ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

5 ರೂಪಾಯಿ ಕೇಳಿದವ 10 ಲಕ್ಷ ರೂ ಯಾಮಾರಿಸಿದ!

mobiletime .in by mobiletime .in
A A
Share on FacebookShare on WhatsappShare on Twitter
ADVERTISEMENT

ಅಪರಿಚಿತ ಮೊಬೈಲ್ ಅಪ್ಲಿಕೇಶನ್ ಮೂಲಕ 5ರೂ ಪಾವತಿಸಲು ಹೋಗಿದ್ದ ಕೈಗಾ ಅಣು ವಿದ್ಯುತ್ ಘಟಕದ ನಿವೃತ್ತ ಉದ್ಯೋಗಿಯೊಬ್ಬರು 10 ಲಕ್ಷಕ್ಕೂ ಅಧಿಕ ಪ್ರಮಾಣದ ಹಣ ಕಳೆದುಕೊಂಡಿದ್ದಾರೆ. ಕಸ್ಟಮರ್ ಕೇರ್ ಸಿಬ್ಬಂದಿ ಎಂದು ಸಹಾಯ ಮಾಡುವ ನೆಪದಲ್ಲಿ ಮಾತನಾಡಿಸಿದ ವಂಚಕರು ಬಸವನಗೌಡ ನಾಗನೂರಿ ಅವರ ಬ್ಯಾಂಕ್ ಖಾತೆಯಲ್ಲಿದ್ದ ಹಣ ಲಪಟಾಯಿಸಿದ್ದಾರೆ.

Advertisement. Scroll to continue reading.
ADVERTISEMENT

ಕಾರವಾರದ ಕೈಗಾ ಅಣು ವಿದ್ಯುತ್ ಘಟಕದಲ್ಲಿ ಬಸವನಗೌಡ ನಾಗನೂರಿ ಅವರು ಉದ್ಯೋಗಿಯಾಗಿದ್ದರು. ಸದ್ಯ ಮಲ್ಲಾಪುರ ಟೌನ್‌ಶಿಪ್ಪಿನಲ್ಲಿ ವಾಸವಾಗಿರುವ ಅವರಿಗೆ 60 ವರ್ಷ ತುಂಬಿತ್ತು. ಹೀಗಾಗಿ ಅವರು ನಿವೃತ್ತಿಪಡೆದಿದ್ದು, ಮುಂದೆ ಹುಬ್ಬಳ್ಳಿಯಲ್ಲಿ ವಾಸ ಮಾಡಲು ಉದ್ದೇಶಿಸಿದ್ದರು. ಅದಕ್ಕಾಗಿ ನವನಗರದಲ್ಲಿ ಮನೆ ಕಟ್ಟುವ ಕೆಲಸ ಶುರು ಮಾಡಿದ್ದರು.

ADVERTISEMENT

ಮನೆ ಕೆಲಸ ಚುರುಕಾಗಿ ಸಾಗುತ್ತಿದ್ದು, ಅಡುಗೆ ಮನೆಗೆ ಅಗತ್ಯವಿರುವ ಚಿಮಣಿ ಖರೀದಿಗೆ ಅವರು ಗೂಗಲ್ ಮೊರೆ ಹೋದರು. ಸೆಪ್ಟೆಂಬರ್ 29ರಂದು ಬಸವನಗೌಡ ನಾಗನೂರಿ ಅವರು ಗೂಗಲ್ ಮೂಲಕ ಚಿಮಣಿ ಹುಡುಕಾಟ ನಡೆಸುತ್ತಿದ್ದರು. ಆಗ, ಅವರಿಗೆ ಗ್ಲೇನ್ ಕಂಪನಿಯ ಚಿಮಣಿ ಕಾಣಿಸಿತು. ಆದರೆ, ಅದನ್ನು ಖರೀದಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಂಪನಿಯ ಕಸ್ಟಮರ್ ಕೇರ್ ಸಂಖ್ಯೆ ಹುಡುಕಿದರು.

ADVERTISEMENT

ಗೂಗಲ್ ಸರ್ಚ ಮಾಡಿದಾಗ ಸಿಕ್ಕಿದ ಕಸ್ಟಮರ್ ಕೇರ್ ಸಂಖ್ಯೆಗೆ ಫೋನ್ ಮಾಡಿದರು. ಆಗ, ಅಪರಿಚಿತನೊಬ್ಬ ಕರೆ ಸ್ವೀಕರಿಸಿದ್ದು, 5 ರೂ ಪಾವತಿಸಿ ಕಸ್ಟಮರ್ ಕೇರ್’ಗೆ ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸಿದರು. 5 ರೂ ಹಣ ಪಾವತಿಗಾಗಿ ಮೊಬೈಲಿನಲ್ಲಿ ಹೆಲ್ಪ ಡೆಸ್ಕ್ ಹಾಸ್ಟ್ ಎಂಬ ಅಪ್ಲಿಕೇಶನ್ ಡೌನ್ಲೋಡ್ ಮಾಡಿಸಿದರು. ಅದರ ಮೂಲಕ 5 ರೂ ಪಾವತಿಸಲು ತಿಳಿಸಿದರು.

ಬಸವನಗೌಡ ನಾಗನೂರಿ ಅವರು ಕಸ್ಟಮರ್ ಕೇರ್ ಸಿಬ್ಬಂದಿ ಹೇಳಿದ ಮಾತಿನ ಪ್ರಕಾರ ಆ ಅಪ್ಲಿಕೇಶನ್ ಮೂಲಕ ತಮ್ಮ ಎಸ್‌ಬಿಐ ಬ್ಯಾಂಕ್ ಖಾತೆ ತೆರೆದರು. 5 ರೂ ಹಣವನ್ನು ಪಾವತಿ ಮಾಡಿದರು. ಅದಾಗಿ ನಿಮಿಷ ಕಳೆಯುವುದರೊಳಗೆ ಬಸವನಗೌಡ ನಾಗನೂರಿ ಅವರ ಬ್ಯಾಂಕ್ ಖಾತೆಯಲ್ಲಿದ್ದ 5 ಲಕ್ಷ ರೂ ಹಣ ಕಣ್ಮರೆಯಾಯಿತು. ಏನಾಯಿತು? ಎಂದು ತಿಳಿಯುವಷ್ಟರಲ್ಲಿ ಮತ್ತೆ 5 ಲಕ್ಷ ರೂ ಹಣ ಕಳೆದುಹೋಯಿತು. ಅದಾದ ನಂತರ ಉಳಿದ ಮತ್ತೆ 95 ಸಾವಿರ ರೂ ಸಹ ವಂಚಕರ ಪಾಲಾಯಿತು.

10.95 ಲಕ್ಷ ರೂ ಕಳೆದುಕೊಂಡ ಬಸವನಗೌಡ ನಾಗನೂರಿ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಯಿತು. ಮನೆ ನಿರ್ಮಾಣಕ್ಕಾಗಿ ಮಡಗಿದ್ದ ಕಾಸು ಕಳೆದುಕೊಂಡ ಅವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಬಂದರು. ತಮಗಾದ ಕೆಟ್ಟ ಅನುಭವದ ಬಗ್ಗೆ ತಿಳಿಸಿದರು. ಕಾರವಾರದ ಸೈಬರ್ ಕ್ರೈಂ ಪೊಲೀಸರು ಅವರಿಗೆ ಸಮಾಧಾನ ಮಾಡಿದ್ದು, `ಅಪರಿಚಿತ ಅಪ್ಲಿಕೇಶನ್’ಗಳನ್ನು ಮೊಬೈಲಿನಿಂದ ಡಿಲಿಟ್ ಮಾಡಿ’ ಎಂದು ಅರಿವು ಮೂಡಿಸಿದರು. ವಂಚಕರ ವಿರುದ್ಧ ಪ್ರಕರಣವನ್ನು ದಾಖಲಿಸಿದರು.

ನಿಮಗೆ ಏನೇ ಬೇಕಾದರೂ ಅಧಿಕೃತ ಡೀಲರ್’ನಿಂದ ಖರೀದಿಸಿ. ಅಮೇಜಾನ್ ಮೂಲಕ ಖರೀದಿಗೆ ಇಲ್ಲಿ ಕ್ಲಿಕ್ಕಿಸಿ: AMAZON

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A terrifying baby that woke up its parents!

ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!

October 4, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The hole in the hole is a lifesaver!

ಹೊಂಡದ ಗುಂಡಿಯೇ ಜೀವ ರಕ್ಷಕ!

October 12, 2025
This syrup is the reason for the deterioration of children's health!

ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!

October 11, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 12ರ ದಿನ ಭವಿಷ್ಯ

October 11, 2025
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋