ADVERTISEMENT
  • Home
Sunday, October 12, 2025
  • Login
Mobiletime.in
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌
No Result
View All Result
Mobiletime.in
No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
ADVERTISEMENT
ADVERTISEMENT
Home ನಮ್ಮ ಊರು-ನಮ್ಮ ಜಿಲ್ಲೆ

ಎಲ್ಲರಿಗೂ ಗೊತ್ತಿರುವ ಕಳ್ಳ.. ಪೊಲೀಸರಿಗೆ ಮಾತ್ರ ಸಿಗುತ್ತಿಲ್ಲ!

mobiletime .in by mobiletime .in
A A
The thief everyone knows... only the police can't find him!
Share on FacebookShare on WhatsappShare on Twitter
ADVERTISEMENT

ಯಲ್ಲಾಪುರದ ಮಂಚಿಕೇರಿ ಹಾಗೂ ಸುತ್ತಲಿನ ಭಾಗದಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಕಳ್ಳ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪೊಲೀಸರ ಬಳಿ ಮಾತ್ರ ಆತನನ್ನು ಹಿಡಿಯಲು ಆಗುತ್ತಿಲ್ಲ!

Advertisement. Scroll to continue reading.
ADVERTISEMENT

ಅನೇಕರು ತಮ್ಮಲ್ಲಿರುವ ಚಿನ್ನಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಅಂಥವುಗಳನ್ನು ಮೈಮೇಲೆ ಧರಿಸಿ ಎಲ್ಲಾ ಕಡೆ ಸುತ್ತಾಡುತ್ತಿದ್ದಾರೆ. `ಚಿನ್ನ ಹಾಗೂ ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರಿನಲ್ಲಿರಿಸಿ’ ಎಂದು ಪೊಲೀಸರು ಅರಿವು ಮೂಡಿಸಿದರೂ ಜನ ಜಾಗೃತರಾಗಿಲ್ಲ. ಹೀಗಾಗಿ ಒಂಟಿ ಮನೆ, ಚಿನ್ನಾಭರಣ ಧರಿಸುವ ಮಹಿಳೆಯರ ಮನೆಯನ್ನು ಗುರಿಯಾಗಿರಿಸಿಕೊಂಡ ವ್ಯಕ್ತಿಯೊಬ್ಬ ಪದೇ ಪದೇ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದು, ಆತನನ್ನು ಬಂಧಿಸುವುದು ಮಾತ್ರ ಸವಾಲಾಗಿದೆ.

ADVERTISEMENT

ಏನೂ ಇಲ್ಲದ ಬಡವ ದಿಢೀರ್ ಶ್ರೀಮಂತನಾಗಿರುವುದು, ಐಷಾರಾಮಿ ಕಾರುಗಳಲ್ಲಿ ಓಡಾಡುವುದು ನೋಡಿದ ಜನ ಆತನೇ ಕಳ್ಳ ಎಂದು ಗುರುತಿಸಿದ್ದಾರೆ. ಸಿಸಿ ಕ್ಯಾಮರಾ ದಾಖಲೆಗಳಲ್ಲಿ ಸಹ ಆತ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಬಂಧಿಸಲು ಹೋದಾಗ ಮಾತ್ರ ಆತ ಸಿಗುತ್ತಿಲ್ಲ. ಆಗಾಗ ಊರಿನಲ್ಲಿ ಕಾಣಿಸಿಕೊಳ್ಳುವ ಆ ಕಳ್ಳನ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದರೂ ತಕ್ಷಣ ಕಾಡು ಸೇರುವ ಅವನ ಶೋಧ ಸಾಧ್ಯವಾಗುತ್ತಿಲ್ಲ.

ADVERTISEMENT

ಈ ಎಲ್ಲಾ ಹಿನ್ನಲೆ ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ ಅವರು ಶನಿವಾರ ಪೊಲೀಸರ ಮೇಲೆ ತಮ್ಮ ಅಸಮಧಾನವ್ಯಕ್ತಪಡಿಸಿದರು. `ಯಲ್ಲಾಪುರ ಪೊಲೀಸರು ತುಂಬಾ ಒಳ್ಳೆಯವರಾದ ಕಾರಣದಿಂದಲೇ ಕಳ್ಳನನ್ನು ಹಿಡಿಯಲು ಆಗುತ್ತಿಲ್ಲ’ ಎಂಬ ಅರ್ಥದಲ್ಲಿ ಅವರು ಮಾತನಾಡಿದರು. ಕೊನೆಗೆ `ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿರುವಂತೆ ತೋರುತ್ತಿದೆ’ ಎಂಬ ಮಾತನ್ನು ಆಡಿದರು. ಕಳ್ಳರನ್ನು ಪತ್ತೆ ಹಚ್ಚದ ಕಾರಣ ಅನುಮಾನಗಳನ್ನುವ್ಯಕ್ತಪಡಿಸಿದರು.

`ಯಲ್ಲಾಪುರ ಪಟ್ಟಣದಲ್ಲಿಯೂ ಕಳ್ಳತನವಾಗಿದೆ. ಇಡಗುಂದಿ, ಮಂಚಿಕೇರಿ, ಕುಂದರಗಿ ಭಾಗಗಳಲ್ಲಿ ಆಗಾಗ ಕಳ್ಳತನ ನಡೆಯುತ್ತಲೇ ಇದೆ. ಸಾರ್ವಜನಿಕರ ಸಹಕಾರ ಸಿಕ್ಕರೂ ಕಳ್ಳ ಮಾತ್ರ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿAದ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಕುಂದರಗಿಯಲ್ಲಿ ನಡೆದ ಸಭೆಯಲ್ಲಿ ಡಿ ವೈ ಎಸ್ ಪಿ ಗೀತಾ ಪಾಟೀಲ ಅವರು ೧೫ ದಿನಗಳ ಒಳಗೆ ಕಳ್ಳನನ್ನು ಹಿಡಿಯುವುದಾಗಿ ನೀಡಿದ ಭರವಸೆ ಸಹ ಈಡೇರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕಿರವತ್ತಿ, ಕುಂದುರ್ಗಿ ಯಲ್ಲಾಪುರದಲ್ಲಿ ಸಿಸಿ ಕ್ಯಾಮರಾಗಳಿವೆ. ಆದರೂ, ಕಳ್ಳನನ್ನು ಹಿಡಿಯಲು ಆಗಿಲ್ಲ. ಕಳ್ಳರ ಕಾಟ ಮಿತಿ ಮೀರಿದ್ದು, ಮುಂದಿನ ೧೦ ದಿನದಲ್ಲಿ ಆತನ ಬಂಧನ ಆಗದೇ ಇದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು.

ಅಡ್ಡದಾರಿಗೆ ದೊಡ್ಡವರೇ ಮಾಲಕರು!
`ಯಲ್ಲಾಪುರದಲ್ಲಿ ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಅಕ್ರಮ ಸರಾಯಿ, ಗಾಂಜಾ ಮಾರಾಟದ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಹಲವು ಕಡೆ ಗಣ್ಯರೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಪೊಲೀಸರ ದಕ್ಷತೆಗೆ ಪ್ರಭಾವಿಗಳು ಕಡಿವಾಣ ಹಾಕುತ್ತಿದ್ದಾರೆ’ ಎಂಬ ಅನುಮಾನವ್ಯಕ್ತಪಡಿಸಿದರು. ಈ ಒಕ್ಕೂಟದ ಪ್ರಮುಖರಾದ ಸತ್ಯನಾರಾಯಣ ಹೆಗಡೆ, ಕೆ ಟಿ ಹೆಗಡೆ, ಸದಾಶಿವ ಚಿಕ್ಕೋತ್ತಿ, ಸುಬ್ಬಣ್ಣ ಉದ್ದಾಬೈಲ್, ವಿಶ್ವೇಶ್ವರ ಏಕಾನ್, ಸುನಂದಾ ಮರಾಠಿ, ಪ್ರಕಾಶ ಶಾಪೂರಕರ್ ಇತರರು ಈ ಎಲ್ಲಾ ಮಾತಿಗೆ ಧ್ವನಿಗೂಡಿಸಿದರು.

ADVERTISEMENT
  • Trending
  • Comments
  • Latest

ಆಕ್ಷೆಪಣೆ ಹಿನ್ನಲೆ ಈ ವರದಿ ಪ್ರಸಾರಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ

October 3, 2025
A life-threatening birthday party!

ಬದುಕಿಗೆ ಮಾರಕವಾದ ಬರ್ತಡೆ ಪಾರ್ಟಿ!

October 7, 2025
A terrifying baby that woke up its parents!

ಪಾಲಕರ ನಿದ್ದೆಗೆಡಿಸಿದ ಭಯಾನಕ ಶಿಶು!

October 4, 2025
ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

ಆರೋಗ್ಯವಂತ ಮಗುವಿಗಾಗಿ ಸ್ವರ್ಣಸ್ಪರ್ಶ

0
ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

ಹೂಡಿಕೆಗೆ ಇಲ್ಲಿದೆ ಹಲವು ಅವಕಾಶ

0
Join hands with `Trek' using a digital trick!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

0
The hole in the hole is a lifesaver!

ಹೊಂಡದ ಗುಂಡಿಯೇ ಜೀವ ರಕ್ಷಕ!

October 12, 2025
This syrup is the reason for the deterioration of children's health!

ಸರ್ಕಾರವೇ ಹೇಳಿದ ಸತ್ಯ: ಮಕ್ಕಳ ಆರೋಗ್ಯ ಹದಗೆಡಲು ಈ ಸಿರಪ್ ಕಾರಣ!

October 11, 2025
2025 ಸೆಪ್ಟೆಂಬರ್ 30ರ ದಿನ ಭವಿಷ್ಯ

2025 ಅಕ್ಟೋಬರ್ 12ರ ದಿನ ಭವಿಷ್ಯ

October 11, 2025
ADVERTISEMENT
Email: ukskofc@gmail.com

Developed by Naik & Co  © Copyright Publisher of Mobile Media Network

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

You cannot copy content of this page

No Result
View All Result
  • ವಾಣಿಜ್ಯ
  • ಲೇಖನ
  • ನಮ್ಮ ಊರು-ನಮ್ಮ ಜಿಲ್ಲೆ
  • ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ
  • ಜನಮತ‌

Copyright © 2025 MobileTime.in Owned By: Mobile Media Network LLP Maintained By: Naik and Co.

ನಿಮ್ಮ ಸಹಾಯಕ್ಕೆ ನಾನಿದ್ದೇನೆ! 😍✋