ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಸಹಕಾರಿ ಸರಸ್ವತಿಗೆ ಸಿಗಬೇಕು ಡಿಸಿಸಿ ನಿರ್ದೇಶಕ ಸ್ಥಾನ

ಸಹಕಾರಿಗಳ ಆಶೀರ್ವಾದ | ಮತದಾರರ ಪ್ರೋತ್ಸಾಹ | ಪ್ರಚಾರದ ವೇಳೆ ಬಾರೀ ಬೆಂಬಲ

Achyutkumar by Achyutkumar
A A
Saraswati of cooperatives should get the post of DCC director

ಸರಸ್ವತಿ ಎನ್ ರವಿ

Share on FacebookShare on WhatsappShare on Twitter
ADVERTISEMENT

ಕೆಡಿಸಿಸಿ ಬ್ಯಾಂಕಿನ 105 ವರ್ಷದ ಇತಿಹಾಸದಲ್ಲಿ ಈವರೆಗೆ ಒಬ್ಬರು ಮಹಿಳಾ ನಿರ್ದೇಶಕರಾಗಿಲ್ಲ. ಶತಮಾನದ ಅವಧಿಯಲ್ಲಿ ಈ ಬ್ಯಾಂಕು ಒಮ್ಮೆಯೂ ಮಹಿಳಾ ನಿರ್ದೇಶಕರನ್ನು ನೋಡಿಲ್ಲ!

Advertisement. Scroll to continue reading.
ADVERTISEMENT

ಎಲ್ಲಡೆ ಮಹಿಳೆಯರಿಗೆ ಶೇ 33ರ ಮೀಸಲಾತಿ ಬಗ್ಗೆ ಚರ್ಚೆ ನಡೆಯುತ್ತಿದೆ. ಆದರೆ, ಬ್ಯಾಂಕಿoಗ್ ವಲಯದಲ್ಲಿ ಮಹಿಳಾ ಮೀಸಲಾತಿ ಎಂಬುದು ದೊಡ್ಡ ಪ್ರಮಾಣದಲ್ಲಿಲ್ಲ. ಹೀಗಾಗಿ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಮಂಡಳಿಯಲ್ಲಿ ಈವರೆಗೂ ಮಹಿಳೆಯರು ಮುಖ್ಯ ವಾಹಿನಿಗೆ ಬಂದಿಲ್ಲ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನಕ್ಕೆ ಸರಸ್ವತಿ ಎನ್ ರವಿ ಅವರು ಆಸಕ್ತಿಹೊಂದಿದ್ದಾರೆ. ಬ್ಯಾಂಕಿನ ಪ್ರತಿನಿಧಿಯಾಗುವುದಕ್ಕಾಗಿ ಅವರು ಹಿರಿಯ ಸಹಕಾರಿಗಳ ಆಶೀರ್ವಾದದೊಂದಿಗೆ ಓಡಾಟ ನಡೆಸಿದ್ದಾರೆ.

ADVERTISEMENT

ಸಹಕಾರಿ ಕ್ಷೇತ್ರದಲ್ಲಿನ ಅನುಭವವೇ ಸರಸ್ವತಿ ಎನ್ ರವಿ ಅವರಿಗೆ ಶ್ರೀರಕ್ಷೆ. ಅವರ ಸೌಮ್ಯ ಸ್ವಭಾವ, ಅನ್ಯಾಯದ ವಿರುದ್ಧ ಹೋರಾಡುವ ಹಠ, ಪಾರದರ್ಶಕ ಆಡಳಿತದ ಮನಸ್ಸು ಹಾಗೂ ಉನ್ನತ ವಿದ್ಯಾರ್ಹತೆ ಸಹಕಾರಿ ಕ್ಷೇತ್ರದ ಯಶಸ್ಸಿಗೆ ಸಹಕಾರಿ. ಇದೇ ಆಧಾರದಲ್ಲಿ ಸರಸ್ವತಿ ಎನ್ ರವಿ ಅವರು ಪ್ರಜ್ಞಾವಂತ ಮತದಾರರ ಮನವೊಲೈಸುವ ಕೆಲಸ ಮಾಡುತ್ತಿದ್ದಾರೆ. ಹಿರಿಯ ಸಹಕಾರಿಗಳ ಸಹಕಾರದಲ್ಲಿ ಅವರು ಮತ ಯಾಚನೆ ಶುರು ಮಾಡಿದ್ದು, ಪ್ರಚಾರದ ಅವಧಿಯಲ್ಲಿ ಉತ್ತಮ ಸ್ಪಂದನೆ ಸಿಗುತ್ತಿದೆ.

ADVERTISEMENT

ಈಗಾಗಲೇ ಜಿಲ್ಲೆಯ ಎಲ್ಲಾ ಕಡೆ ಓಡಾಡಿರುವ ಅವರು ಒಂದು ಸುತ್ತಿನ ಪ್ರಚಾರ ಮುಗಿಸಿದ್ದಾರೆ. `ಸಹಕಾರಿ ಕ್ಷೇತ್ರ ಶುದ್ಧವಾಗಿರಬೇಕು ಎಂದರೆ ಮತದಾರರ ಮನಸ್ಸು ವಿಶಾಲವಾಗಿರಬೇಕು’ ಎಂದು ಅವರು ಅನೇಕರಿಗೆ ಮನವರಿಕೆ ಮಾಡಿದ್ದಾರೆ. ಸಹಕಾರಿ ಕ್ಷೇತ್ರದ ಭವಿಷ್ಯ ಚಿಂತನೆಗಳನ್ನು ಅವರು ಮತದಾರರಿಗೆ ತಿಳಿಸಿ ಅವರ ಮನ ಗೆಲ್ಲುತ್ತಿದ್ದಾರೆ. 20 ವರ್ಷದ ಸಾಮಾಜಿಕ ಜೀವನದ ಜೊತೆ 11 ವರ್ಷದ ಸಹಕಾರಿ ರಂಗ ಸರಸ್ವತಿ ಎನ್ ರವಿ ಅವರ ಗೆಲುವು ಸುಲಭವಾಗಿಸುವ ಸಾಧ್ಯತೆಗಳಿವೆ.

`ಸೊಸೈಟಿಗಳಲ್ಲಿ ಸಾಲಪಡೆಯುವುದರಿಂದಹಿಡಿದು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗಳವರೆಗೆ ಸಾವಿರಾರು ಸಮಸ್ಯೆಗಳಿವೆ. ಅಂಥ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಲು ಕೆಡಿಸಿಸಿ ಬ್ಯಾಂಕಿಗೆ ಉತ್ತಮ ನಿರ್ದೇಶಕ ಮಂಡಳಿ ಅಗತ್ಯವಿದೆ. ಸರ್ವರ ಸಹಕಾರ ಬಯಸಿ ನಾನು ಕೆಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಇಷ್ಟು ವರ್ಷಗಳ ಕಾಲ ನನ್ನನ್ನು ನೋಡಿದ ಮತದಾರರು ಈ ಚುನಾವಣೆ ಮೂಲಕ ಕೆಡಿಸಿಸಿ ಬ್ಯಾಂಕಿಗೆ ಮಹಿಳಾ ನಿರ್ದೇಶಕರನ್ನು ಆರಿಸುವ ವಿಶ್ವಾಸವಿದೆ’ ಎಂದು ಸರಸ್ವತಿ ಎನ್ ರವಿ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋