• Latest
Railway project for Uttara Kannada development Minister agrees to attend workshop

ಉತ್ತರ ಕನ್ನಡ ಅಭಿವೃದ್ಧಿಗೆ ರೈಲ್ವೆ ಯೋಜನೆ: ಕಾರ್ಯಾಗಾರಕ್ಕೆ ಬರಲು ಒಪ್ಪಿದ ಸಚಿವ

3 weeks ago
Prediction for July 23 2025

2025ರ ಅಗಸ್ಟ್ 5ರ ದಿನ ಭವಿಷ್ಯ

5 minutes ago
ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

ಕಾಮಿಡಿ ಕಿಲಾಡಿ | ಅಪ್ಪನ ಹಾದಿ ತುಳಿದ ಮಗ: ಕಲಾವಿದನ ಸಾವಿನಲ್ಲಿ ತಾಯಿಗೆ ಸಂಶಯ!

33 minutes ago
ADVERTISEMENT
People's support for Janaushadhi Kendra

ಜನೌಷಧಿ ಕೇಂದ್ರಕ್ಕೆ ಜನ ಬೆಂಬಲ

1 hour ago
New office for Kumta MLA Dinakar Shetty is present here every day!

ಕುಮಟಾ ಶಾಸಕರಿಗೆ ಹೊಸ ಕಚೇರಿ: ದಿನಕರ ಶೆಟ್ಟಿ ದಿನವೂ ಇಲ್ಲಿ ಹಾಜರಿ!

1 hour ago
Fight.. Fight Another fight against MLAs who are not responding to the problem!

ಹೋರಾಟ.. ಹೋರಾಟ: ಸಮಸ್ಯೆಗೆ ಸ್ಪಂದಿಸದ ಶಾಸಕರ ವಿರುದ್ಧ ಮತ್ತೊಂದು ಹೋರಾಟ!

1 hour ago
ADVERTISEMENT
Monday, August 4, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT
ADVERTISEMENT

ಉತ್ತರ ಕನ್ನಡ ಅಭಿವೃದ್ಧಿಗೆ ರೈಲ್ವೆ ಯೋಜನೆ: ಕಾರ್ಯಾಗಾರಕ್ಕೆ ಬರಲು ಒಪ್ಪಿದ ಸಚಿವ

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Railway project for Uttara Kannada development Minister agrees to attend workshop
Advertisement is not enabled. Advertisement is not enabled. Advertisement is not enabled.
ADVERTISEMENT

`ಅಂಕೋಲಾ ತಾಲೂಕಿನ ಹಾರವಾಡ ರೈಲ್ವೆ ನಿಲ್ದಾಣದಿಂದ ಅನೇಕರು ಮಣಿಪಾಲ ಹಾಗೂ ಮಂಗಳೂರಿಗೆ ಹೋಗುತ್ತಿದ್ದು, ಬೇರೆ ಬೇರೆ ಜಿಲ್ಲೆಗಳಿಂದಲೂ ಹಾರವಾಡಕ್ಕೆ ನಾಟಿ ಔಷಧಿಪಡೆಯಲು ಬರುತ್ತಾರೆ. ಹೀಗಾಗಿ ಇಲ್ಲಿನ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸಬೇಕು’ ಎಂದು ಜನಶಕ್ತಿ ವೇದಿಕೆ ಆಗ್ರಹಿಸಿದೆ.

`ಹಿರಿಯ ಜಾನಪದ ಕಲಾವಿದರಾಗಿದ್ದ ಪದ್ಮಶ್ರೀ ಸುಕ್ರಿ ಗೌಡ ಹಾಗೂ ತುಳಸಿ ಗೌಡ ನೇತೃತ್ವದಲ್ಲಿ ರೈಲ್ವೆ ಸಮಸ್ಯೆಗಳ ಬಗ್ಗೆ ಪ್ರತಿಭಟನೆ ನಡೆದಿತ್ತು. ಅದಾಗಿಯೂ, ಹಾರವಾಡ ರೈಲು ನಿಲ್ದಾಣದ ಫ್ಲಾಟ್ ಫಾರ್ಮ್ ಮೇಲ್ದರ್ಜೆಗೇರಿಸುವ ಕಾರ್ಯವಾಗಿಲ್ಲ’ ಎಂದು ವೇದಿಕೆ ಅಧ್ಯಕ್ಷ ಮಾಧವ ನಾಯಕ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ವಿ ಸೋಮಣ್ಣ ಅವರಿಗೆ ಮನವರಿಕೆ ಮಾಡಿದ್ದಾರೆ. ಈ ಎಲ್ಲಾ ಸಮಸ್ಯೆ ಬಗ್ಗೆ ಚರ್ಚಿಸಲು ಉತ್ತರ ಕನ್ನಡ ಜಿಲ್ಲೆಗೆ ಬರುವುದಾಗಿ ಸೋಮಣ್ಣ ಅವರು ಈ ವೇಳೆ ಭರವಸೆ ನೀಡಿದ್ದಾರೆ.

Advertisement. Scroll to continue reading.
ADVERTISEMENT

ಉತ್ತರಕನ್ನಡ ಜಿಲ್ಲೆಯ ರೈಲ್ವೆ ಸಮಸ್ಯೆಗಳ ನಿವಾರಣೆ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ರೈಲ್ವೆ ಯೋಜನೆಗಳ ಕೊಡುಗೆಗಳ ಕುರಿತು ಸಮಾಲೋಚಿಸಲು ಒಂದು ದಿನದ ಕಾರ್ಯಗಾರ ನಡೆಸಲು ವಿ ಸೋಮಣ್ಣ ಅವರು ಸಮ್ಮತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಜನಶಕ್ತಿ ವೇದಿಕೆಯವರು ಸೋಮಣ್ಣ ಅವರನ್ನು ಭೇಟಿ ಮಾಡಿದ್ದು, ಅಂಕೋಲಾ- ಹುಬ್ಬಳ್ಳಿ ರೈಲ್ವೆ ಯೋಜನೆ ಕುರಿತು ಮಾತನಾಡಿದರು. `ಉತ್ತರಕನ್ನಡ ಮತ್ತು ಉತ್ತರಕರ್ನಾಟಕವನ್ನು ಸಂಪರ್ಕಿಸುವ ಪ್ರಮುಖ ರೈಲ್ವೆ ಯೋಜನೆಯಾಗಿದ್ದು, ಬಹು ಬೇಡಿಕೆಯದ್ದಾಗಿದೆ. ದಶಕಗಳೇ ಕಳೆದರೂ ಯೋಜನೆ ಕಾರ್ಯಗತವಾಗದೇ ನೆನೆಗುದಿಗೆ ಬಿದ್ದಿದೆ. ಯೋಜನೆ ಕುರಿತು ಹೋರಾಟಕ್ಕಾಗಿ ಉತ್ತರಕನ್ನಡ ಜಿಲ್ಲಾ ನಾಗರಿಕ ಸಂಘ ಸಂಸ್ಥೆಗಳ ಒಕ್ಕೂಟ ರಚಿಸಿಕೊಳ್ಳಲಾಗಿದೆ’ ಎಂದು ಮಾಧವ ನಾಯಕ ಅವರು ವಿವರಿಸಿದರು.

Advertisement. Scroll to continue reading.
ADVERTISEMENT

`ಈ ಒಕ್ಕೂಟದಿಂದ ಜಿಲ್ಲೆಯ ರೈಲ್ವೆ ಯೋಜನೆಗಳಿಗೆ ಇರುವ ತೊಡಕುಗಳ ಬಗ್ಗೆ ಚರ್ಚಿಸಲು ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಈ ರೈಲ್ವೆ ಯೋಜನೆಗಳ ಅವಶ್ಯಕತೆಗಳ ಬಗ್ಗೆ ಸಮಾಲೋಚಿಸಲು ಒಂದು ದಿನದ ಕಾರ್ಯಾಗಾರವನ್ನು ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ್ ನಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ’ ಎಂದರು. ಸುಮಾರು ಮುಕ್ಕಾಲು ಗಂಟೆಗಳ ಕಾಲ ಜಿಲ್ಲೆಯ ಕುರಿತು ಚರ್ಚೆ ನಡೆಸಿದ ಸಚಿವರು `ಖಂಡಿತವಾಗಿ ಕಾರ್ಯಾಗಾರಕ್ಕೆ ಆಗಮಿಸುತ್ತೇನೆ. ಶೀಘ್ರವೇ ದಿನ ತಿಳಿಸುತ್ತೇನೆ’ ಎಂದರು.

Share this:

  • Click to share on Facebook (Opens in new window) Facebook
  • Click to share on X (Opens in new window) X

Discussion about this post

Previous Post

ಗಡಿನಾಡಿನಲ್ಲಿ ಕನ್ನಡ ಕಲರವ: ಸಾಧಕ ಮಕ್ಕಳಿಗೆ ಪುರಸ್ಕಾರದ ಗೌರವ

Next Post

ಗ್ರಾಮಸಭೆ: ಪ್ರಶ್ನೆ ಕೇಳಿದಕ್ಕಾಗಿ ನಡೀತು ಮಾರಾಮಾರಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋