• Latest
A government doctor who went to jail for the sake of money for a bed!

ಕಂಡವರ ಕಾಸಿಗೆ ಆಸೆಪಟ್ಟು ಜೈಲು ಸೇರಿದ ಸರ್ಕಾರಿ ಡಾಕ್ಟರ್!

3 weeks ago
Prediction for July 23 2025

2025 ಅಗಸ್ಟ್ 2ರ ದಿನ ಭವಿಷ್ಯ

4 hours ago
There are dry trees on the side of the road move slowly!

ಮುಂದೆ ಮುರಿದು ಬೀಳುವ ಮರಗಳಿವೆ: ನಿಧಾನವಾಗಿ ಚಲಿಸಿ!

5 hours ago
ADVERTISEMENT
Mechanized fishing suffers setback on first day Fire breaks out on boat in Baithakhola!

ಯಾಂತ್ರಿಕ ಮೀನುಗಾರಿಕೆಗೆ ಮೊದಲ ದಿನವೇ ವಿಘ್ನ: ಬೈತಖೋಲದ ಬೋಟಿನಲ್ಲಿ ಬೆಂಕಿ ಬರುಗಾಳಿ!

5 hours ago

ಜೀವ ಸಂಕುಲಕ್ಕೆ ಆಪತ್ತು ತಂದ ಮಳೆಗಾಲದ ಮರಳು ಸಾಗಾಟ: ಕಳ್ಳನ ವಿರುದ್ಧ ಕಾನೂನು ಕ್ರಮ

6 hours ago
Fight against cholera in the forest Strict action against rickshaw pullers!

ಕಾಡಿನಲ್ಲಿ ಕೊಳಿ ಕಾಳಗ: ರಿಕ್ಷಾವಾಲಾ ವಿರುದ್ಧ ಕಠಿಣ ಕ್ರಮ!

6 hours ago
Saturday, August 2, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
https://www.painaik.com/ https://www.painaik.com/ https://www.painaik.com/
ADVERTISEMENT

ಕಂಡವರ ಕಾಸಿಗೆ ಆಸೆಪಟ್ಟು ಜೈಲು ಸೇರಿದ ಸರ್ಕಾರಿ ಡಾಕ್ಟರ್!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
A government doctor who went to jail for the sake of money for a bed!
Advertisement is not enabled. Advertisement is not enabled. Advertisement is not enabled.
ADVERTISEMENT

ಅನೇಕರ ಪಾಲಿಗೆ ಆಪತ್ಪಾಂದವ ಎಂಬ ಮುಖವಾಡದೊಂದಿಗೆ ಅನೇಕ ವರ್ಷಗಳಿಂದ ಕಾಸಿಗಾಗಿ ರೋಗಿಗಳನ್ನು ಪೀಡಿಸುತ್ತಿದ್ದ ಕಾರವಾರದ ಸರ್ಕಾರಿ ವೈದ್ಯ ಡಾ ಶಿವಾನಂದ ಕುಡ್ತಳಕರ್ ಈ ದಿನ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಡಾ ಶಿವಾನಂದ ಕುಡ್ತಳ್ಳಕರ್ ಅವರು ಸ್ತ್ರೀ ರೋಗ ತಜ್ಞರಾಗಿದ್ದರು. ಅವರ ವೈದ್ಯಕೀಯ ಕೆಲಸ ಹಾಗೂ ಕೈ ಗುಣದ ಬಗ್ಗೆ ಜನ ಮೆಚ್ಚುಗೆವ್ಯಕ್ತಪಡಿಸಿದ್ದರು. ಖಾಸಗಿ ಕ್ಲಿನಿಕ್’ನ್ನು ನಡೆಸುತ್ತಿದ್ದ ಅವರು ಅಲ್ಲಿಯೂ ರೋಗಿಗಳ ಆರೋಗ್ಯ ವಿಚಾರಿಸುತ್ತಿದ್ದರು. ಹೆರಿಗೆಗೆ ಬರುವ ಬಡವರನ್ನು ಬಿಡದೇ ಅವರು ಸರ್ಕಾರಿ ಆಸ್ಪತ್ರೆಯಲ್ಲಿಯೇ ಕಾಸು ಕೇಳುತ್ತಿದ್ದರು.

ಡಾ ಶಿವಾನಂದ ಕುಡ್ತಳಕರ್ ಅವರ ಮೇಲಿನ ಭಯ-ಭಕ್ತಿಯಿಂದ ರೋಗಿಗಳು ಅವರು ಕೇಳಿದ ಅರ್ದದಷ್ಟು ಹಣವನ್ನಾದರೂ ಕೊಟ್ಟು ಬರುತ್ತಿದ್ದರು. ಆದರೆ, ಈ ಬಗ್ಗೆ ಅನೇಕರು ಆರೋಪ ಮಾಡಿದ್ದರೂ ಅಧಿಕೃತ ದೂರು ಕೊಟ್ಟಿರಲಿಲ್ಲ. 2020ರ ಅವಧಿಯಲ್ಲಿ ಗೀತಾ ಭಾನಾವಳಿ ಎಂಬ ಬಾಣಂತಿ ಸಾವಿನ ವಿಷಯದಲ್ಲಿ ಡಾ ಶಿವಾನಂದ ಕುಡ್ತಳಕರ್ ಅವರ ವಿರುದ್ಧ ಭಾರೀ ಪ್ರಮಾಣದ ಪ್ರತಿಭಟನೆ ನಡೆದಿತ್ತು. ಡಾ ಶಿವಾನಂದ ಕುಡ್ತಳಕರ್ ವಿರುದ್ಧ ಅನೇಕರು ಆಕ್ರೋಶವ್ಯಕ್ತಪಡಿಸಿದ್ದರು.

ADVERTISEMENT

ಆ ವೇಳೆ ಕಾರವಾರದಿಂದ ಬೇರೆ ಕಡೆ ವರ್ಗವಾಗಿದ್ದರೂ ಡಾ ಶಿವಾನಂದ ಕುಡ್ತಳಕರ್ ಅವರು ಮತ್ತೆ ಕಾರವಾರಕ್ಕೆ ವರ್ಗಾಯಿಸಿಕೊಂಡು ಬಂದಿದ್ದರು. ಜಿಲ್ಲಾ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದ ಡಾ ಶಿವಾನಂದ ಕುಡ್ತಳಕರ್ ಕಾರವಾರ ಬಿಟ್ಟು ಬೇರೆ ಕಡೆ ಹೋಗಲು ಒಪ್ಪಿರಲಿಲ್ಲ.

ADVERTISEMENT

ಈ ನಡುವೆ ಸರ್ಕಾರಿ ಆಸ್ಪತ್ರೆಗೆ ಹಾಸಿಗೆ ಹಾಗೂ ಇನ್ನಿತರ ಪೀಠೋಪಕರಣ ಪೂರೈಕೆ ವಿಷಯವಾಗಿ ಡಾ ಶಿವಾನಂದ ಕುಡ್ತಳಕರ್ ಅವರು ಗುತ್ತಿಗೆದಾರ ಮೌಸೀನ್ ಶೇಖ್ ಅವರಿಂದ ಹಣ ಬೇಡಿದ್ದರು. ಒಟ್ಟು 75 ಸಾವಿರ ರೂಪಾಯಿಗೆ ಮಾತುಕಥೆ ನಡೆದಿದ್ದು, ಜುಲೈ 9ರ ರಾತ್ರಿ ಅವರು ಗುತ್ತಿಗೆದಾರ 20 ಸಾವಿರ ರೂ ಹಣಪಡೆದಿದ್ದರು. ಜುಲೈ 10ರ ಬೆಳಗ್ಗೆ ಮತ್ತೆ 30 ಸಾವಿರ ರೂ ಕೊಡುವಂತೆ ಪೀಡಿಸಲು ಶುರು ಮಾಡಿದ್ದರು.

ಪದೇ ಪದೇ ಪೀಡಿಸುತ್ತಿದ್ದ ಡಾ ಶಿವಾನಂದ ಕುಡ್ತಳಕರ್ ವಿರುದ್ಧ ಮೌಸೀನ್ ಶೇಖ್ ಲೋಕಾಯುಕ್ತರ ಮೊರೆ ಹೋದರು. ಹಣ ಸ್ವೀಕರಿಸುವ ವೇಳೆಯಲ್ಲಿಯೇ ಲೋಕಾಯುಕ್ತರು ಡಾ ಶಿವಾನಂದ ಕುಡ್ತಳಕರ್ ಅವರ ಮೇಲೆ ದಾಳಿ ಮಾಡಿದರು. ಅತ್ಯಂತ ಪ್ರಭಾವಿಯಾಗಿರುವ ಡಾ ಶಿವಾನಂದ ಕುಡ್ತಳಕರ್ ಮೇಲೆ ದಾಳಿ ನಡೆಸಲು ಲೋಕಾಯುಕ್ತ ಡಿವೈಎಸ್ಪಿ ಧನ್ಯಾ ನಾಯಕ ಮನಸ್ಸು ಮಾಡಿದ್ದು, ಭ್ರಷ್ಟಾಚಾರದಲ್ಲಿ ತೊಡಗಿದ್ದ ವೈದ್ಯ ಈ ದಿನ ಜೈಲು ಸೇರಿದರು. ಶಿವಾನಂದ ಕುಡ್ತಳಕರ್ ಅವರ ಮನೆಯಲ್ಲಿಯೂ ಲೋಕಾಯುಕ್ತರು ಶೋಧ ನಡೆಸಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ನಿಮ್ಮ ಭವಿಷ್ಯ – ನಿಮ್ಮ‌ ಕೈಯಲ್ಲಿ: 10 ಜುಲೈ 2025ರ ದಿನ ಭವಿಷ್ಯ

Next Post

ಕದ್ದ ಬೈಕಿನಲ್ಲಿಯೇ ಅಬ್ಬೆಪಾರಿಯಾಗಿ ಅಲೆದಾಡುತ್ತಿದ್ದ ಕಳ್ಳ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋