲ ಘಟಕಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2030ರ ಅವಧಿಗೆ ಅದರ ಕೆಲಸ ಮುಕ್ತಾಯವಾಗುವ ನಿರೀಕ್ಷೆಯಿದೆ.

ADVERTISEMENT

ಕೈಗಾದಲ್ಲಿ 5 ಮತ್ತು 6ನೇ ಘಟಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರದ ಅಣು ಶಕ್ತಿ ಇಲಾಖೆ, ಅಣುಶಕ್ತಿ ನಿಯಂತ್ರಣ ಆಯೋಗಗಳು ತಾತ್ವಿಕ ಅನುಮೋದನೆ ನೀಡಿದೆ. ರಿಯಾಕ್ಟರ್ ನಿರ್ಮಾಣದ ಚಟುವಟಿಕೆಗಳು, ನ್ಯೂಕ್ಲಿಯರ್ ಘಟಕಗಳ ಸಿವಿಲ್, ಇಲೆಕ್ಟ್ರಿಕಲ್ ಕಾಮಗಾರಿಗಳನ್ನು ಮೆಗಾ ಇಂಜಿನಿಯರ್ಸ್ ಮತ್ತು ಇನ್ ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಕಂಪನಿವಹಿಸಿಕೊoಡಿದೆ. ಟರ್ಬೈನ್ ವಿಭಾಗದ ಕಾಮಗಾರಿಗಳನ್ನು ಭಾರತ್ ಹೆವಿ ಇಲೆಕ್ಟ್ರಿಕಲ್ಸ್ ಲಿಮಿಟೆಡ್(ಬಿಎಚ್‌ಇಎಲ್) ಕೈಗೊಳ್ಳಲಿದೆ. ಎಲೆಕ್ಟ್ರಿಕಲ್ ಮತ್ತು ಸುರಕ್ಷತೆ ವಿಭಾಗದ ಇನ್ನೊಂದು ಕಾಮಗಾರಿಯನ್ನು ಇಸಿಎಲ್ ಎಂಬ ಅಣು ವಿದ್ಯುತ್ ಇಲಾಖೆಯ ಸಹೋದರ ಸಂಸ್ಥೆ ಜವಾಬ್ದಾರಿವಹಿಸಿಕೊಂಡಿದೆ.

ಕೈಗಾದ 1ನೇಘಟಕವು 962 ದಿನಗಳವರೆಗೆ ಕಾರ್ಯನಿರ್ವಹಿಸಿ, ನಿರಂತರವಾಗಿ ಕಾರ್ಯನಿರ್ವಹಿಸಿದ ವಿಶ್ವದ ಮೊದಲ ವಾಣಿಜ್ಯ ಪರಮಾಣು ವಿದ್ಯುತ್ ರಿಯಾಕ್ಟರ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ರಿಯಾಕ್ಟರುಗಳ ಆಯುಷ್ಯ ವೃದ್ಧಿ ಹಾಗೂ ಬೃಹತ್ ಪ್ರಮಾಣದಲ್ಲಿ ಕೂಲಂಟ್ ಚಾನೆಲ್ ಬದಲಾವಣೆ ಮತ್ತು ಫೀಡರ್ ಬದಲಾವಣೆಗಾಗಿ ಕೈಗಾ-1 ಘಟಕವು 2025ರ ಏಪ್ರಿಲ್ 1 2025 ರಿಂದ ಸ್ಥಗಿತಗೊಂಡಿದೆ. ಈ ಚಟುವಟಿಕೆಯು 18 ತಿಂಗಳುಗಳ ಕಾಲ ನಡೆಯುತ್ತದೆ.

Advertisement. Scroll to continue reading.
ADVERTISEMENT

`ಕೈಗಾ 1ರಿಂದ 4 ನೇ ಘಟಕದಲ್ಲಿ ಒಟ್ಟು 595 ಉದ್ಯೋಗಿಗಳಿದ್ದು, ಅದರಲ್ಲಿ 483 ಜನ ಕರ್ನಾಟಕದವರಾಗಿದ್ದಾರೆ. ಒಟ್ಟು 2057 ಗುತ್ತಿಗೆ ಉದ್ಯೋಗಿಗಳ ಪೈಕಿ 1737 ಕರ್ನಾಟಕದವರಿದ್ದು, ಅದರಲ್ಲಿ 1601 ಜನ ಉತ್ತಕನ್ನಡ ಜಿಲ್ಲೆಯವರಾಗಿದ್ದಾರೆ. ಅಧಿಕಾರಿಗಳ ಹೇಳಿಕೆ ಪ್ರಕಾರ, ಇಲ್ಲಿನ ವಿಕಿರಣದ ಪ್ರಭಾವ ನಿಗಧಿಗಿಂತ ಅತ್ಯಂತ ಕನಿಷ್ಠ ಮಟ್ಟದಲ್ಲಿದ್ದು ಸಾರ್ವಜನಿಕರು ಹಾಗೂ ಪರಿಸರದ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಿಲ್ಲ.

Advertisement. Scroll to continue reading.

ವನ್ಯಜೀವಿ ವಲಯಕ್ಕೆ ಹಣ!
ಸಾಮಾಜಿಕ ಜವಾಬ್ದಾರಿ ಯೋಜನೆ ಅಡಿ ಪ್ರತಿ ವಷÀð 9 ರಿಂದ 16 ಕೊಟಿಯವರೆಗೂ ಕೈಗಾ ಅಣು ಘಟಕ ಹಣವನ್ನು ವಿನಿಯೋಗಿಸುತ್ತಿದೆ. ಇದುವರೆಗೆ ಜನ ಜೀವನ ಅಭಿವೃದ್ಧಿಗಾಗಿ 110 ಕೋಟಿ ರೂ. ಖರ್ಚು ಮಾಡಲಾಗಿದ್ದು, ಕಾಳಿ ಹುಲಿ ಮೀಸಲು ವಲಯದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ 20 ಕೋಟಿ ರೂ ಗಳನ್ನು ವ್ಯಯಿಸಲಾಗಿದೆ ಎಂಬುದು ಅಧಿಕಾರಿಗಳು ನೀಡಿರುವ ಮಾಹಿತಿ.

ಈ ಎಲ್ಲಾ ವಿಷಯದ ಬಗ್ಗೆ ಕೈಗಾ ಅಣು ವಿದ್ಯುತ್ ಕೇಂದ್ರದ ನಿರ್ದೇಶಕ ಬಿ ವಿನೋದ ಕುಮಾರ್ ಮಂಗಳವಾರ ಮಾಧ್ಯಮದವರ ಜೊತೆ ಮಾಹಿತಿ ಹಂಚಿಕೊAಡರು. ಎನ್‌ಪಿಸಿಐಎಲ್ ಕಾರ್ಪೊರೇಟ್ ನಿರ್ವಹಣೆ ವಿಭಾಗದ ಉಮೇದ ಯಾದವ್, ಕೈಗಾ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಸುವರ್ಣಾ ಗಾಂವಕರ್, ಪರಿ ಯೋಜನಾ ನಿರ್ದೇಶಕ ಜೆ ಎಲ್ ಸಿಂಹ , ಕೈಗಾ 1 ಮತ್ತು 2 ನಿರ್ದೇಶಕ ಶ್ರೀರಾಮ್, 3 ಮತ್ತು 4ರ ನಿರ್ದೇಶಕ ಎಸ್ ಕೆ ಓಝಾ, ಮುಂಬಯಿಯ ಬಾಬಾ ಅಣು ವಿಜ್ಞಾನ ಕೇಂದ್ರದ ನಿವೃತ್ತ ನಿರ್ದೇಶಕ ಹೇಮಂತ ಹಲ್ಡವನೇಕರ್ ಇತರರು ಇದ್ದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಅಭಿವೃದ್ಧಿಗೆ ಅನುದಾನವಿಲ್ಲ.. ಸೊಕ್ಕಿನಮಕ್ಕಿ ಸಮಸ್ಯೆ ಕೇಳುವವರಿಲ್ಲ!

Next Post

ಯಲ್ಲಾಪುರ: ಗಾಂಧೀ ಕುಟುಂಬಕ್ಕೆ ಇಲ್ಲ ರಕ್ಷಣೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋