• Latest
A good deed done to a bad deed A contractor who burned his hand doing government work!

ಉಪಕಾರ ಮಾಡಿದವನಿಗೆ ಅಪಕಾರ: ಸರ್ಕಾರಿ ಕೆಲಸ ಮಾಡಿ ಕೈ ಸುಟ್ಟುಕೊಂಡ ಗುತ್ತಿಗೆದಾರ!

4 weeks ago
Prediction for July 23 2025

2025ರ ಅಗಸ್ಟ್ 5ರ ದಿನ ಭವಿಷ್ಯ

7 hours ago
ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

7 hours ago
ADVERTISEMENT
People's support for Janaushadhi Kendra

ಜನೌಷಧಿ ಕೇಂದ್ರಕ್ಕೆ ಜನ ಬೆಂಬಲ

8 hours ago
New office for Kumta MLA Dinakar Shetty is present here every day!

ಕುಮಟಾ ಶಾಸಕರಿಗೆ ಹೊಸ ಕಚೇರಿ: ದಿನಕರ ಶೆಟ್ಟಿ ದಿನವೂ ಇಲ್ಲಿ ಹಾಜರಿ!

8 hours ago
Fight.. Fight Another fight against MLAs who are not responding to the problem!

ಹೋರಾಟ.. ಹೋರಾಟ: ಸಮಸ್ಯೆಗೆ ಸ್ಪಂದಿಸದ ಶಾಸಕರ ವಿರುದ್ಧ ಮತ್ತೊಂದು ಹೋರಾಟ!

8 hours ago
ADVERTISEMENT
Tuesday, August 5, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಉಪಕಾರ ಮಾಡಿದವನಿಗೆ ಅಪಕಾರ: ಸರ್ಕಾರಿ ಕೆಲಸ ಮಾಡಿ ಕೈ ಸುಟ್ಟುಕೊಂಡ ಗುತ್ತಿಗೆದಾರ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
A good deed done to a bad deed A contractor who burned his hand doing government work!
Advertisement is not enabled. Advertisement is not enabled. Advertisement is not enabled.
ADVERTISEMENT

ಬೈಕ್ ಸಹ ತೆರಳಲು ಅಸಾಧ್ಯವಾಗಿದ್ದ ಕಾರವಾರದ ಗುಡ್ಡಳ್ಳಿಗೆ ಸುಗಮ ಸಂಚಾರದ ರಸ್ತೆ ಮಾಡಿಕೊಟ್ಟ ಗುತ್ತಿಗೆದಾರ ಕೆಲಸದ ಮೊತ್ತ ಪಾವತಿಗಾಗಿ ಅಲೆದಾಡುತ್ತಿದ್ದಾರೆ. ಕೆಲಸ ಮುಗಿದು ವರ್ಷ ಕಳೆದರೂ ಗುತ್ತಿಗೆದಾರ ವ್ಯಯಿಸಿದ ಹಣ ಸರ್ಕಾರದಿಂದ ಸಿಕ್ಕಿಲ್ಲ!

ಕಾರವಾರ ನಗರ ಪ್ರದೇಶದಲ್ಲಿದ್ದರೂ ಗುಡ್ಡಳ್ಳಿ ಮೂಲಭೂತ ಸೌಕರ್ಯದಿಂದ ವಂಚಿತವಾಗಿತ್ತು. ಈ ಊರಿಗೆ ತೆರಳಲು ಯೋಗ್ಯ ರಸ್ತೆ ನಿರ್ಮಿಸಿಕೊಡಿ ಎಂದು ಜನರು ಸರ್ಕಾರದ ಬಳಿ ಅಂಗಲಾಚಿದ್ದರು. ಸಾಕಷ್ಟು ಹೋರಾಟದ ನಂತರ ಕಳೆದ ವರ್ಷ ಗುಡ್ಡಳ್ಳಿಗೆ ರಸ್ತೆ ಮಂಜೂರಿಯಾಯಿತು. ಕಾರವಾರದ ಡಾಲ್ಪಿನ್ ಕಂಪನಿ ಗುತ್ತಿಗೆ ಕೆಲಸವಹಿಸಿಕೊಂಡಿತು.

ADVERTISEMENT

`ಕಚ್ಚಾ ರಸ್ತೆ ಸುಧಾರಣೆ ಮರುಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆ ನಿರ್ಮಾಣ‘ ಎಂಬ ಶೀರ್ಷಿಕೆಯ ಅಡಿ ಈ ರಸ್ತೆ ಅಭಿವೃದ್ಧಿ ಕೆಲಸ ನಡೆಯಿತು. ಶೀರ್ಷಿಕೆಯ ಅಡಿ ಕಾಂಕ್ರೇಟ್ ರಸ್ತೆ ನಿರ್ಮಾಣ ಎಂದಿದ್ದರೂ ಗುತ್ತಿಗೆದಾರರಿಗೆ ಒದಗಿಸಿದ ಅಂದಾಜು ಪತ್ರಿಕೆಯಲ್ಲಿ ಕಾಂಕ್ರೇಟ್ ರಸ್ತೆ ನಿರ್ಮಾಣದ ಪ್ರಸ್ತಾಪವೇ ಇರಲಿಲ್ಲ. ರಸ್ತೆಯ ಮಣ್ಣು ತೆಗೆಯುವುದು ಹಾಗೂ ಕಡಿ ಹಾಕುವ ಬಗ್ಗೆ ಮಾತ್ರ ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಲಾಗಿತ್ತು. ರಸ್ತೆ ಕೆಲಸದ ವೇಳೆ ಸಾಕಷ್ಟು ದೊಡ್ಡ ದೊಡ್ಡ ಬಂಡೆಗಲ್ಲುಗಳು ಬಂದರೂ ಅದನ್ನು ಒಡೆದು ಸಿದ್ಧಾರ್ಥ ನಾಯ್ಕ ಅವರು ಗುಡ್ಡಳ್ಳಿಗೆ ರಸ್ತೆ ಮಾಡಿದರು.

ಧಾರಾಕಾರ ಮಳೆ, ಜನರ ಸಮಸ್ಯೆ ಅರಿತ ಗುತ್ತಿಗೆದಾರರು 2ಕಿಮೀ ದೂರದವರೆಗೆ ಸಾಮಗ್ರಿಗಳನ್ನು ಹೊತ್ತು ಸಾಗಿಸಿದರು. ಅದಾದ ನಂತರ ಯಂತ್ರೋಪಕರಣಗಳನ್ನು ಬಳಸಿ ಗುಡ್ಡ ಕೊರೆದು ರಸ್ತೆ ಮಾಡಿದರು. ಸರ್ಕಾರವಹಿಸಿದ ಕಾಮಗಾರಿಯ ಜೊತೆ ಕಲ್ಬಂಡೆಗಳನ್ನು ತೆಗೆಯುವ ಹೆಚ್ಚುವರಿ ಕಾಮಗಾರಿಯನ್ನು ಸಹ ಸಿದ್ಧಾರ್ಥ ನಾಯ್ಕ ನಿರ್ವಹಿಸಿದರು. ಇದರ ಪರಿಣಾಮವಾಗಿ ಗುಡ್ಡಳ್ಳಿಗೆ ಜೀಪ್ ಸಂಚರಿಸುವಷ್ಟರ ಮಟ್ಟಿಗೆ ರಸ್ತೆ ನಿರ್ಮಾಣವಾಯಿತು.

Advertisement. Scroll to continue reading.
ADVERTISEMENT

ಕಾರವಾರ ನಗರಸಭೆಯ ಜೀಪ್ ನಿತ್ಯ ಗುಡ್ಡಳ್ಳಿ ಓಡಾಟ ನಡೆಸಿ, ಜನರಿಗೆ ಅನುಕೂಲ ಮಾಡಿಕೊಟ್ಟಿತು. ಈ ವೇಳೆ ನಿರಂತರವಾಗಿ ಸುರಿದ ಮಳೆಗೆ ರಸ್ತೆ ಮೇಲೆ ಹಾಕಲಾಗಿದ್ದ ಜಲ್ಲಿ ಅಕ್ಕ-ಪಕ್ಕ ಕೊಚ್ಚಿ ಹೋಗಿದ್ದು, ಕೆಲವರು ರಸ್ತೆ ಕೆಲಸ ಸರಿ ಆಗಿಲ್ಲ ಎಂದು ಪತ್ರ ಬರೆದರು. ಪರಿಣಾಮವಾಗಿ ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಿದ್ದ 45 ಲಕ್ಷ ರೂ ಬರಲೇ ಇಲ್ಲ. ಟೆಂಡರ್’ನಲ್ಲಿ ನಮೂದಿಸಿದಕ್ಕಿಂತಲೂ ಹೆಚ್ಚಿನ ಕೆಲಸ ಮಾಡಿದರೂ ಅಧಿಕಾರಿಗಳು ಕೆಲಸದ ಮೊತ್ತ ಪಾವತಿಸದೇ ಅಲೆದಾಡಿಸುತ್ತಿದ್ದಾರೆ.

Advertisement. Scroll to continue reading.

ಗುಡ್ಡಳ್ಳಿ ರಸ್ತೆ ನಿರ್ಮಿಸಿದ ಗುತ್ತಿಗೆದಾರ ಸಿದ್ಧಾರ್ಥ ನಾಯ್ಕ ಅವರು ಕಳೆದ ಒಂದು ವರ್ಷದಿಂದ ತಾವು ಮಾಡಿದ ಕೆಲಸದ ಹಣಕ್ಕಾಗಿ ಓಡಾಟ ನಡೆಸುತ್ತಿದ್ದಾರೆ. ಗುಡ್ಡಳ್ಳಿ ಕೆಲಸಕ್ಕಾಗಿ ದುಡಿದ ಕೂಲಿ ಕಾರ್ಮಿಕರ ವೇತನ, ಯಂತ್ರೋಪಕರಣ ಬಾಡಿಗೆ ಸೇರಿ ಎಲ್ಲಾ ವೆಚ್ಚವನ್ನು ಭರಿಸಿದ ಅವರು ಸರ್ಕಾರಿ ಹಣ ಬಾರದ ಕಾರಣ ತಲೆಬಿಸಿಯಲ್ಲಿದ್ದಾರೆ. ಜನರ ಒಳಿತಿಗಾಗಿ ಸರ್ಕಾರದ ಸೂಚನೆ ಪ್ರಕಾರ ಅಭಿವೃದ್ಧಿ ಕೆಲಸ ಮಾಡಿದರೂ ನಷ್ಟ ಅನುಭವಿಸಿದ ಕಾರಣ ಅವರು ಬೇಸರದಿಂದಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದು, ಈವರೆಗೂ ಅದಕ್ಕೆ ಉತ್ತರ ಬಂದಿಲ್ಲ.

ಇನ್ನೂ, `ಇಲ್ಲಿ ಕೇವಲ ಕಡೀಕರಣ ಆದರೆ ರಸ್ತೆ ಸಮಸ್ಯೆ ಬಗೆಹರಿಯಲ್ಲ. ಶಾಶ್ವತ ರಸ್ತೆಗಾಗಿ ಡಾಂಬರ್ ಅಥವಾ ಸಿಮೆಂಟ್ ರಸ್ತೆ ಮಾಡಬೇಕು’ ಎಂದು ಗುತ್ತಿಗೆದಾರ ಸಿದ್ಧಾರ್ಥ ನಾಯ್ಕ ಮೊದಲೇ ಮನವಿ ಮೂಲಕ ಹೇಳಿದ್ದರು. ಅದಾಗಿಯೂ ಅಧಿಕಾರಿಗಳು ಕಡೀಕರಣಕ್ಕೆ ಮಾತ್ರ ಸೂಚಿಸಿದ್ದು, ರಸ್ತೆಗೆ ಹಾಕಲಾದ ಕಡಿ ಮಳೆಗಾಲದಲ್ಲಿ ಕೊಚ್ಚಿ ಹೋಗಿದೆ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದಾಗ `ರಸ್ತೆ ಕಾಮಗಾರಿ ಕುರಿತು ಜಿಲ್ಲಾಧಿಕಾರಿ ವಿಚಾರಣೆ ನಡೆಸುತ್ತಿದ್ದಾರೆ ಎನ್ನುತ್ತಿದ್ದಾರೆ. ಆದರೆ, ಈ ವಿಚಾರಣೆ ಇನ್ನೂ ಶುರುವೇ ಆಗಿಲ್ಲ’ ಎಂಬುದು ಗುತ್ತಿಗೆದಾರರ ಅಳಲು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ರಾಜಕೀಯ ಸ್ಥಾನಮಾನ: ಬೋವಿವಡ್ಡರ್ ಸಮುದಾಯಕ್ಕೆ ಬಹುದೊಡ್ಡ ಅನ್ಯಾಯ!

Next Post

ರೇಬಿಸ್: ಹೋರಿಗೂ ಹರಡಿದ ನಾಯಿ ರೋಗ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋