ಸಿದ್ದಾಪುರದಲ್ಲಿ ನೂರಾರು ಅಡಿಕೆ ಮರಗಳನ್ನು ಮಾರಣ ಹೋಮ ನಡೆಸಿದ ಅರಣ್ಯಾಧಿಕಾರಿಗಳ ವಿರುದ್ಧ ಅತಿಕ್ರಮಣದಾರರು ಸಿಡಿದೆದ್ದಿದ್ದಾರೆ. ಬುಧವಾರ ಕ್ಯಾದಗಿ ಅರಣ್ಯ ಕಛೇರಿಗೆ ಅತಿಕ್ರಮಣದಾರರು ಮುತ್ತಿಗೆ ಹಾಕಿ ಆಕ್ರೋಶವ್ಯಕ್ತಪಡಿಸಿದ್ದಾರೆ.
`ಅಡಿಕೆ ಮರ ನಾಶ ಮಾಡಿದ ಅರಣ್ಯ ಸಿಬ್ಬಂದಿಯನ್ನು ಹಾಜರುಪಡಿಸಿ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು. ಆ ಅರಣ್ಯ ಸಿಬ್ಬಂದಿ ಕಾಣಿಸದ ಕಾರಣ ಕಚೇರಿಗೆ ನುಗ್ಗುವ ಪ್ರಯತ್ನ ಮಾಡಿದರು. `ಅರಣ್ಯ ಇಲಾಖೆಯ ತಪ್ಪು ನೀತಿ-ನಿಯಮಗಳಿಂದ ಜನ ಸಮಸ್ಯೆ ಅನುಭವಿಸುತ್ತಿದ್ದಾರೆ. ಮಾನವೀಯತೆ ಮರೆತು ಅಧಿಕಾರಿಗಳು ವರ್ತಿಸಿದ್ದಾರೆ’ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. `ಕಾನೂನು ವಿಧಿ-ವಿಧಾನ ಅನುಸರಿಸದೇ ಅತಿಕ್ರಮಣ ತೆರವು ಮಾಡಲಾಗಿದೆ. ಅರ್ಜಿ ಪುನರ್ ಪರಿಶೀಲನೆ ಹಂತದಲ್ಲಿರುವಾಗ ಒಕ್ಕಲೆಬ್ಬಿಸುವ ಪ್ರಕ್ರಿಯೆ ನಡೆದಿದೆ’ ಎಂದು ಅಸಮಧಾನವ್ಯಕ್ತಪಡಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಸಿಎಫ್ ಪವಿತ್ರಾ ಮತ್ತು ಆರ್ ಎಫ್ ಓ ಮಹೇಶ್ ದೇವಡಿಗ ಅವರು ಜನರ ಪ್ರಶ್ನೆಗೆ ಉತ್ತರಿಸಲಾಗದೇ ತತ್ತರಿಸಿದ್ದು, ತಹಶೀಲ್ದಾರ ಎಮ್ ಆರ್ ಕುಲಕರ್ಣಿ ಮತ್ತು ಸಿಪಿಐ ಸೀತಾರಾಮ ಅವರು ಪ್ರತಿಭಟನಾಕಾರರನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದರು. ಮುಂದಿನ 15 ದಿನದಲ್ಲಿ ಅರಣ್ಯವಾಸಿಗಳ ಸಭೆ ನಡೆಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಪ್ರಮುಖರಾದ ಮಾಬ್ಲೇಶ್ವರ ನಾಯ್ಕ ಬೇಡ್ಕಣಿ ಕೆ ಟಿ ನಾಯ್ಕ ಕ್ಯಾದಗಿ, ಇಬ್ರಾಹೀಂ ಗೌಡಳ್ಳಿ, ಮಹೇಶ ನಾಯ್ಕ ಕಾನಕ್ಕಿ, ಬಿಡಿ ನಾಯ್ಕ ಹರಕನಳ್ಳಿ, ರಾಮಕೃಷ್ಣ ನಾಯ್ಕ ತ್ಯಾಗಲಿಮನೆ, ದಿನೇಶ ನಾಯ್ಕ ಬೇಡ್ಕಣಿ, ಸುನೀಲ ನಾಯ್ಕ ಸಂಪಖoಡ, ನೆಹರು ನಾಯ್ಕ, ಶಿವಾನಂದ ಜೋಗಿ, ಚಂದ್ರ ಶಾನಭಾಗ,ರಪೀಕ್ ಗೌಡಳ್ಳಿ, ಹರಿ ನಾಯ್ಕ ಓಂಕಾರ, ಮೋಹನ ಕಾನಳ್ಳಿ, ಉಮೇಶ ಬೇಡ್ಕಣಿ, ಗೋವಿಂದ ಗೌಡ, ಶಿವಪ್ಪ ನಾಯ್ಕ, ಧನಂಜಯ ನಾಯ್ಕ, ಸಂಕೇತ ಹಲಗೇರಿ, ನಾಗರಾಜ ಮರಾಠಿ ಪ್ರತಿಭಟನೆಯಲ್ಲಿದ್ದರು.