ಇ-ಸ್ಟಾಂಪಿoಗ್ ತಂತ್ರಾoಶ ಬಳಕೆ ವಿಧಾನಗಳ ಬಗ್ಗೆ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ, ವಕೀಲರು ಹಾಗೂ ದಸ್ತಾವೇಜು ಬರಹಗಾರರಿಗೆ ಸರ್ಕಾರ ತರಬೇತಿ ನೀಡುತ್ತಿದೆ. ಯಲ್ಲಾಪುರದ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಈ ತರಬೇತಿ ನಡೆದಿದೆ.
ಕಾವೇರಿ ತಂತ್ರಾoಶ ಬಳಕೆ ವಿಧಾನದ ಬಗ್ಗೆ ತಜ್ಞ ಹಜರತ್ ಅಲಿ ಅವರು ಮಾಹಿತಿ ನೀಡಿದ್ದಾರೆ. ಜೊತೆಗೆ ಡಿಜಿಟಲ್ ಇ-ಸ್ಟಾಂಪ್ ಕುರಿತು ಅವರು ಅರಿವು ಮೂಡಿಸಿದ್ದಾರೆ. ವಕೀಲರಾದ ಪ್ರಕಾಶ ಭಟ್ಟ, ಎನ್ ಕೆ ಭಾಗ್ವತ್ ಹಾಗೂ ಸುಭಾಶ ಭಟ್ಟ ಅವರು ಈ ತರಬೇತಿಪಡೆದಿದ್ದಾರೆ. ಕೆಲ ಸಾರ್ವಜನಿಕರು ಸಹ ಈ ತರಬೇತಿಯಲ್ಲಿ ಭಾಗವಹಿಸಿದ್ದು, ತಮ್ಮ ಜ್ಞಾನ ವೃದ್ಧಿಸಿಕೊಂಡಿದ್ದಾರೆ. ಕಚೇರಿ ಸಿಬ್ಬಂದಿ ಹಣವಂತಕುಮಾರ ಸುರೆಬಾನ್ ಹಾಗೂ ಸುವರ್ಣ ಕಾಮತ್ ಅವರು ತಂತ್ರಾoಶ ಅಳವಡಿಕೆ ವಿಧಾನಗಳ ಬಗ್ಗೆ ಮಾಹಿತಿಪಡೆದಿದ್ದಾರೆ.
ಅಗತ್ಯ ದಾಖಲೆಗಳ ಕ್ರೂಢೀಕರಣ, ದಾಖಲೆಗಳನ್ನು ಅಪ್ಲೋಡ್ ಮಾಡುವಿಕೆ, ಹಣ ಪಾವತಿ ಹಾಗೂ ಇನ್ನಿತರ ವಿಷಯಗಳ ವಿಚಾರವಾಗಿ ತಜ್ಞರು ಮಾತನಾಡಿದ್ದಾರೆ. ಮುದ್ರಾಂಕ ಇಲಾಖೆಯೂ ಈ ತರಬೇತಿ ಕಾರ್ಯಾಗಾರ ಆಯೋಜಿಸಿದ್ದು, ಡಿಜಿಟಲ್ ಇ-ಸ್ಟಾಂಪ್ ಪ್ರಯೋಜನಗಳ ಬಗ್ಗೆ ವಿವರಿಸಿದ್ದಾರೆ. ತಂತ್ರಾoಶದಲ್ಲಿ ಎದುರಾಗುವ ಸಮಸ್ಯೆ ಹಾಗೂ ಅದನ್ನು ಬಗೆಹರಿಸುವ ವಿಧಾನಗಳ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ವಿವರಿಸಲಾಗಿದೆ. ಉಪನೋಂದಣಾಧಿಕಾರಿ ಕಲಾವತಿ ಬೋರ್ಗಾಂವ್ ಇದ್ದರು.