ಅಡಿಕೆ ಮರ ಏರುವ ಕೆಲಸ ಮಾಡುತ್ತಿದ್ದ ದೀನು ಮರಾಠಿ ಮರದಿಂದ ಬಿದ್ದು ಆ ವೃತ್ತಿ ತೊರೆಯುವಂತಾಗಿದ್ದು, ಮೂರು ವರ್ಷದ ಹಿಂದೆ ಅವರು ಪ್ರೀತಿಯಿಂದ ಆರೈಕೆ ಮಾಡಿದ್ದ ಗಿಡಗಳೇ ಅವರ ಬದುಕಿಗೆ ಆಸರೆಯಾಗಿದೆ. ಕಷ್ಟಕಾಲದಲ್ಲಿ ಅವರ ಬದುಕಿಗೆ ಅಂಟಿದ್ದ ಆರ್ಥಿಕ ‘ಬರ’ವನ್ನು ಆ ಬಳ್ಳಿಗಳು ದೂರ ಮಾಡಿವೆ.
Advertisement. Scroll to continue reading.
ಶಿರಸಿ-ಯಲ್ಲಾಪುರ ರಸ್ತೆಯ ಮಾವಿನಕಟ್ಟಾ ಬಳಿಯಿರುವ ಭರತನಳ್ಳಿಯಲ್ಲಿ ದೀನು ಗೌಡ ಭೂಮಿ ಹೊಂದಿದ್ದಾರೆ. ಅವರು ಅಡಿಕೆ ಗಿಡದ ಜೊತೆ ಕಾಳು ಮೆಣಸು ಬೆಳೆದಿದ್ದು, ಆ ಕಾಳು ಮೆಣಸಿನ ಗಿಡ ಇದೀಗ ಅವರ ಜೀವನಕ್ಕೆ ಆಧಾರವಾಗಿದೆ. ಇಲ್ಲಿನ 1 ಎಕರೆ ಭೂಮಿಯಲ್ಲಿನ ಅಡಿಕೆ ಮರಗಳಿಗೆ ಅವರು ನಾಲ್ಕು ವರ್ಷದ ಹಿಂದೆ 450 ಮೆಣಸಿನ ಬಳ್ಳಿ ನೆಟ್ಟಿದ್ದರು. ಸಾಧಕ ಕೃಷಿಕ ಷಣ್ಮುಖ ಗೌಡ ಅವರ ಸಲಹೆ ಮೇರೆಗೆ ಆ ಗಿಡಗಳ ಆರೈಕೆ ಮಾಡಿದ್ದರು. ಪ್ರತಿ ಮರದ ಬುಡದಲ್ಲಿ ಎರಡು ಕುಡಿ ನೆಟ್ಟು, ನಂತರ ಆರೋಗ್ಯವಂತ ಒಂದು ಕುಡಿಯನ್ನು ಅವರು ಉಳಿಸಿಕೊಂಡಿದ್ದರು. ಗಿಡಗಳ ಆಹಾರಕ್ಕಾಗಿ ಕಾಲಕಾಲಕ್ಕೆ ಕೊಟ್ಟಿಗೆ ಗೊಬ್ಬರ ಉಣಿಸುತ್ತಿದ್ದರು. ರೋಗ ಬಾರದಂತೆ ತುತ್ತ-ಸುಣ್ಣ ಸಿಂಪಡಿಸುತ್ತಿದ್ದರು.
Advertisement. Scroll to continue reading.
Advertisement. Scroll to continue reading.
ಅತ್ಯoತ ಕಾಳಜಿ ಹಾಗೂ ಪ್ರೀತಿಯಿಂದ ಗಿಡ ಆರೈಕೆ ಮಾಡಿದ ಫಲವಾಗಿ 450 ಗಿಡಗಳಿಂದ ಮೂರನೇ ವರ್ಷದಲ್ಲಿ 90 ಕೆಜಿ ಹಾಗೂ ನಾಲ್ಕನೇ ವರ್ಷದಲ್ಲಿ 3.30 ಕ್ವಿಂಟಲ್ ಒಣ ಕಾಳುಮೆಣಸನ್ನು ಅವರು ಪಡೆದಿದ್ದಾರೆ. ಕಳೆದ ವರ್ಷ ಮರದಿಂದ ಬಿದ್ದ ನೋವುಸಹಿಸಿಕೊಂಡು ಈಗಷ್ಟೇ ನಡೆಯಲು ಶುರು ಮಾಡಿದ 32 ವರ್ಷದ ದೀನು ಮರಾಠಿ ಅವರಿಗೆ ಯಾವ ಕೆಲಸ ಮಾಡಲು ಅಸಾಧ್ಯ. ಹೀಗಿರುವಾಗ ಮೊದಲು ಆರೈಕೆ ಮಾಡಿದ್ದ ಕಾಳು ಮೆಣಸಿನ ಕೃಷಿ ಅವರ ಬದುಕನ್ನು ಮುನ್ನೆಡೆಸುತ್ತಿದೆ.
ಅದೇ ಊರಿನ ಪ್ರಗತಿಪರ ಕೃಷಿಕ ಷಣ್ಮುಖ ಗೌಡ ಮಾರ್ಗದರ್ಶನದಲ್ಲಿ ಅವರು ಕಾಳು ಮೆಣಸು ಬೆಳೆದವರು. ಇವರ ತೋಟ ನೋಡಬಯಸುವವರು ಫೋನ್ ಮಾಡಿ ಬರಬಹುದು. ಮೋ: 8277125221