ಭಟ್ಕಳದ ಅಂಜುಮಾನ್ ಇನ್ಸಟ್ಯುಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಕಾಲೇಜಿನ ಲ್ಯಾಬ್ ಟೆಕ್ನಿಶಿಯನ್ ಶ್ರೀಧರ ಮೊಗೇರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅವರ ತಮ್ಮ ಸಾವಿನ ಕಾರಣ ಬಿಚ್ಚಿಟ್ಟಿದ್ದಾರೆ.
ಮುರುಡೇಶ್ವರ ಬಳಿಯ ತೆರ್ನಮಕ್ಕಿಯ ಬಾಳ್ನಿ ಬಳಿ ಶ್ರೀಧರ ಮೊಗೇರ್ (45) ಅವರು ವಾಸವಾಗಿದ್ದರು. ಹಲವು ಬ್ಯಾಂಕುಗಳಲ್ಲಿ ಅವರು ಸಾಲ ಮಾಡಿಕೊಂಡಿದ್ದರು. ಕಡಿಮೆ ಸಂಬಳಕ್ಕೆ ದುಡಿಯುತ್ತಿದ್ದ ಕಾರಣ ಅವರಿಗೆ ಜೀವನ ನಿರ್ವಹಣೆ ಕಷ್ಟವಾಗಿತ್ತು. ಕಾಲೇಜಿನವರು ತುಟ್ಟಿಭತ್ಯೆಯನ್ನು ಸಹ ನೀಡಿರಲಿಲ್ಲ. ಹೀಗಾಗಿ ಸಾಲ ತೀರಿಸಲು ಸಹ ಸಾಧ್ಯವಾಗಿರಲಿಲ್ಲ.
ಹೀಗಾಗಿ ಜೀವನ ನಿರ್ವಹಣೆ ಕಷ್ಟ ಎಂದು ನಿರ್ಧರಿಸಿದ ಶ್ರೀಧರ ಮೊಗೇರ್ ಅವರು ಜೂನ್ 24ರಂದು ಕಾಲೇಜಿನ ಕೊಠಡಿಯೊಳಗೆ ನೇಣಿಗೆ ಶರಣಾದರು. ಜೂನ್ 25ರಂದು ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿತು. ಈ ವೇಳೆ ಅವರು ಸಾವಿನ ಕಾರಣ ಬರೆದಿಟ್ಟಿರುವ ಚೀಟಿಯೂ ಸಿಕ್ಕಿತು.
ಆ ಚೀಟಿಯಲ್ಲಿ ಕಾಲೇಜಿನ ಆಡಳಿತ ಮಂಡಳಿ, ಪ್ರಿನ್ಸಿಪಾಲ್ ಹಾಗೂ ದಿನೇಶ್ ಶೇಟ್ ಎಂಬಾತರ ಹೆಸರನ್ನು ನಮೂದಿಸಿದ್ದರು. ಹೀಗಾಗಿ ಶ್ರೀಧರ ಮೊಗೇರ್ ಅವರ ಸಾವಿನಲ್ಲಿ ಅನುಮಾನಗಳಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಅವರ ಪತ್ನಿ ಮಮಾ ಮೊಗೇರ್ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಮಮತಾ ಅವರು ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದಾರೆ.
Discussion about this post