ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಕೆಲಸ ಮಾಡುವ ಮಹಿಳೆ ಮೇಲೆ ಪುರುಷನೊಬ್ಬ ದಬ್ಬಾಳಿಕೆ ನಡೆಸಿದ್ದು, ರಕ್ಷಣೆ ಕೋರಿ ನೀಲಗಂಗವ್ವ ಚಲವಾದಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.
Advertisement. Scroll to continue reading.
ಮುಂಡಗೋಡ ಗಾಂಧೀನಗರದ ನೀಲಗಂಗವ್ವ ಚಲವಾದಿ ಅವರು
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಡಿ ದರ್ಜೆ ನೌಕರರಾಗಿದ್ದಾರೆ. ಡಿಸೆಂಬರ್ 2ರಂದು ಅವರು ಕಚೇರಿಯಲ್ಲಿ ಕೆಲಸ ನಿರ್ವಹಿಸುವ ವೇಳೆಯಲ್ಲಿಯೇ ಅಲ್ಲಿಗೆ ಬಂದ ಬಸವನಬದಿಯ ವೆಂಕಟೇಶ ಕೃಷ್ಣ ಶಿರಾಲಿ ಅವರು ದರ್ಬಾರ್ ನಡೆಸಿದ್ದಾರೆ.
`ನಿನ್ನ ಮನೆ ಪಕ್ಕದಲ್ಲಿರುವ ನನ್ನ ಪ್ಲಾಟಿನ ಬಳಿ ನಿನ್ನ ಮಗ ರೂಪೇಶ ಚಲವಾದಿ ಹಾಗೂ ನಿನ್ನ ತಮ್ಮ ನೀಲಪ್ಪ ಹಾಕಿದ ಬೇಲಿ ತೆಗೆಯಬೇಕು’ ಎಂದು ವೆಂಕಟೇಶ ಶಿರಾಲಿ ಅವರು ತಾಕೀತು ಮಾಡಿದ್ದಾರೆ. `ಇಲ್ಲದಿದ್ದರೆ ಗತಿ ಕಾಣಿಸುವೆ. ಕೋರ್ಟಿಗೆ ಎಳೆಯುವೆ’ ಎಂದು ಬೆದರಿಸಿದ್ದಾರೆ. ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುವ ಮಹಿಳೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಆ ಮಹಿಳೆಯ ಜಾತಿ ವಿಷಯವಾಗಿಯೂ ಕೆಟ್ಟದಾಗಿ ನಿಂದಿಸಿದ್ದಾರೆ.
ಈ ಎಲ್ಲಾ ವಿಷಯದ ಬಗ್ಗೆ ನೀಲಗಂಗವ್ವ ಚಲವಾದಿ ಅವರು ಕುಟುಂಬದವರ ಜೊತೆ ಚರ್ಚಿಸಿದ್ದು, ಅವರ ಸಲಹೆ ಮೇರೆಗೆ ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ನೀಲಗಂಗವ್ವ ಚಲವಾದಿ ಅವರಿಗೆ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ.