ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅನುದಾನಿತ ಶಾಲೆ: ಇಲ್ಲಿ 35 ವರ್ಷ ದುಡಿದವರಿಗೂ ಪಿಂಚಣಿ ಇಲ್ಲ!

Achyutkumar by Achyutkumar
A A
Aided school Even those who have worked here for 35 years have no pension!
Share on FacebookShare on WhatsappShare on Twitter
ADVERTISEMENT

30-35 ವರ್ಷಗಳ ಕಾಲ ಅನುದಾನಿತ ಶಾಲಾ ಶಿಕ್ಷಕರನ್ನು ದುಡಿಸಿಕೊಳ್ಳುವ ಸರ್ಕಾರ ನಿವೃತ್ತಿ ನಂತರ ಪಿಂಚಣಿ ಕೊಡದೇ ಮನೆಗೆ ಕಳುಹಿಸುತ್ತಿದೆ. ಸುದೀರ್ಘ ಸೇವೆ ಸಲ್ಲಿಸಿದರೂ ನಿವೃತ್ತಿ ನಂತರ ಆ ಶಿಕ್ಷಕರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ.

Advertisement. Scroll to continue reading.
ADVERTISEMENT

ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಶಿಕ್ಷಕರು ಅನುದಾನಿತ ಶಾಲೆಗಳಲ್ಲಿದ್ದಾರೆ. ಅವರೆಲ್ಲರೂ ಈಗ ಸಂಘಟಿತರಾಗುತ್ತಿದ್ದಾರೆ. ಅಖಿಲ ಕರ್ನಾಟಕ ಹಾಗೂ ಪಿಂಚಣಿ ವಂಚಿತ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಸಂಘದ ಸಭೆ ಯಲ್ಲಾಪುರಲ್ಲಿ ನಡೆದಿದ್ದು, ಸಂಘದ ಬಲವರ್ಧನೆ ಬಗ್ಗೆ ಚರ್ಚಿಸಲಾಗಿದೆ. ಈ ಸಭೆಯಲ್ಲಿ ಸಂಘದ ರಾಜ್ಯಾಧ್ಯಕ್ಷ ಜಿ ಹನುಮಂತಪ್ಪ ಅವರು ಭಗವಹಿಸಿ `ಸಂಘಟನೆ ಒಂದೇ ನೌಕರರ ಸಮಸ್ಯೆಗೆ ಪರಿಹಾರ’ ಎಂದು ಘೋಷಿಸಿದ್ದಾರೆ.

ADVERTISEMENT

`ಸರ್ಕಾರ ಪ್ರಣಾಳಿಕೆಯಲ್ಲಿ ಪ್ರಕಟಿಸಿದ ಹಾಗೇ ಹಳೆ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಇಲ್ಲವಾದರೆ ನಮ್ಮ ಪ್ರತಿಭಟನೆ ಎದುರಿಸಬೇಕು’ ಎಂದು ಅವರು ಎಚ್ಚರಿಸಿದ್ದಾರೆ. `ಸರ್ಕಾರ ಅನುದಾನಿತ ಶಾಲೆಯವರನ್ನು ಮಲತಾಯಿ ಮಕ್ಕಳ ರೀತಿ ನೋಡುತ್ತಿದೆ. ನಿವೃತ್ತಿ ನಂತರ ಅನುದಾನಿತ ಶಾಲೆ ಸಿಬ್ಬಂದಿ ಸಮಸ್ಯೆಗೆ ಸಿಲುಕುತ್ತಿದ್ದಾರೆ’ ಎಂದು ವಿವರಿಸಿದರು. `ಸರ್ಕಾರಿ ನೌಕರರಿಗೆ ನೀಡುತ್ತಿರುವ ಆರೋಗ್ಯ ಸಂಜೀವಿನಿ ಸಹ ಈ ಶಿಕ್ಷಕರಿಗೆ ಸಿಗುತ್ತಿಲ್ಲ. 23 ವರ್ಷಗಳಿಂದ ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ ಖಾಲಿಯಿರುವ ಹುದ್ದೆಯನ್ನು ಭರ್ತಿ ಮಾಡಿಲ್ಲ’ ಎಂದು ದೂರಿದರು.

ADVERTISEMENT

`ಸರ್ಕಾರಿ ನೌಕರರು ಶಿಶು ಪಾಲನೆ ರಜೆಗೆ ಹೋದರೆ ಅವರ ವೇತನವನ್ನು ಸರ್ಕಾರ ನೀಡುತ್ತದೆ. ಆದರೆ, ಅನುದನಿತ ಶಾಲಾ ಸಿಬ್ಬಂದಿಗೆ ಈ ಸೌಕರ್ಯ ಇಲ್ಲ. ಸರ್ಕಾರಿ ನೌಕರರು ಕರ್ತವ್ಯದ ವೇಳೆ ಮರಣಹೊಂದಿದರೆ ಶವ ಸಂಸ್ಕಾರಕ್ಕೆ ಕಲ್ಯಾಣ ನಿಧಿ ಬಳಕೆ ಆಗುತ್ತದೆ. ಆದರೆ, ಆ ಕಲ್ಯಾಣ ನಿಧಿಗಳಿಗೆ ನಮ್ಮ ಅನುದಾನಿತ ಶಾಲಾ ಕಾಲೇಜುಗಳ ನೌಕರರ ಹಣಪಡೆದರೂ ಅದರ ಬಳಕೆಗೆ ಕೊಡುತ್ತಿಲ್ಲ’ ಎಂದು ವಿವರಿಸಿದರು.

`ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 143 ದಿನ ಹೋರಾಟ ನಡೆಯಿತು. ಆಗ ನೀಡಿದ ಭರವಸೆಗಳು ಈಡೇರಿಲ್ಲ’ ಎಂದು ಕಿಡಿಕಾರಿದರು. ಪ್ರಮುಖರಾದ ಬಸಪ್ಪ ತಳವಾರ್, ಡಿ ಆರ್ ಹೆಗಡೆ, ಶಿವಾನಂದ ಬಡಿಗೇರ್, ವಿನಾಯಕ ಶೇಟ, ಮುಕ್ತಾ ಶಂಕರ ಇತರರು ಭಾಗವಹಿಸಿದ್ದರು. ಎಂ ರಾಜಶೇಖರ, ವೆಂಕಟ್ರಮಣ ಭಟ್ಟ, ನೆಲ್ಸನ ಗೋನ್ಸಾಲ್ವಿಸ ಕಾರ್ಯಕ್ರಮ ನಿರ್ವಹಿಸಿದರು.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A terrifying baby that woke up its parents!

ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!

October 4, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The hole in the hole is a lifesaver!

ಹೊಂಡದ ಗುಂಡಿಯೇ ಜೀವ ರಕ್ಷಕ!

October 12, 2025
This syrup is the reason for the deterioration of children's health!

ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!

October 11, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 12ರ ದಿನ ಭವಿಷ್ಯ

October 11, 2025
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋