ಶಿರಸಿ ಮೂಲದ ನ್ಯಾಯವಾದಿ, ಲೇಖಕಿ ಅನುಪಮಾ ಹೆಗಡೆ ಅವರ ಪ್ರತಿಭೆಯನ್ನು ಚಲನಚಿತ್ರ ಕ್ರಿಟಿಕ್ ಅಕಾಡೆಮಿ ಗುರುತಿಸಿದೆ. ಉತ್ತಮ ಚಿತ್ರಕಥೆಗಾಗಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
`ಹದಿನೇಳೆಂಟು’ ಎಂಬ ಸಿನೇಮಾಗಾಗಿ ಅನುಪಮಾ ಹೆಗಡೆ ಚಿತ್ರಕಥೆ ರಚಿಸಿದ್ದರು. ಹೀಗಾಗಿ ಈ ಸಿನಿಮಾದ ನಿರ್ದೇಶಕ, ಕಥೆಗಾರ ಪ್ರಥ್ವಿ ಕೋಣನೂರು ಜೊತೆ ಅನುಪಮಾ ಹೆಗಡೆ ಅವರನ್ನು ಗೌರವಿಸಲಾಯಿತು, ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಸಮಾರಂಭದಲ್ಲಿ ಅನುಪಮಾ ಹೆಗಡೆ ಸನ್ಮಾನ ಸ್ವೀಕರಿಸಿದರು.