• Latest

ಪಕ್ಕದದೂರಿನ ಪರಿಚಯಸ್ಥನೇ ನಾಯಿ ಕಳ್ಳ!

5 days ago
Prediction for July 23 2025

2025ರ ಅಗಷ್ಟ 7ರ ದಿನ ಭವಿಷ್ಯ

16 hours ago

ದುಡಿಯಲು ಹೋದ ವೃದ್ಧೆಯನ್ನು ಆಹುತಿಪಡೆದ ಗಜನಿ ಭೂಮಿ!

17 hours ago
ADVERTISEMENT

ಸಾರ್ವಜನಿಕ ಕೆಲಸಕ್ಕೆ ಸೂಚನೆ ನೀಡಿದ ಕಾನೂನು ಸೇವಾ ಪ್ರಾಧಿಕಾರ

17 hours ago

ಪೊಲೀಸಪ್ಪನ ಕಾರಿಗೆ ಗುದ್ದಿದ ಕಂಟೇನರ್!

17 hours ago

ಬಡತನ: ಅಡುಗೆ ಮಾಡಲು ಸಾಮಗ್ರಿ ಸಿಗದೇ ಬೆಂಕಿಯಲ್ಲಿ ಬೆಂದ ಮಹಿಳೆ!

18 hours ago
Thursday, August 7, 2025
mobiletime.in
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
No Result
View All Result
mobiletime.in
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
ADVERTISEMENT

ಪಕ್ಕದದೂರಿನ ಪರಿಚಯಸ್ಥನೇ ನಾಯಿ ಕಳ್ಳ!

mobiletime.inby mobiletime.in
in ನಮ್ಮೂರು - ನಮ್ಮ ಜಿಲ್ಲೆ
Advertisement is not enabled. Advertisement is not enabled. Advertisement is not enabled.
ADVERTISEMENT

ಬಾಬು ಸಿದ್ದಿ ಅವರ ಮನೆ ಅಂಗಳದಲ್ಲಿದ್ದ ನಾಯಿಯನ್ನು ಹುಸೇನ ಕೆರೆಹೊಸಳ್ಳಿ ಕದಿಯುತ್ತಿದ್ದಾಗ ಸಿಕ್ಕಿ ಬಿದ್ದಿದ್ದು, ಇದನ್ನು ಪ್ರಶ್ನಿಸಿದ ಕಾರಣ ಅವರಿಬ್ಬರ ನಡುವೆ ಹೊಡೆದಾಟ ನಡೆದಿದೆ.

ಯಲ್ಲಾಪುರದ ಹಾಸಣಗಿ ಕಾಳಂಜಿಕೊಪ್ಪದಲ್ಲಿ ಬಾಬು ರುಜಾಯ್ ಸಿದ್ದಿ (65) ಅವರು ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಅವರು ತಮ್ಮ ಮನೆ ಭದ್ರತೆಗಾಗಿ ನಾಯಿ ಸಾಕಿದ್ದು, ಅದನ್ನು ಪ್ರೀತಿಯಿಂದ ಬೆಳಸುತ್ತಿದ್ದಾರೆ. ಆದರೆ, ಜುಲೈ 7ರ ರಾತ್ರಿ 9 ಗಂಟೆಗೆ ಆ ನಾಯಿಯ ಅಪಹರಣ ಪ್ರಯತ್ನ ನಡೆದಿದೆ.

ADVERTISEMENT

ರಾತ್ರಿ ನಾಯಿ ಬೊಗಳುವುದನ್ನು ಕಂಡು ಮನೆಯಿಂದ ಹೊರ ಬಂದ ಬಾಬು ಸಿದ್ದಿ ಅವರಿಗೆ ಅಲ್ಲಿ ಹುಸೇನ ಕೆರೆಹೊಸಳ್ಳಿ ಎದುರಾಗಿದ್ದಾರೆ. ಹುಸೇನ್ ನಾಯಿ ಕರೆದುಕೊಂಡು ಹೋಗುತ್ತಿರುವುದನ್ನು ಬಾಬು ಸಿದ್ದಿ ತಡೆದಿದ್ದಾರೆ. ಈ ವೇಳೆ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಜಗಳವಾಗಿದೆ.

`ನೀನು ಯಾಕೆ ನಾಯಿ ತೆಗೆದುಕೊಂಡು ಹೋಗುತ್ತಿಯಾ?’ ಎಂದು ಬಾಬು ಸಿದ್ದಿ ಜೋರಾಗಿ ಪ್ರಶ್ನಿಸಿದ್ದಾರೆ. ಅದಕ್ಕೆ ಹುಸೇನ್ ಸರಿಯಾಗಿ ಉತ್ತರಿಸದೇ ಇದ್ದಾಗ ಬಾಬು ಸಿದ್ದಿ ಇನ್ನಷ್ಟು ಜೋರಾಗಿದ್ದಾರೆ. ಆಗ, ಹುಸೇನ್ ಕೆರೆಹೊಸಳ್ಳಿ ಬಾಬು ಸಿದ್ದಿ ಅವರನ್ನು ಕೈಯಿಂದ ದೂಡಿ ಕೆಟ್ಟದಾಗಿ ಬೈದಿದ್ದಾರೆ. ಹುಸೇನ್ ಕೆರೆಹೊಸಳ್ಳಿ ದೂಡಿದ ರಭಸಕ್ಕೆ ಬಾಬು ಸಿದ್ದಿ ನೆಲಕ್ಕೆ ಬಿದ್ದಿದ್ದು, ಎರಡು ಕಾಲುಗಳಿಗೆ ಪೆಟ್ಟಾಗಿದೆ.

Advertisement. Scroll to continue reading.

ಅದಾದ ನಂತರ ಹುಸೇನ್ ಕೆರೆಹೊಸಳ್ಳಿ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಈ ಬಗ್ಗೆ ಬಾಬು ಸಿದ್ದಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಂತರ ನ್ಯಾಯಾಲಯದ ಮೊರೆ ಹೋಗಿ ಹುಸೇನ್ ಕೆರೆಹೊಸಳ್ಳಿ ವಿರುದ್ಧ ಪ್ರಕರಣ ದಾಖಲಿಸಲು ವಿನಂತಿಸಿದ್ದಾರೆ. ಈ ಹಿನ್ನಲೆ ಯಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ಶುರು ಮಾಡಿದ್ದಾರೆ.

Share this:

  • Click to share on Facebook (Opens in new window) Facebook
  • Click to share on X (Opens in new window) X
ADVERTISEMENT

Discussion about this post

Previous Post

ಧರ್ಮಸ್ಥಳ | ಮಂಜುನಾಥನ ಮೌಖಿಕ ಆದೇಶ: ದೂರುದಾರನಿಗೆ ಬೆದರಿಕೆ ಒಡ್ಡಿದ ಶಿರಸಿ ಪೊಲೀಸ್!

Next Post

2025 ಅಗಸ್ಟ 3ರ ದಿನ ಭವಿಷ್ಯ

Mobile Media Network ಒಂದೇ ಸಂಸ್ಥೆ – ಹಲವು ಸೇವೆ

Preloader Image
1
2
8
7
6
5
4
3
ADVERTISEMENT
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ
  • Home
  • ಲೇಖನ
  • ವಾಣಿಜ್ಯ
  • ಜನಮತ‌
  • ನಮ್ಮೂರು – ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Terms of Service     Privacy Policy

Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

error: Content is protected !!
No Result
View All Result
  • ಲೇಖನ
  • ವಾಣಿಜ್ಯ
  • ನಮ್ಮೂರು – ನಮ್ಮ ಜಿಲ್ಲೆ
  • ಜನಮತ‌
  • ನಿಮ್ಮ ಭವಿಷ್ಯ-ನಿಮ್ಮ ಕೈಯಲ್ಲಿ
  • ಸಿನಿಮಾ
  • ವಿಡಿಯೋ

Developed by Naik & Co © Copyright Publisher of Mobile Media Network

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😊✋