ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಅಂಗನವಾಡಿ ಅಕ್ಕೋರಿನ ಅನುಮಾನಾಸ್ಪದ ಸಾವು!

Achyutkumar by Achyutkumar
A A
Suspicious death of Anganwadi sister
Share on FacebookShare on WhatsappShare on Twitter
ADVERTISEMENT

ಜೊಯಿಡಾದ ತಿನೈಘಾಟ್ ಸೇತುವೆ ಬಳಿ ಮಹಿಳೆಯೊಬ್ಬರ ಶವ ಸಿಕ್ಕಿದೆ. ಶವದ ಬಳಿ ಮೊಬೈಲ್ ಸಹ ದೊರೆತಿದ್ದು, ಅದರಲ್ಲಿ ಅಡಗಿದ್ದ ಮೆಸೆಜ್ ಕೊಲೆಯ ಅನುಮಾನ ಹುಟ್ಟು ಹಾಕಿದೆ.

Advertisement. Scroll to continue reading.
ADVERTISEMENT

ಬೆಳಗಾವಿ – ಗೋವಾ ರಾಷ್ಟ್ರೀಯ ಹೆದ್ದಾರಿಯ ತಿನೈಘಾಟ್ ಸೇತುವೆ ಕೆಳಗಿನ ನೀರಿನಲ್ಲಿ ಶನಿವಾರ ರಾತ್ರಿ ಚಾಲಕರೊಬ್ಬರು ಈ ಶವ ನೋಡಿದ್ದಾರೆ. ನಂತರ ಅಲ್ಲಿನ ಜನ ಪೊಲೀಸರಿಗೆ ಮಾಹಿತಿ ನೀಡಿದರು. ನಂದಗಡದ ದುರ್ಗಾನಗರದ ಬಳಿ ವಾಸವಾಗಿದ್ದ ಅಶ್ವಿನಿ ಬಾಬುರಾವ ಪಾಟೀಲ (50) ಅವರು ಸಾವನಪ್ಪಿದನ್ನು ಅಲ್ಲಿದ್ದವರು ಖಚಿತಪಡಿಸಿದರು. ಅಶ್ವಿನಿ ಪಾಟೀಲ ಅವರು ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಮಾಡುತ್ತಿದ್ದರು. ಅವರ ಶವದ ಬಳಿಯಿದ್ದ ಮೊಬೈಲನ್ನು ಪೊಲೀಸರು ಗಮನಿಸಿದ್ದು, ಅದರಲ್ಲಿ ಎರಡು ವಿಭಿನ್ನ ಮೆಸೆಜ್ ಕಾಣಿಸಿತು.

ADVERTISEMENT

ಅಶ್ವಿನಿ ಪಾಟೀಲ ಅವರು ಅಕ್ಟೊಬರ್ 2ರಂದು ಕೇಕೇರಿ ಜಾತ್ರೆಗೆ ಹೋಗಿದ್ದರು. ಜಾತ್ರೆ ಮುಗಿಸಿದ ಅವರು ಮನೆ ಕಡೆ ಮರಳಿದ್ದು, ಕೊನೆಯದಾಗಿ ಬಿಡಿ ಬಳಿ ಜನ ಅವರನ್ನು ನೋಡಿದ್ದರು. ಆದರೆ, ಅವರು ಮನೆಗೆ ತಲುಪಿರಲಿಲ್ಲ. ಅಶ್ವಿನಿ ಪಾಟೀಲ ಅವರ ಪುತ್ರ ತಾಯಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿ ಪೊಲೀಸರ ಮೊರೆ ಹೋಗಿದ್ದರು.

ADVERTISEMENT

ಶನಿವಾರ ಸಿಕ್ಕ ಶವದ ಪಕ್ಕದಲ್ಲಿದ್ದ ಮೊಬೈಲಿನಲ್ಲಿ `ತಾನು ಬೆಂಗಳೂರಿಗೆ ಹೋರಟಿರುವೆ’ ಎಂದು ಅಶ್ವಿನಿ ಪಾಟೀಲ ಅವರು ಮೆಸೆಜ್ ಮಾಡಿರುವುದು ಕಾಣಿಸಿತು. ಅದರೊಂದಿಗೆ `ತಾನು ಆತ್ಮಹತ್ಯೆ ಮಾಡಿಕೊಳ್ಳುವೆ’ ಎಂಬ ಸಂದೇಶ ಸಹ ಅದೇ ಮೊಬೈಲಿನಲ್ಲಿತ್ತು. ಶವದ ಮೇಲೆ ಗಾಯದ ಗುರುತುಗಳಿದ್ದರಿಂದ ಕೊಲೆಯ ಶಂಕೆವ್ಯಕ್ತವಾಯಿತು. ರಾಮನಗರ ಪೊಲೀಸರು ಪ್ರಕರಣದ ಮಾಹಿತಿ ಕಲೆಹಾಕಲಾಗುತ್ತಿದ್ದು, ತಲೆ ಹಾಗೂ ಮುಖದ ಮೇಲೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿರುವುದನ್ನು ಗಮನಿಸಿದರು.

ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅದಾದ ನಂತರವೇ ಸಾವಿನ ಕಾರಣ ಗೊತ್ತಾಗಲಿದೆ. ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ತಿನ್ನೆಘಾಟ್ ಹಾಗೂ ಖಾನಾಪುರ ಪ್ರದೇಶದಲ್ಲಿ ಸಾವಿನ ಬಗ್ಗೆ ಬಗೆ ಬಗೆಯ ಚರ್ಚೆ ನಡೆದಿದೆ. ಆತಂಕದ ವಾತಾವರಣವೂ ಕಾಣಿಸಿದೆ.

ADVERTISEMENT
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋