• Latest
Kumta The arrow aimed at the Tahsildar has turned towards the MLAs!

ಕುಮಟಾ: ತಹಶೀಲ್ದಾರರ ಕಡೆಗೆ ಬಿಟ್ಟ ಬಾಣ ತಿರುಗಿದ್ದು ಶಾಸಕರ ಕಡೆಗೆ!

6 hours ago
Prediction for July 23 2025

2025 ಅಗಸ್ಟ 11ರ ದಿನ ಭವಿಷ್ಯ

3 hours ago
Those who went fishing were drowned.

ಮೀನು ಹಿಡಿಯಲು ಹೋದ ಸಹೋದರರು ನೀರುಪಾಲು

3 hours ago
ADVERTISEMENT

ಸಾಲ ಕೊಟ್ಟು ಕೆಟ್ಟ ಗೃಹಲಕ್ಷ್ಮಿ!

3 hours ago
Dyamanna's fight against the pit!

ಹೊಂಡದ ವಿರುದ್ಧ ದ್ಯಾಮಣ್ಣನ ಹೋರಾಟ!

3 hours ago

ಅಂಕೋಲಾ: ಮನೆ ಹಾಳು ಮಟ್ಕಾಗೆ ಆ ನಾಯಕನೇ ರಾಜ!

4 hours ago
Monday, August 11, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಕುಮಟಾ: ತಹಶೀಲ್ದಾರರ ಕಡೆಗೆ ಬಿಟ್ಟ ಬಾಣ ತಿರುಗಿದ್ದು ಶಾಸಕರ ಕಡೆಗೆ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Kumta The arrow aimed at the Tahsildar has turned towards the MLAs!

ಕುಮಟಾ ತಹಶೀಲ್ದಾರರ ವರ್ಗಾವಣೆಗೆ ಆಗ್ರಹಿಸಿದ್ದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಇದೀಗ ತಹಶೀಲ್ದಾರ್ ವರ್ಗಾವಣೆಗೆ ವಿರೋಧವ್ಯಕ್ತಪಡಿಸಿದ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.

ADVERTISEMENT

`ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ ಅವರು ಜನ ಸಾಮಾನ್ಯರ ಕೆಲಸ ಮಾಡಲು ಅಲೆದಾಡಿಸುತ್ತಿದ್ದಾರೆ’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೆಲ್ ರೋಡ್ರಿಗಸ್ ದೂರಿದ್ದರು. `ಈ ತಹಶೀಲ್ದಾರರನ್ನು ವರ್ಗಾಯಿಸಿ’ ಎಂದವರು ಸರ್ಕಾರಕ್ಕೆ ದೂರು ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ತಹಶೀಲ್ದಾರ್ ಶ್ರೀಕೃಷ್ಣ ಕಾಮುಕರ್ `ಸರ್ಕಾರಿ ಕೆಲಸ ಮಾಡಿಸಿಕೊಳ್ಳಲು ಮದ್ಯವರ್ತಿಗಳ ನೆರವುಪಡೆಯಬೇಡಿ’ ಎಂದು ಪ್ರಕಟಣೆ ನೀಡಿದ್ದರು. ತಹಶೀಲ್ದಾರ್ ಕಾರ್ಯದ ಬಗ್ಗೆ ಶಾಸಕ ದಿನಕರ ಶೆಟ್ಟಿ ಹಾಗೂ ಬಿಜೆಪಿ ಮಂಡಳ ಅಧ್ಯಕ್ಷ ಕುಮಾರ ಮಾರ್ಕಾಂಡೆ ಮೆಚ್ಚುಗೆಯ ಮಾತನಾಡಿದ್ದರು.

ADVERTISEMENT

ಈ ವೇಳೆ ಶಾಸಕ ದಿನಕರ ಶೆಟ್ಟಿ `ಯಾವುದೋ ಸಂಸ್ಥೆ ಹೆಸರಿನಲ್ಲಿ ತಹಶೀಲ್ದಾರರ ವರ್ಗಾವಣೆಗೆ ಆಗ್ರಹಿಸುವುದು ಸರಿಯಲ್ಲ. ಕೆಲಸ ಮಾಡುವ ಅಧಿಕಾರಿಗಳನ್ನು ಇಲ್ಲಿಂದ ವರ್ಗಾಯಿಸಿ ಎನ್ನಲು ಇವರು ಯಾರು? ಅವರು ಮಾಡಿದ ಸಮಾಜ ಸೇವೆ ಏನು? ಎಂದು ಪ್ರಶ್ನಿಸಿರುವುದು ಮಾಧ್ಯಮವೊಂದರಲ್ಲಿ ಪ್ರಕಟವಾಗಿದೆ. ಇದಕ್ಕೆ ಆಗ್ನೆಲ್ ರೋಡಿಗ್ರಸ್ ಸಿಡಿದೆದ್ದಿದ್ದು, ತಮ್ಮ ಸಂಸ್ಥೆಯ ಸಾಮಾಜಿಕ ಚಟುವಟಿಕೆಯ ಬಗ್ಗೆ ಶಾಸಕರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

`5 ತಿಂಗಳ ಹಿಂದೆ ನೀಡಿದ ಅರ್ಜಿಗೂ ತಹಶೀಲ್ದಾರ್ ಕಚೇರಿಯಿಂದ ಹಿಂಬರಹ ಬಂದಿಲ್ಲ. ಈ ಬಗ್ಗೆ ಕಂದಾಯ ಸಚಿವರಿಗೆ ದೂರು ನೀಡಿದ ಕಾರಣ ಶಾಸಕರು ಜನಸಾಮಾನ್ಯರ ಸಮಾಜ ಸೇವಾ ಸಂಸ್ಥೆಯ ಕೆಲಸದ ಬಗ್ಗೆ ಪ್ರಶ್ನಿಸಿದ್ದಾರೆ. ಕಳೆದ ಐದು ವರ್ಷಗಳಿಂದ ನಿರ್ಗತಿಕರಿಗೆ ಆಹಾರದ ಕಿಟ್ ವಿತರಣೆ, ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ಮೇಲಧಿಕಾರಿಗಳಿಗೆ ದೂರು, ಅನ್ಯಾಯ-ಅಕ್ರಮದ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ಮನವಿ ಸೇರಿ ಹಲವು ಬಗೆಯ ಕೆಲಸವನ್ನು ಸಂಸ್ಥೆ ಮಾಡುತ್ತಿದೆ. ಭಿಕ್ಷÄಕರಿಗೆ ಸಹ ಆಧಾರ್ ಕಾರ್ಡ ಮಾಡಿಕೊಟ್ಟಿರುವುದು, ಆಸ್ಪತ್ರೆ ಸೇರಿದ ಬಡವರಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಪರಿಹಾರಕ್ಕೆ ಅರ್ಜಿ ಸಲ್ಲಿಸಿರುವುದು ಸೇರಿ ಹಲವು ಕೆಲಸ ಮಾಡಲಾಗಿದೆ. ಇದಕ್ಕೆ ಮಾಜಿ ಶಾಸಕಿ ಶಾರದಾ ಶೆಟ್ಟಿ ಹಾಗೂ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರು ಮೆಚ್ಚುಗೆ ಸೂಚಿಸಿದ್ದಾರೆ’ ಎಂದು ಸಂಸ್ಥೆ ಅಧ್ಯಕ್ಷ ಆಗ್ನೆಲ್ ರೋಡ್ರಿಗಸ್ ವಿವರಿಸಿದ್ದಾರೆ.

`ನಾವು ಯಾವುದೇ ಸರ್ಕಾರಿ ಹಣದಿಂದ ಸೇವೆ ಮಾಡುತ್ತಿಲ್ಲ. ಸ್ವಂತ ದುಡಿಮೆಯಿಂದ ಈ ಕೆಲಸ ಮಾಡುತ್ತಿದ್ದು, ಈ ಬಗ್ಗೆ ಶಾಸಕರು ತಿಳಿದುಕೊಳ್ಳಬೇಕು. ನಮ್ಮ ಜಿಲ್ಲೆಗೆ ಸಾಕಷ್ಟು ಅಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ, ನಾವು ಅನಗತ್ಯವಾಗಿ ಯಾರ ವಿರುದ್ಧವೂ ಆರೋಪ ಮಾಡಿಲ್ಲ’ ಎಂದು ಹೇಳಿದ್ದಾರೆ. `ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ ವಿರುದ್ಧ ಈ ಹಿಂದೆ ನ್ಯಾಯವಾದಿ ನಾಗರಾಜ ಹೆಗ್ಡೆ ಅವರು ಆರೋಪ ಮಾಡಿದ್ದರು. ಆಗಲೂ ಅವರು ವರ್ಗಾವಣೆಗೆ ಒತ್ತಾಯಿಸಿದ್ದರು’ ಎಂಬ ವಿಷಯವನ್ನು ಉಲ್ಲೇಖಿಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಶಕ್ತಿ ಯೋಜನೆ: ಆಧಾರ್ ಇದ್ದರೂ ಈ ಬಸ್ ಪ್ರಯಾಣ ಉಚಿತವಲ್ಲ!

Next Post

ಬಾವಿಗೆ ಮುಳುಗಿದವ ನಾಪತ್ತೆ: ಮರುದಿನ ಶವ ಪತ್ತೆ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋