ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಐವರಿಗೆ ಪೆಟ್ಟಾಗಿದ್ದು, ಆ ಪೈಕಿ ಒಬ್ಬರು ಸಾವನಪ್ಪಿದ್ದಾರೆ.
ಯಲ್ಲಾಪುರದ ಮಲವಳ್ಳಿಯ ಮಹಾಬಲೇಶ್ವರ ತಿಮ್ಮಯ್ಯ ಕುಣಬಿ ಅವರ ದುಡುಕುತನ ಈ ಅಪಘಾತಕ್ಕೆ ಕಾರಣ. ತಿಮ್ಮಯ್ಯ ಕುಣಬಿ ಅವರು ಬೈಕಿನಲ್ಲಿ ಮತ್ತಿಬ್ಬರನ್ನು ಕೂರಿಸಿಕೊಂಡು ಯಲ್ಲಾಪುರದಿಂದ ಅಂಕೋಲಾ ಕಡೆ ಚಲಿಸುವಾಗ ಈ ಅಪಘಾತ ನಡೆದಿದೆ. ಅಗಸೂರು ಬಳಿ ಆ ಬೈಕು ಕಾರಿಗೆ ಗುದ್ದಿದ ಪರಿಣಾಮ ಬೈಕಿನ ಹಿಂದೆ ಕೂತಿದ್ದ ಯಲ್ಲಾಪುರದ ಶೇಡಕುಳಿಯ ಬೆಳ್ಳಾ ತಮ್ಮಯ್ಯ ಕುಣಬಿ (50) ಅವರು ಸಾವನಪ್ಪಿದ್ದಾರೆ.
ಡಿಸೆಂಬರ್ 9ರಂದು ಮಹಾಬಲೇಶ್ವರ ಕುಣಬಿ ಅವರು ಬೆಳ್ಳಾ ತಮ್ಮಯ್ಯ ಕುಣಬಿ ಹಾಗೂ ಮರ್ತಿ ಬೆಳ್ಳಾ ಕುಣಬಿ ಅವರನ್ನು ಒಂದೇ ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದರು. ರಸ್ತೆ ಎಡಬದಿಯಲ್ಲಿ ಸಂಚರಿಸುವ ಬದಲು ಅವರು ಬಲಭಾಗದಿಂದ ಬೈಕ್ ಓಡಿಸುತ್ತಿದ್ದರು. ಬೈಕಿನ ವೇಗವೂ ಹೆಚ್ಚಾಗಿದ್ದು, ಅಂಕೋಲಾದಿAದ ಬಂದ ಕಾರಿಗೆ ಅಗಸೂರಿನ ಬಳಿ ಮಹಾಬಲೇಶ್ವರ ಕುಣಬಿ ಅವರು ಬೈಕ್ ಗುದ್ದಿದರು. ಪರಿಣಾಮ ಬೈಕಿನಲ್ಲಿದ್ದ ಬೆಳ್ಳಾ ಕುಣಬಿ, ಮರ್ತಿ ಬೆಳ್ಳಾ ಕುಣಬಿ ಅವರ ಜೊತೆ ಮಹಾಬಲೇಶ್ವರ ಕುಣಬಿ ಅವರು ನೆಲಕ್ಕೆ ಬಿದ್ದು ಗಾಯಗೊಂಡರು.
ಕಾರಿನಲ್ಲಿ ಸಂಚರಿಸುತ್ತಿದ್ದ ಅಂಕೋಲಾ ಪುರ್ಲಬೇಣದ ನಿಖಿಲ್ ಕೃಷ್ಣಾನಂದ ನಾಯ್ಕ ಹಾಗೂ ಕೃಷ್ಣಾನಂದ ಪಾಂಡುರAಗ ನಾಯ್ಕ ಅವರಿಗೂ ಈ ಅಪಘಾತದಲ್ಲಿ ಪೆಟ್ಟಾಯಿತು. ಗಂಭೀರ ಪ್ರಮಾಣದಲ್ಲಿ ಗಾಯಗೊಂಡ ಬೆಳ್ಳಾ ಕುಣಬಿ ಅವರನ್ನು ಅಂಕೋಲಾ ಆಸ್ಪತ್ರೆಗೆ ಸಾಗಿಸಲಾಯಿತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಕಾರವಾರ ಜಿಲ್ಲಾಸ್ಪತ್ರೆಗೆ ಕಳುಹಿಸಲಾಯಿತು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಬೆಳ್ಳಾ ಕುಣಬಿ ಅವರು ಕೊನೆಯುಸಿರೆಳೆದರು.
ಈ ಎಲ್ಲಾ ವಿಷಯದ ಬಗ್ಗೆ ಹೆಬ್ಬುಳದ ಸಂತೋಷ ತಳ್ಳೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಂಕೋಲಾ ಪೊಲೀಸರು ಮಲವಳ್ಳಿಯ ಮಹಾಬಲೇಶ್ವರ ತಿಮ್ಮಯ್ಯ ಕುಣಬಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದು,. `ಸಂಚಾರಿ ನಿಯಮ ಪಾಲಿಸಿ’ ಎಂದು ಸಾರ್ವಜನಿಕರಿಗೂ ಸೂಚಿಸಿದರು.
`ಹೆಲ್ಮೆಟ್ಧರಿಸಿ.. ಬೈಕ್ ಓಡಿಸಿ’