• Latest
Gram Panchayat Politics: Gajanana's obstacle to Ganapati's work!

ಗ್ರಾ ಪಂ ರಾಜಕೀಯ: ಗಣಪತಿಯ ಕಾರ್ಯಕ್ಕೆ ಗಜಾನನನ ವಿಘ್ನ!

1 day ago
Prediction for July 23 2025

2025 ಜುಲೈ 27ರ ದಿನ ಭವಿಷ್ಯ

3 hours ago
Kargil victory BJP commemorates the service of soldiers

ಕಾರ್ಗಿಲ್ ವಿಜಯ: ಯೋಧರ ಸೇವೆ ಸ್ಮರಿಸಿದ ಬಿಜೆಪಿ

3 hours ago
ADVERTISEMENT
Sirsi-Kumata Road: Landslide at Devimane Ghat!

ಶಿರಸಿ-ಕುಮಟಾ ರಸ್ತೆ: ದೇವಿಮನೆ ಘಟ್ಟದಲ್ಲಿ ಧರೆ ಕುಸಿತ!

4 hours ago
Save Kannada schools.. Belasi School employees' letter to Kasapa President

ಕನ್ನಡ ಶಾಲೆ ಉಳಿಸಿ.. ಬೆಳಸಿ: ಕಸಾಪ ಅಧ್ಯಕ್ಷರಿಗೆ ಶಾಲಾ ನೌಕರರ ಪತ್ರ

4 hours ago

ಕಾರಾಗೃಹ ಸೇರಬೇಕಿದ್ದ ಕೈದಿ ಪರಾರಿ!

4 hours ago
Sunday, July 27, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

ಗ್ರಾ ಪಂ ರಾಜಕೀಯ: ಗಣಪತಿಯ ಕಾರ್ಯಕ್ಕೆ ಗಜಾನನನ ವಿಘ್ನ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Gram Panchayat Politics: Gajanana's obstacle to Ganapati's work!
Advertisement is not enabled. Advertisement is not enabled. Advertisement is not enabled.
ADVERTISEMENT

ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತದಲ್ಲಿ ಹಗ್ಗ ಜಗ್ಗಾಟ ಮುಂದುವರೆದಿದ್ದು, ಅದರ ಮುಂದುವರೆದ ಭಾಗವಾಗಿ ಗ್ರಾ ಪಂ ಸದಸ್ಯ ಗಣಪತಿ ಭಾಗ್ವತ ಅವರ ಸದಸ್ಯತ್ವ ರದ್ದಾಗಿದೆ. ಈ ಸದಸ್ಯತ್ವ ರದ್ಧತಿ ಬಗ್ಗೆ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿರುವುದಾಗಿ ಗಣಪತಿ ಭಾಗ್ವತ ಅವರು ಹೇಳಿದ್ದಾರೆ. ಜೊತೆಗೆ  ಗ್ರಾ ಪಂ ಮಾಜಿ ಅಧ್ಯಕ್ಷ ಗಜಾನನ ಭಟ್ಟ ಅವರು ದ್ವೇಷ ರಾಜಕಾರಣ ಮಾಡುತ್ತಿರುವುದಾಗಿಯೂ ಆರೋಪಿಸಿದ್ದು, ಅನೇಕ ಭ್ರಷ್ಟಾಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಅದಕ್ಕೆ ಸಂಬoಧಿಸಿದ ದಾಖಲಾತಿಗಳನ್ನು ಒದಗಿಸಿಲ್ಲ.

ಯಲ್ಲಾಪುರದ ರಾಜಕೀಯ ವಿದ್ಯಮಾನಗಳ ಕೇಂದ್ರ ಸ್ಥಾನದಲ್ಲಿ ವಜ್ರಳ್ಳಿ ಭಾಗವೂ ಒಂದು. ಸಣ್ಣಪುಟ್ಟ ವಾಗ್ವಾದ, ರಾಜಕೀಯ ಕಚ್ಚಾಟ, ಹೋರಾಟ ಹಾಗೂ ಹೊಡೆದಾಟ ಇಲ್ಲಿ ಸಾಮಾನ್ಯ. ಅನೇಕ ಬಾರಿ ಅವೆಲ್ಲವೂ ಅಲ್ಲಿಯೇ ರಾಜಿ-ಪಂಚಾಯತಿಯಲ್ಲಿ ಮುಗಿದ ಉದಾಹರಣೆಗಳಿವೆ. ಆದರೆ, ಈಚೆಗೆ ಸಣ್ಣಪುಟ್ಟ ವಿಷಯಗಳು ಪ್ರತಿಷ್ಠೆಯ ಪ್ರಶ್ನೆಯಾಗಿದ್ದು, ಅವು ಕಾನೂನು ಹೋರಾಟಕ್ಕೆ ತಿರುಗಿವೆ. ಅದರ ಪರಿಣಾಮವಾಗಿ ಗ್ರಾ ಪಂ ಸದಸ್ಯ ಗಣಪತಿ ಭಾಗ್ವತ ಅವರ ಸದಸ್ಯತ್ವ ರದ್ಧಾಗಿದೆ.

ADVERTISEMENT

ಗ್ರಾಮ ಪಂಚಾಯತ ಸದಸ್ಯರಾಗಿ ಗಣಪತಿ ಭಾಗ್ವತ ಅವರು ತಮ್ಮ ಮಗನ ಮೂಲಕ ಗುತ್ತಿಗೆ ಕೆಲಸ ಮಾಡಿಸಿದ್ದಾರೆ ಎಂಬುದು ಆರೋಪ. ಈ ಆರೋಪದ ಬಗ್ಗೆ ತನಿಖೆ ನಡೆಸಿದ ರಾಜ್ಯ ಪಂಚಾಯತರಾಜ್ ಇಲಾಖೆ ಅವರ ಸದಸ್ಯತ್ವ ರದ್ದು ಮಾಡಿದ್ದು, ಮುಂದಿನ 6 ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಆದರೆ, `ತನಿಖೆಯ ವೇಳೆ ಎಲ್ಲಿಯೂ ತಮ್ಮ ಹೇಳಿಕೆಪಡೆದಿಲ್ಲ. ನಿಯಮಬಾಹಿರವಾಗಿ ಈ ಆದೇಶ ಮಾಡಲಾಗಿದ್ದು, ಅದರ ವಿರುದ್ಧ ತಡೆಯಾಜ್ಞೆ ಸಿಕ್ಕಿದೆ’ ಎಂದು ಗಣಪತಿ ಭಾಗ್ವತ ಅವರು ಹೇಳಿದ್ದಾರೆ.

ADVERTISEMENT

`2010ರಿಂದ 2019ರ ಅವಧಿಯಲ್ಲಿ ಅವರ ಗಣಪತಿ ಭಾಗ್ವತ ಅವರ ಮಗ ಶ್ರೀರಾಮ ಭಾಗ್ವತ ಗುತ್ತಿಗೆದಾರರಾಗಿ ಅದೇ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 8.21 ಲಕ್ಷ ರೂ ಮೊತ್ತದ ಕಾಮಗಾರಿ ನಡೆಸಿದ್ದಾರೆ. ಇದು ನಿಯಮ ಬಾಹಿರ’ ಎಂಬುದು ದೂರು. `ಗ್ರಾ ಪಂ ವ್ಯಾಪ್ತಿಯಲ್ಲಿ ಅಗತ್ಯ ಕೆಲಸಗಳು ಸಮರ್ಪಕವಾಗಿ ನಡೆಯಲೆಂದು ಆ ಅವಧಿಯಲ್ಲಿ ಅಧ್ಯಕ್ಷರಾಗಿದ್ದ ಗಜಾನನ ಭಟ್ಟರು ಪ್ರೋತ್ಸಾಹಿಸಿಯೇ ಶ್ರೀರಾಮ ಭಾಗ್ವತ ಅವರ ಬಳಿ ಗುತ್ತಿಗೆ ಕೆಲಸ ನಿರ್ವಹಿಸಿದ್ದಾರೆ. ಇದೀಗ ಅವರು ಅನಗತ್ಯ ಆರೋಪ ಮಾಡಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ’ ಎಂಬುದು ಗಣಪತಿ ಭಾಗ್ವತ ಅವರ ಅಳಲು.

ADVERTISEMENT

`ಗ್ರಾಮದ ಅಭಿವೃದ್ಧಿಗೆ ನಮ್ಮನ್ನು ಬಳಸಿಕೊಂಡು ಇದೀಗ ಅದರ ದುರುಪಯೋಗ ನಡೆದಿದೆ. ಗ್ರಾಮ ಪಂಚಾಯತದಲ್ಲಿ ಸಾಕಷ್ಟು ಅಕ್ರಮ ಅವ್ಯವಹಾರ ನಡೆದಿದ್ದು, ಆ ಬಗ್ಗೆ ದಾಖಲೆ ಸಂಗ್ರಹಿಸಲಾಗಿದೆ. ಕೈ ಬಿಟ್ಟ ಆಸ್ತಿ ಸೇರ್ಪಡೆ, ನರೆಗಾ ಸೇರಿ ಅನೇಕ ಕಡೆ ಭ್ರಷ್ಟಾಚಾರ ನಡೆದಿದೆ. ಆ ಬಗ್ಗೆ ವಿವಿಧ ಕಡೆ ದೂರು ನೀಡಲಾಗುತ್ತದೆ’ ಎಂದು ಗಣಪತಿ ಭಾಗ್ವತ್ ಅವರು ಎಚ್ಚರಿಸಿದರು. `ತಾನೂ ಏನು ತಪ್ಪು ಮಾಡಿಲ್ಲ’ ಎಂದು ಸಮರ್ಥಿಸಿಕೊಂಡರು.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

2025 ಜುಲೈ 25ರ ದಿನ ಭವಿಷ್ಯ

Next Post

ಚಾಪೆ-ದಿಂಬಿನ ಜೊತೆ ಪ್ರತಿಭಟನೆಗೆ ಬಂದ ಸ್ವಾಮೀಜಿ!

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋