• Latest
Was it her fault that she was born a girl Life sentence for a sinner who poisoned her daughter

ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪಾ? ಮಗಳಿಗೆ ವಿಷ ಉಣಿಸಿದ ಪಾಪಿಗೆ ಜೀವಾವಧಿ ಶಿಕ್ಷೆ

3 weeks ago
Prediction for July 23 2025

2025ರ ಅಗಸ್ಟ್ 5ರ ದಿನ ಭವಿಷ್ಯ

7 hours ago
ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

7 hours ago
ADVERTISEMENT
People's support for Janaushadhi Kendra

ಜನೌಷಧಿ ಕೇಂದ್ರಕ್ಕೆ ಜನ ಬೆಂಬಲ

8 hours ago
New office for Kumta MLA Dinakar Shetty is present here every day!

ಕುಮಟಾ ಶಾಸಕರಿಗೆ ಹೊಸ ಕಚೇರಿ: ದಿನಕರ ಶೆಟ್ಟಿ ದಿನವೂ ಇಲ್ಲಿ ಹಾಜರಿ!

8 hours ago
Fight.. Fight Another fight against MLAs who are not responding to the problem!

ಹೋರಾಟ.. ಹೋರಾಟ: ಸಮಸ್ಯೆಗೆ ಸ್ಪಂದಿಸದ ಶಾಸಕರ ವಿರುದ್ಧ ಮತ್ತೊಂದು ಹೋರಾಟ!

8 hours ago
ADVERTISEMENT
Tuesday, August 5, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಹೆಣ್ಣಾಗಿ ಹುಟ್ಟಿದ್ದು ಅವಳ ತಪ್ಪಾ? ಮಗಳಿಗೆ ವಿಷ ಉಣಿಸಿದ ಪಾಪಿಗೆ ಜೀವಾವಧಿ ಶಿಕ್ಷೆ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Was it her fault that she was born a girl Life sentence for a sinner who poisoned her daughter
Advertisement is not enabled. Advertisement is not enabled. Advertisement is not enabled.
ADVERTISEMENT

ಹೃದಯ ರೋಗದಿಂದ ಬಳಲುತ್ತಿದ್ದ 11 ವರ್ಷದ ಮಗುವಿಗೆ ವಿಷ ಕುಡಿಸಿದ್ದ ಪಾಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಯಲ್ಲಾಪುರದ ನಾಗರಾಜ ಪೂಜಾರಿ ಶಿಕ್ಷೆಗೆ ಒಳಗಾದ ವ್ಯಕ್ತಿ.

ಯಲ್ಲಾಪುರ ತಾಲೂಕಿನ ಹೆಮ್ಮಾಡಿಯಲ್ಲಿ ನಾಗರಾಜ ಪೂಜಾರಿ ವಾಸವಾಗಿದ್ದರು. ಅವರಿಗೆ ಮೂವರು ಹೆಣ್ಣು ಮಕ್ಕಳು. ವಂಶೋದ್ಧಾರಕ್ಕೆ ಗಂಡು ಮಗು ಇಲ್ಲ ಎಂಬ ಕಾರಣಕ್ಕೆ ಅವರು ಪತ್ನಿ ಹಾಗೂ ಮೂವರು ಮಕ್ಕಳನ್ನು ಪದೇ ಪದೇ ಪೀಡಿಸುತ್ತಿದ್ದರು. ಇದೇ ಕಾರಣದಿಂದ ನಾಗರಾಜ ಪೂಜಾರಿ ಅವರ ಪತ್ನಿ ಮನೆ ಬಿಟ್ಟು ಹೋಗಿದ್ದರು.

ADVERTISEMENT

ಈ ವೇಳೆ ನಾಗರಾಜ ಪೂಜಾರಿ ಅವರ ಮಕ್ಕಳಾದ ನಯಕನಾ (11) ಹಾಗೂ ಸಹಕನಾ (9) (ಹೆಸರು ಬದಲಿಸಿದೆ) ಅವರನ್ನು ಕಾರವಾರದ ಮಹಿಳಾ ಸಾಂತ್ವಾನ ಕೇಂದ್ರದವರು ವಿಚಾರಣೆಗೆ ಒಳಪಡಿಸಿದ್ದರು. ಆಪ್ತಸಮಾಲೋಚನೆ ವೇಳೆ ಈ ಇಬ್ಬರು ಮಕ್ಕಳು `ಅಮ್ಮ ಬೇಕು’ ಎಂದು ಹೇಳಿದ್ದರು. ಇದರಿಂದ ಸಿಟ್ಟಾದ ನಾಗರಾಜ ಪೂಜಾರಿ 2019ರ ಜನವರಿ 5ರಂದು ಆ ಇಬ್ಬರು ಮಕ್ಕಳ ಮೇಲೆ ಪೊರಕೆಯಿಂದ ಹೊಡೆದಿದ್ದರು.

ಈ ನಡುವೆ ನಯಕನಾ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದು, ಒಂದೆರಡು ಬಾರಿ ನಾಗರಾಜ ಪೂಜಾರಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆಕೆಯ ಚಿಕಿತ್ಸೆಗೆ ಹಣ ವೆಚ್ಚವಾಯಿತು ಎಂದು ಹೇಳಿ ಕಂಠಪೂರ್ತಿ ಕುಡಿಯಲು ಶುರು ಮಾಡಿದ್ದರು. 2019ರ ಜನವರಿ 9ರಂದು ನಯಕನಾ ಅವರಿಗೆ ನಾಗರಾಜ ಪೂಜಾರಿ ಒತ್ತಾಯಪೂರ್ವಕವಾಗಿ ವಿಷ ಕುಡಿಸಿದ್ದರು. ಅದಾದ ನಂತರ ಸಂಬoಧಿಕರ ಮನೆಗೆ ಹೋಗಿ ಬಚ್ಚಿಟ್ಟುಕೊಂಡಿದ್ದರು.

Advertisement. Scroll to continue reading.
Advertisement. Scroll to continue reading.
ADVERTISEMENT

ನಯನಕಾ ಸಾವನಪ್ಪಿದ ವಿಷಯ ಅರಿತು ಬೆಂಗಳೂರಿನಲ್ಲಿ ಗ್ಯಾಸ್ ಕಂಪನಿಯಲ್ಲಿ ಕೆಲಸ ಮಾಡುವ ರಘು ಪೂಜಾರಿ ಅವರು ಪೊಲೀಸ್ ದೂರು ನೀಡಿದ್ದರು. ಆಗಿನ ಯಲ್ಲಾಪುರ ಪಿಐ ಮಂಜುನಾಥ ನಾಯಕ ತನಿಖೆ ನಡೆಸಿದ್ದರು. ಜುಲೈ 11ರಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಕಿರಣ ಕೇಣಿ ಅವರು ನಾಗರಾಜ ಪೂಜಾರಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಜೊತೆಗೆ 17 ಸಾವಿರ ರೂ ದಂಡವನ್ನು ಪಾವತಿಸುವಂತೆ ಆದೇಶಿಸಿದರು.

ಸಹನಕಾ ಅವರಿಗೆ 10 ಸಾವಿರ ರೂ ಪರಿಹಾರದ ಜೊತೆ ಉಚಿತ ಕಾನೂನು ಪ್ರಾಧಿಕಾರದಿಂದ ನೆರವುಪಡೆಯಲು ನ್ಯಾಯಾಧೀಶರು ಸೂಚಿಸಿದರು. ಈ ಪ್ರಕರಣದಲ್ಲಿ ನಾಗರಾಜ ಪೂಜಾರಿ ವಿರುದ್ಧ ಸಕಾರಿ ವಕೀಲ ರಾಜೇಶ ಮಳಗಿಕರ್ ವಾದ ಮಂಡಿಸಿದ್ದು, ಯಲ್ಲಾಪುರದ ಈಗಿನ ಪಿಐ ರಮೇಶ ಹಾನಾಪುರ ಅವರು ಸಮಯಕ್ಕೆ ಸರಿಯಾಗಿ ಸಾಕ್ಷಿ ಒದಗಿಸುವಲ್ಲಿ ಸಹಕಾರ ಮಾಡಿದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಶಿರಸಿ-ಸಿದ್ದಾಪುರಕ್ಕೆ 300 ಕೋಟಿ ರೂ: ಸಿದ್ದು ಜೊತೆ ಶಾಸಕರ ಸೆಲ್ಪಿ!

Next Post

40 ಕೋಟಿ ಅಕ್ರಮ: ಸೊಸೈಟಿ ಅವ್ಯವಹಾರ ನಡೆಸಿದ 31 ಜನರ ವಿರುದ್ಧ ದೂರು!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋