ಪ್ರಸಿದ್ಧ ಉಂಚಳ್ಳಿ ಜಲಪಾತಕ್ಕೆ ಪ್ರವಾಸಕ್ಕೆ ಬಂದಿದ್ದ ವ್ಯಕ್ತಿಯೊಬ್ಬರು ಅಪಘಾತದಲ್ಲಿ ಸಾವನಪ್ಪಿದ್ದಾರೆ. ಮತ್ತೊಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಹಾವೇರಿ ಜಿಲ್ಲೆಯ ಶಿಗ್ಗಾವ್ ಬಳಿಯ ಅನಿಲ ಹರಿಜನ ಹಾಗೂ ಹಾನಗಲ್ ಮೂಲದ ಬಸವರಾಜ ಬಾಣದ ಎಂಬಾತರು ಸೋಮವಾರ ಸಿದ್ದಾಪುರದ ಉಂಚಳ್ಳಿ ಜಲಪಾತಕ್ಕೆ ಬಂದಿದ್ದರು. ಮೂರು ಬೈಕಿನಲ್ಲಿ ಯುವಕರು ಪ್ರವಾಸಕ್ಕೆ ಬಂದಿದ್ದು, ಜಲಪಾತದ ಬಳಿ ಮೋಜು-ಮಸ್ತಿ ಮಾಡಿದ್ದರು. ಜಲಪಾತ ಪ್ರವಾಸ ಮುಗಿಸಿ ಬೈಕಿನಲ್ಲಿ ಮರಳುತ್ತಿದ್ದಾಗ ಅನೀಲ ಹರಿಜನ ಅವರಿದ್ದ ಬೈಕು ಅಪಘಾತಕ್ಕೀಡಾಯಿತು.
ಬೈಕು ಬಸ್ಸಿಗೆ ಬಡಿದಿದ್ದು, ಅಪಘಾತದ ರಭಸಕ್ಕೆ ಅನಿಲ ಹರಿಜನ ಸಾವನಪ್ಪಿದ್ದರು. ಅವರ ಜೊತೆಯಿದ್ದ ಬಸವರಾಜ ಬಾಣದ ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಸಿದ್ದಾಪುರದ ನಿಲ್ಕುಂದ ತಂಡಾಗುAಡಿ ತಿರುವಿನಲ್ಲಿ ಈ ಅಪಘಾತ ನಡೆದಿದ್ದು, ಪೊಲೀಸರು ತಕ್ಷಣ ಅಲ್ಲಿಗೆ ಧಾವಿಸಿದರು. ಆಂಬುಲೆನ್ಸ್ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ADVERTISEMENT
Discussion about this post