ಕುಮಟಾ ಹೊಸ್ಕಟ್ಟಾ-ಸಿದ್ದೇಶ್ವರ ಮದ್ಯದ ಖಾರ್ಖಾಂಡ್ ಜಂತ್ರಡಿ ಭಾಗದಲ್ಲಿ ಪೊಲೀಸರು ಸಿಸಿ ಟಿವಿ ಅಳವಡಿಸಿದ್ದಾರೆ.
ಕೆಲ ತಿಂಗಳಿನಿoದ ಈ ಪ್ರದೇಶದಲ್ಲಿ ವಾಗ್ವಾದ-ಹೊಡೆದಾಟ ನಡೆಯುತ್ತಿದೆ. ಮೀನು ಹಿಡಿಯುವ ವಿಷಯ, ಭೂ ವ್ಯಾಜ್ಯ ಸೇರಿ ವಿವಿಧ ಕಾರಣಗಳಿಂದ ಗಲಾಟೆ ಉಂಟಾಗುತ್ತಿದೆ. ಇಚೆಗೆ ಎರಡು ಗುಂಪುಗಳ ನಡುವೆ ಇಲ್ಲಿ ಮಾರಾಮಾರಿ ನಡೆದಿದ್ದು, ತಪ್ಪಿಸಲು ಹೋದ ಪೊಲೀಸರು ಒದೆ ತಿಂದಿದ್ದರು. ಈ ವಿಷಯವಾಗಿ ಪ್ರಕರಣ ದಾಖಲಾಗಿ ಆರೋಪಿಗಳು ಜೈಲು ಸೇರಿದ್ದಾರೆ.
ಸುರಕ್ಷತೆ ಹಾಗೂ ಮುನ್ನಚ್ಚರಿಕೆ ದೃಷ್ಟಿಯಿಂದ ಗೋಕರ್ಣ ಪಿಐ ಶ್ರೀಧರ್ ಎಸ್ ಆರ್ ಮಂಗಳವಾರ ಅಲ್ಲಿ ಕ್ಯಾಮರಾ ಅಳವಡಿಸಿದರು. ಪೊಲೀಸ್ ಠಾಣೆಯಿಂದಲೇ ಕ್ಯಾಮರಾ ವೀಕ್ಷಿಸುವ ಅವಕಾಶವಿದ್ದು, ಅಹಿತಕರ ಘಟನೆ ತಡೆಯಲು ಸಹಕಾರಿಯಾಗುವ ನಿರೀಕ್ಷೆಯಿದೆ.