ವೈದ್ಯಕೀಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದವರಿಗೆ ದಾಸ್ ಸೇವಾ ಸಂಸ್ಥೆ ಉದ್ಯೋಗದ ದಾರಿ ತೋರುತ್ತಿದೆ. ಕಳೆದ 23 ವರ್ಷಗಳಿಂದ ರೋಗಿ ಹಾಗೂ ಆರೈಕೆದಾರರ ನಡುವೆ ಸಂಪರ್ಕ ಕೊಂಡಿಯಾಗಿ ಈ ಸಂಸ್ಥೆ ಕೆಲಸ ಮಾಡುತ್ತಿದೆ.
ದಾಸ್ ಸೇವಾ ಸಂಸ್ಥೆಯ ಮುಖ್ಯ ಕಚೇರಿ ಮಂಗಳೂರು. ಅದಾಗಿಯೂ, ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ಹಾಸನ, ದಾವಣಗೆರೆ, ಬಳ್ಳಾರಿ ಸೇರಿ ರಾಜ್ಯದ ನಾನಾ ಭಾಗಗಳಲ್ಲಿ ಈ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಅಭ್ಯರ್ಥಿಗೆ ಯೋಗ್ಯ ತರಬೇತಿ ನೀಡುವ ದಾಸ್ ಸೇವಾ ಸಂಸ್ಥೆ ತರಬೇತಿಯ ಅವಧಿಯಲ್ಲಿಯೇ 25 ಸಾವಿರ ವೇತನ ನೀಡುವ ಭರವಸೆ ನೀಡಿದೆ. ರೋಗಿ ಹಾಗೂ ಆರೈಕೆದಾರರ ನಡುವೆ ಭಾವನಾತ್ಮಕ ಸಂಬoಧ ಬೆಸೆಯುವಲ್ಲಿ ಈ ಸಂಸ್ಥೆ ಸೇತುವೆಯಾಗಿದೆ.
ದಾಸ್ ಸೇವಾ ಸಂಸ್ಥೆಯಲ್ಲಿ ತರಬೇತಿ ಪಡೆದು ಉದ್ಯೋಗ ಕಂಡುಕೊoಡವರು
ದಾಸ್ ಸೇವಾ ಸಂಸ್ಥೆಗೆ ಅನಿಲ ದಾಸ್ ರೂವಾರಿ. ಹಲವು ನರ್ಸಿಂಗ್ ಹೋಂ ಜೊತೆ ಅವರು ನಿರಂತರ ಸಂಪರ್ಕದಲ್ಲಿದ್ದಾರೆ. ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅಗತ್ಯ ತರಬೇತಿ ನೀಡಿ ಅವರಿಗೆ ತಕ್ಕ ಉದ್ಯೋಗವನ್ನು ಒದಗಿಸುತ್ತಾರೆ. ಕನಿಷ್ಟ 7ನೇ ತರಗತಿ ಮುಗಿಸಿದ ಯಾರು ಬೇಕಾದರೂ ಇಲ್ಲಿ ತರಬೇತಿಗೆ ಬರಬಹುದು. ಉಚಿತ ಊಟ-ವಸತಿ ಜವಾಬ್ದಾರಿಯನ್ನು ಅವರೇ ನೋಡಿಕೊಳ್ಳುತ್ತಾರೆ. ತರಬೇತಿ ಅವಧಿ ಮುಗಿದ ನಂತರ ಆಸ್ಪತ್ರೆ, ವೃದ್ಧಾಶ್ರಮ ಸೇರಿ ವಿವಿಧ ಕಡೆ ಖಾಯಂ ಉದ್ಯೋಗವನ್ನು ಕಲ್ಪಿಸುತ್ತಾರೆ. ಈ ಸಂಸ್ಥೆಯ ಕಾಯಕ ಮೆಚ್ಚಿ ಗ್ಲೋಬಲ್ ಸ್ಕೋಲರ್ ಪೌಂಡೇಶನ್ `ಉದ್ಯೋಗ ರತ್ನ’ ಎಂಬ ಪ್ರಶಸ್ತಿ ನೀಡಿ ಗೌರವಿಸಿದೆ.
ಗರ್ಭಿಣಿ, ಬಾಣಂತಿ, ವೃದ್ಧರು, ಅಶಕ್ತರ ಸೇವೆ ಮಾಡಲು ಆಸಕ್ತಿ ಇದ್ದವರಿಗೆ ದಾಸ್ ಸಂಸ್ಥೆ ಸಹಕಾರಿ. ಮಗು-ಬಾಣಂತಿ ಆರೈಕೆ, ವೃದ್ಧ-ಅಶಕ್ತರ ಸಲಹೆಗೆ ಜನ ಬೇಕಾದವರೂ ಈ ಸಂಸ್ಥೆಗೆ ಕರೆ ಮಾಡಬಹುದು.
ದಾಸ್ ಸೇವಾ ಸಂಸ್ಥೆಯ ಸೇವೆ ನಿಮಗೆ ಅಗತ್ಯವಿದ್ದರೆ ಈಗಲೇ ಫೋನ್ ಮಾಡಿ: 9845495055