ಹಳಿಯಾಳದಲ್ಲಿ ನಡೆದ ವಿರಾಟ್ ಹಿಂದು ಸಮಾವೇಶದಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ. ಭವ್ಯ ಶೋಭಾಯಾತ್ರೆಯಲ್ಲಿ ಮಹಿಳೆಯರು ಪೂರ್ಣಕುಂಭಹಿಡಿದು ಸಂಚರಿಸಿದ್ದು, ಪುರುಷರು ಭಗವಾಧ್ವಜ ಪ್ರದರ್ಶನ ಮಾಡಿದ್ದಾರೆ.
ಮಹಾಗಣಪತಿ ದೇವಸ್ಥಾನದಿಂದ ಗ್ರಾಮದೇವಿ ಮೈದಾನದವರೆಗೆ ನಡೆದ ಯಾತ್ರೆಯಲ್ಲಿ ಸಾವಿರಾರು ಜನ ಭಜನೆಗಳನ್ನು ಹಾಡಿದ್ದಾರೆ. ಬಸ್ ನಿಲ್ದಾಣ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತ, ಶಿವಾಜಿ ವೃತ್ತದ ಮೂಲಕ ಸಾಗಿದ ಮೆರವಣಿಗೆಯನ್ನು ಅನೇಕರು ಕಣ್ತುಂಬಿಕೊAಡಿದ್ದಾರೆ.
`ಹಿoದೂ ಸಮಾಜವು ಕೇವಲ ಬೌದ್ಧಿಕವಾಗಿ ಬೆಳೆದರೆ ಸಾಲದು, ವ್ಯವಹಾರಿಕವಾಗಿಯೂ ಜಾಣ್ಮೆ ಹೊಂದಿರಬೇಕು. ತುಂಡುಡುಗೆಗಳ ವ್ಯಾಮೋಹದಿಂದ ನಮ್ಮ ಸಾಂಸ್ಕೃತಿಕ ಪರಂಪರೆ ನಾಶವಾಗುತ್ತಿದ್ದು, ಮಕ್ಕಳು ದಾರಿ ತಪ್ಪುವುದನ್ನು ಹಿರಿಯರು ತಡೆಯಬೇಕು’ ಎಂದು ಮೆರವಣಿಗೆಯಲ್ಲಿ ಭಾಗವಹಿಸಿದ್ದ ಆರ್ ಎಸ್ ಎಸ್ ಕಲಬುರ್ಗಿ ವಿಭಾಗದ ಪ್ರಾಂತ ಪ್ರಮುಖ ಶ್ರೀನಿವಾಸ್ ಅವರು ಕರೆ ನೀಡಿದ್ದಾರೆ. `ಜಾತಿ ವ್ಯವಸ್ಥೆಯ ಭೇದಭಾವಗಳು ಹಿಂದೂ ಸಮಾಜದ ಹಿನ್ನಡೆಗೆ ಕಾರಣವಾಗಿವೆ. ಮೇಲ್ವರ್ಗ-ಕೆಳವರ್ಗ ಎನ್ನುವ ತಾರತಮ್ಯ ತೊಲಗಬೇಕು. ಸ್ವದೇಶಿ ವಸ್ತುಗಳ ಬಳಕೆಯನ್ನು ರೂಢಿಸಿಕೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.
ಕೆ ಕೆ ಹಳ್ಳಿ ಮಠದ ನಿತ್ಯಾನಂದ ಸ್ವಾಮೀಜಿ `ಧರ್ಮದ ಮೇಲೆ ಎಷ್ಟೇ ದಾಳಿಯಾದರೂ ಅದು ನಶಿಸುವುದಿಲ್ಲ. ಸಕಲ ಜೀವರಾಶಿಗಳಲ್ಲಿ ದೇವರನ್ನು ಕಾಣುವ ದೈವಿ ಧರ್ಮ ನಮ್ಮದಾಗಿದೆ’ ಎಂದಿದ್ದಾರೆ. ಕಾರ್ಯಕ್ರಮದ ಪ್ರಾರಂಭದಲ್ಲಿ ಜನ ಸ್ವಾಮೀಜಿಗಳ ಪಾದಪೂಜೆ ನೆರವೇರಿಸಿದ್ದು, ಉಮಾಶಂಕರ ಮದ್ನಳ್ಳಿಮಠ ಪೂಜಾ ವಿಧಿ ವಿಧಾನಗಳನ್ನು ಮಾಡಿದ್ದಾರೆ.