ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಜುಲೈ 4 ರಂದು ನಾಲ್ಕು ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ ಹಾಗೂ ಜೊಯಡಾ ತಾಲೂಕಿನ ಶಾಲೆಗಳಿಗೆ ಜುಲೈ 4ರಂದು ಮಳೆ ರಜೆ ಸಿಗಲಿದೆ. ಶಿರಸಿ ತಹಶೀಲ್ದಾರ್ ಅವರ ವರದಿ, ಶಿಕ್ಷಣ ಇಲಾಖೆಯ ಪತ್ರದ ಆಧಾರದಲ್ಲಿ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ADVERTISEMENT
ADVERTISEMENT
ಪ್ರಾಥಮಿಕ, ಪ್ರೌಢ ಹಾಗೂ ಅಂಗನವಾಡಿಗಳಿಗೆ ಮಾತ್ರ ಈ ರಜೆ ನಿಯಮ ಅನ್ವಯವಾಗಲಿದೆ. ಕಾಲೇಜುಗಳಿಗೆ ರಜೆ ಇಲ್ಲ. ರಜಾ ಅವಧಿಯ ಪಠ್ಯವನ್ನು ಎಂದಿನoತೆ ಬೇಸಿಗೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
Discussion about this post