ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ನಿಟ್ಟಿನಲ್ಲಿ ಲಕ್ಷ್ಮೀರಂಗನಾಥ ಎಜ್ಯುಕೇಶನ್ ಟ್ರಸ್ಟಿನವರು ಕಾರವಾರದಲ್ಲಿ `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ ಸ್ಥಾಪಿಸಿದರು. 2006ರಲ್ಲಿ ಆರು ಮಕ್ಕಳಿಂದ ಶುರುವಾದ ಶಾಲೆಯಲ್ಲಿ ಇದೀಗ 250 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.
Advertisement. Scroll to continue reading.
ನಗರ ಪ್ರದೇಶದ ಮಕ್ಕಳು ಮಾತ್ರ ಇಂಗ್ಲಿಷ್ ಶಾಲೆಗೆ ಹೋಗುವುದನ್ನು ಕಂಡ ಲಕ್ಷ್ಮೀರಂಗನಾಥ ಎಜ್ಯುಕೇಶನ್ ಟ್ರಸ್ಟಿನ ಸಂಸ್ಥಾಪಕ ಅಧ್ಯಕ್ಷ ಶರಣಪ್ಪ ಅವರು `ಗ್ರಾಮೀಣ ಭಾಗದ ಮಕ್ಕಳನ್ನು ಮುಖ್ಯವಾಹಿನಿಗೆ ತರಬೇಕು’ ಎಂದು ಕನಸು ಕಂಡರು. ಈ ಕನಸು ಈಡೇರಿಕೆಗಾಗಿ ಅವರು ಗ್ರಾಮೀಣ ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಹೊಣೆಯನ್ನು ಅವರು `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಪ್ರಾಚಾರ್ಯೆ ನಾಗರತ್ನ ಅವರಿಗೆವಹಿಸಿದರು. 2006ರಿಂದಲೂ ತಮ್ಮಲ್ಲಿ ಬಂದ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಲು `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಪ್ರಾಚಾರ್ಯೆ ನಾಗರತ್ನ ಅವರು ಶ್ರಮಿಸುತ್ತಿದ್ದಾರೆ. ಸಂಪನ್ಮೂಲ ವ್ಯಕ್ತಿಗಳ ಸಹಕಾರ, ಶಿಕ್ಷಕರ ನಿರಂತರ ಪ್ರಯತ್ನ, ಗುಣಾತ್ಮಕ ಶಿಕ್ಷಣದ ಪ್ರಭಾವದಿಂದ ಶಾಲೆ ಸ್ಥಾಪನೆಯಾದ ವರ್ಷದಿಂದ ಈವರೆಗೂ `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ ಶೇ 100ರ ಫಲಿತಾಂಶ ದಾಖಲಿಸುತ್ತಿದೆ.
Advertisement. Scroll to continue reading.
ಎಲ್ಲಾ ಕಡೆ SSLC ನಂತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತದೆ. ಆದರೆ, ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ಪ್ರವೇಶಪಡೆದವರಿಗೆ JEE, NEET ಪರೀಕ್ಷೆ ಎದುರಿಸುವ ವಿಧಾನಗಳ ಬಗ್ಗೆ ಕಲಿಸಲಾಗುತ್ತದೆ. ಮಕ್ಕಳಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿ, ಅವರನ್ನು ಉತ್ತಮ ಪ್ರಜೆಗಳನ್ನಾಗಿಸಲು ಈ ಶಾಲೆ ನಿತ್ಯವೂ ಶ್ರಮಿಸುತ್ತಿದೆ. ಅದರ ಪರಿಣಾಮವಾಗಿ ಇಲ್ಲಿSSLC ಪರೀಕ್ಷೆ ಎದುರಿಸಿದ ಅನೇಕ ಮಕ್ಕಳು ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಮುಂದಿನ ಶಿಕ್ಷಣಕ್ಕಾಗಿ ಆಯ್ಕೆಯಾಗಿದ್ದಾರೆ.
ರಾಜ್ಯ-ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಇಲ್ಲಿನ ಮಕ್ಕಳು ಸಾಧನೆ ಮಾಡಿದ್ದಾರೆ. ಪಠ್ಯದ ಜೊತೆ ಕರಾಟೆ, ಅಭ್ಯಾಕಾಸ್, ನೃತ್ಯ, ಗಾಯನ ಸೇರಿ ಅನೇಕ ತರಬೇತಿಗಳನ್ನು ಇಲ್ಲಿನ ಮಕ್ಕಳಿಗೆ ನೀಡಲಾಗುತ್ತದೆ. ಅವರವರ ಆಸಕ್ತಿ ಗುರುತಿಸಿ ಅದಕ್ಕೆ ಪ್ರೋತ್ಸಾಹಿಸುವ ನುರಿತ ಶಿಕ್ಷಕರು ಈ ಶಾಲೆಯಲ್ಲಿದ್ದಾರೆ. ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರತಿ ಮಗುವಿಗೂ ಕಂಪ್ಯುಟರ್ ಶಿಕ್ಷಣ ಕೊಡಲಾಗುತ್ತದೆ. ಈ ಶಾಲೆಯಲ್ಲಿ ಪ್ರತಿ ಮಗುವಿಗೂ ಕಂಪ್ಯುಟರ್ ಕಲಿಸಲಾಗುತ್ತದೆ. ಜಿಲ್ಲೆಯಲ್ಲಿಯೇ ಮೊದಲ ಸ್ಮಾರ್ಟ ಕ್ಲಾಸ್ ಅಳವಡಿಸಿಕೊಂಡ ಶಾಲೆ ಎಂಬ ಹೆಗ್ಗಳಿಗೆಗೂ ಪಾತ್ರವಾಗಿದೆ. ಈ ಶಾಲೆಯ ಸಾಧನೆ ನೋಡಿದ ಗ್ಲೋಬಲ್ ಎಜುಕ್ರಿವ್ ಸಂಸ್ಥೆಯೂ ಚನೈಯನಲ್ಲಿ ನಡೆದ ಕಾರ್ಯಕ್ರಮದಲ್ಲಿ `ಎಕ್ಸಲೆಂಟ್ ಸ್ಕೂಲ್’ ಎಂಬ ಅವಾರ್ಡ ನೀಡಿದೆ.
ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ:
`ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಬಸ್ಸು ಪ್ರತಿ ದಿನ ಬೆಳಗ್ಗೆ ವಿವಿಧ ಹಳ್ಳಿಗಳಿಗೆ ಸಂಚರಿಸುತ್ತದೆ. ಸುರಕ್ಷಿತವಾಗಿ ಮಕ್ಕಳನ್ನು ಶಾಲಾ ಆವರಣಕ್ಕೆ ಕರೆತರುತ್ತದೆ. ಶಾಲೆ ಮುಗಿದ ನಂತರ ಮಕ್ಕಳನ್ನು ಮತ್ತೆ ಮನೆಗೆ ಬಿಡುವ ಹೊಣೆಯನ್ನು ಈ ಸಂಸ್ಥೆವಹಿಸಿಕೊ0ಡಿದೆ. ಶಾಲೆಯ ಆವರಣದೊಂದಿಗೆ ಸುತ್ತಲು ಸಿಸಿ ಕ್ಯಾಮರಾ ಅಳವಡಿಸಿ ಸುರಕ್ಷತೆಗೆ ಒತ್ತು ನೀಡಲಾಗಿದೆ.
ಎಲ್ಲವೂ ಇಲ್ಲೆ!
LKG ಪ್ರವೇಶಪಡೆದ ಮಗು SSLC ಮುಗಿಸುವವರೆಗೂ ಇಲ್ಲಿ ಶಿಕ್ಷಣಕ್ಕೆ ಅವಕಾಶವಿದೆ. ಇಲ್ಲಿ ಬೇರೆ ಬೇರೆ ಭಾಗದಿಂದ ಬರುವ ಸಂಪನ್ಮೂಲ ವ್ಯಕ್ತಿಗಳು ಮಕ್ಕಳಿಗೆ ವಿಶೇಷ ಪಾಠ ಮಾಡುತ್ತಾರೆ. ಪ್ರತಿ ವಿದ್ಯಾರ್ಥಿಗೂ ಇಂಗ್ಲೀಷ್ ವಿಷಯವಾಗಿ ONLINE ತರಗತಿಯನ್ನು ನಡೆಸಲಾಗುತ್ತದೆ. ಕೋವಿಡ್ ಸಮಯದಲ್ಲಿ ಸಹ ನಿತ್ಯವೂ ONLINE ಮೂಲಕ ಮಕ್ಕಳನ್ನು ಮಾತನಾಡಿಸಿ ಅವರ ವಿದ್ಯಾಬ್ಯಾಸ, ಆರೋಗ್ಯದ ಬಗ್ಗೆ ಶಿಕ್ಷಕರು ಕಾಳಜಿವಹಿಸಿದ್ದು, ಇಲ್ಲಿನ ಶಿಕ್ಷಕರು ಮಕ್ಕಳ ಜೊತೆ ಭಾವನಾತ್ಮಕವಾಗಿ ಬೆಸೆದುಕೊಂಡಿದ್ದಾರೆ. ಇಲ್ಲಿ ನಡೆಯುವ ರಜಾ ಅವಧಿಯಲ್ಲಿನ ಶಿಬಿರಗಳ ಕ್ರಿಯಾತ್ಮಕ ಚಟುವಟಿಕೆಗಳು ಬೇರೆ ಎಲ್ಲಿಯೂ ಸಿಗದು!
ಆರೋಗ್ಯ ಶಿಕ್ಷಣಕ್ಕಾಗಿ ಬೆಬಿ ಅವಾರ್ಡ!
ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ವರ್ಷದಿಂದ `ಬೆಬಿ ಅವಾರ್ಡ’ ಎಂಬ ವಿನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ. ನವಜಾತ ಶಿಶು, ಬಾಣಂತಿ ಹಾಗೂ ಎರಡು ವರ್ಷದೊಳಗಿನ ಮಕ್ಕಳಿಗೆ ಶುಚಿತ್ವ ಹಾಗೂ ಆರೋಗ್ಯದ ಬಗ್ಗೆ ಈ ಯೋಜನೆ ಕಾಳಜಿವಹಿಸುತ್ತದೆ. ಮಕ್ಕಳ ಜೊತೆ ಅವರ ತಾಯಿಗೂ ಆರೋಗ್ಯ ಶಿಕ್ಷಣ ನೀಡಿ, ಮನೆಯ ವಾತಾವರಣವನ್ನು ಶುಚಿತ್ವವಾಗಿರಿಸಿಕೊಳ್ಳುವ ಆಂದೋಲನ ಇದಾಗಿದೆ. ಮಕ್ಕಳ ಶುಚಿತ್ವ ಹಾಗೂ ಆರೋಗ್ಯ ಕಾಪಾಡುವಲ್ಲಿ ಕಾಳಜಿವಹಿಸಿದ 125 ಪಾಲಕರಿಗೆ `ಬೆಬಿ ಅವಾರ್ಡ’ ನೀಡಿ ಗೌರವಿಸಲಾಗುತ್ತದೆ.
ಪ್ರವೇಶ ಪ್ರಕಟಣೆ:
ಮೌಲ್ಯಾಧಾರಿತ ಶಿಕ್ಷಣದಿಂದ ಪ್ರಸಿದ್ಧಿಪಡೆದ `ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ’ಯ ಪ್ರವೇಶಾತಿ ಪ್ರಕಟಣೆ ಹೊರಬಿದ್ದಿದೆ.
ನಿಮ್ಮ ಮಕ್ಕಳ ಪ್ರವೇಶ ಪ್ರಕಟಣೆಗಾಗಿ ಇಲ್ಲಿ ಭೇಟಿ ನೀಡಿ..
ಎಜುಕೇರ್ ಆಂಗ್ಲ ಮಾಧ್ಯಮ ಶಾಲೆ
ಅಮದಳ್ಳಿ, ಕಾರವಾರ
Advertisement. Scroll to continue reading.
ಇಲ್ಲಿ ಫೋನ್ ಮಾಡಿ:
8431251118 ಅಥವಾ 9481914911

Sponsored