ಎಂಟು ಜನ ಸೇರಿ ಶ್ರೀಪಾದ ಹೆಗಡೆ ಅವರನ್ನು ಹಗ್ಗದಿಂದ ಕಟ್ಟಿ ಹಾಕಿ ಕತ್ತಿಯಿಂದ ಹೊಡೆದಿದ್ದಾರೆ. ಶ್ರೀಪಾದ ಹೆಗಡೆ ಅವರು ಜೋರಾಗಿ ಕೂಗಿಕೊಂಡಿದ್ದು, ಈ ವೇಳೆ ಅವರ ಪತ್ನಿ ಬರುವುದನ್ನು ನೋಡಿ ಆ ಎಂಟು ಜನ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ.
Advertisement. Scroll to continue reading.
ಶಿರಸಿಯ ಹೀಪನಳ್ಳಿ ಹೊನ್ನಜ್ಜಿಯ ಶ್ರೀಪಾದ ಮಹಾಬಲೇಶ್ವರ ಹೆಗಡೆ ಅವರು ವಾಸವಾಗಿದ್ದಾರೆ. ಅದೇ ಊರಿನ ಅನುಪಮ ಪುರುಷೋತ್ತಮ ಹೆಗಡೆ ಹಾಗೂ ಶ್ರೀಪಾದ ಹೆಗಡೆ ನಡುವೆ ಮೊದಲಿನಿಂದಲೂ ವೈಮನಸ್ಸಿದೆ. ಹರಿಯುವ ನೀರಿನ ವಿಷಯವಾಗಿ ಆ ಎರಡು ಕುಟುಂಬದವರು ಕಚ್ಚಾಟ ನಡೆಸುವ ವಿಷಯ ಊರಿಗೆ ತಿಳಿದಿದೆ. ಇದೇ ವಿಷಯವಾಗಿ ಸದ್ಯ ಹೊಡೆದಾಟ ನಡೆದಿದ್ದು, ಶ್ರೀಪಾದ ಹೆಗಡೆ ಅವರಿಗೆ ಹೊಡೆಯಲು ಅನುಪಮ ಹೆಗಡೆ ಅವರ ಜೊತೆ ಮತ್ತೆ ಏಳು ಜನ ಕೈ ಜೋಡಿಸಿದ್ದಾರೆ.
ಇದನ್ನೂ ಓದಿ: ಶ್ರೀಪಾದ ಹೆಗಡೆಯೂ ಸಾಚಾ ಅಲ್ಲ!
ಡಿಸೆಂಬರ್ 21ರಂದು ಶ್ರೀಪಾದ ಹೆಗಡೆ ಅವರು ಕಾಲುದಾರಿಯ ಮೂಲಕ ತೋಟಕ್ಕೆ ಹೋಗುತ್ತಿದ್ದರು. ಆಗ ಅವರಿಗೆ ಅನುಪಮ ಹೆಗಡೆ ಅವರು ಎದುರಾದರು. ಶ್ರೀಪಾದ ಹೆಗಡೆ ಅವರನ್ನು ಉದ್ದೇಶಿಸಿ ಅನುಪಮ ಹೆಗಡೆ ಅವರು ಬೈಗುಳ ಶುರು ಮಾಡಿದರು. ಶ್ರೀಪಾದ ಹೆಗಡೆ ಅವರನ್ನು ನಿಂದಿಸಿ ಅವರನ್ನು ನೆಲಕ್ಕೆ ದೂಡಿದರು.
ಆಗ ಅಲ್ಲಿ ಪುರುಷೋತ್ತಮ ನಾರಾಯಣ ಹೆಗಡೆ ಅವರು ಕತ್ತಿ ಹಿಡಿದುಕೊಂಡು ಬಂದಿದ್ದು, ಅನುಪಮ ಹೆಗಡೆ ಅವರು ಆ ಕತ್ತಿಪಡೆದರು. ಅಲ್ಲಿಯೇ ಇದ್ದ ಅನುರಾಧಾ ಪುರುಷೋತ್ತಮ ಹೆಗಡೆ ಅವರು ಶ್ರೀಪಾದ ಹೆಗಡೆ ಅವರು ತಪ್ಪಿಸಿಕೊಳ್ಳದ ಹಾಗೇ ಕೈ ಹಿಡಿದುಕೊಂಡರು. ಆಗ, ಅನುಪಮ ಹೆಗಡೆ ಅವರು ಬೀಸಿದ ಕತ್ತಿ ಶ್ರೀಪಾದ ಹೆಗಡೆ ಅವರ ತಲೆಗೆ ತಾಗಿತು. ಹಣೆಯಿಂದ ರಕ್ತವೂ ಸುರಿಯಿತು.
ಈ ವೇಳೆ ಅದೇ ಭಾಗದ ಗಜಾನನ ಮಂಜುನಾಥ ಹೆಗಡೆ ಅವರು ಹಗ್ಗ ಹಿಡಿದು ಅಲ್ಲಿಗೆ ಬಂದರು. ಅವರ ಜೊತೆಗಿದ್ದ ರಾಹುಲ್ ಗಜಾನನ ಹೆಗಡೆ, ರಾಜೇಶ್ವರಿ ಗಜಾನನ ಹೆಗಡೆ, ಕೃಷ್ಣ ವೆಂಕಟ್ರಮಣ ಹೆಗಡೆ ಹಾಗೂ ಪ್ರಿಯಾ ಕೃಷ್ಣ ಹೆಗಡೆ ಸೇರಿ ಆ ಹಗ್ಗದಿಂದ ಶ್ರೀಧರ ಹೆಗಡೆ ಅವರನ್ನು ಕಟ್ಟಿ ಹಾಕಿದರು. ಎರಡು ಕೈಗಳನ್ನು ಕಟ್ಟಿ ಹಿಂಸಿಸಲು ಶುರು ಮಾಡಿದರು.
ಈ ವೇಳೆ ಶ್ರೀಪಾದ ಹೆಗಡೆ ಅವರ ಪತ್ನಿ ಅಲ್ಲಿಗೆ ಧಾವಿಸಿದ್ದು, ಅವರನ್ನು ನೋಡಿದ ಆ ಎಂಟು ಜನ ಅಲ್ಲಿಂದ ಓಡಿದರು. `ಮತ್ತೊಮ್ಮೆ ಒಬ್ಬನೇ ಸಿಕ್ಕರೆ ನಿನಗೆ ಗತಿ ಕಾಣಿಸುವೆ’ ಎಂದು ಅವರೆಲ್ಲರೂ ಬೆದರಿಸಿದ್ದು, ಬೆದರಿಕೆಗೆ ಹೆದರಿದ ಶ್ರೀಪಾದ ಹೆಗಡೆ ಅವರು ಪೊಲೀಸರ ಮೊರೆ ಹೋದರು.