ಗಾಂಧೀಜಿ ವಿಚಾರಧಾರೆಗಳ ಬಗ್ಗೆ ಜಾಗೃತಿ ಮೂಡಿಸಲು ಅಂಕೋಲಾದ ಸಮಾನ ಮನಸ್ಕರು ನಿರ್ಧರಿಸಿದ್ದಾರೆ. ಅಂಕೋಲಾ ಪಟ್ಟಣದ ಸತ್ಯಾಗ್ರಹ ಸ್ಮಾರಕ ಸಭಾಭವನದಲ್ಲಿ ಮಹಾತ್ಮ ಗಾಂಧಿ ನಿಧನದ `ಮಹಾತ್ಮ ಹುತಾತ್ಮ ದಿನ’ದ ಅಂಗವಾಗಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಹಿರಿಯ ಸಾಹಿತಿ ಶಾಂತರಾಮ ನಾಯಕ ಅವರು ಈ ವಿಷಯ ಪ್ರಕಟಿಸಿದ್ದಾರೆ. ರೈತ ಸಂಘದ ಪ್ರಮುಖರಾದ ಶಾಂತರಾಮ ನಾಯಕ ಅವರು ಇದಕ್ಕೆ ಧ್ವನಿಗೂಡಿಸಿದ್ದಾರೆ.
`ಇಂದು ಗಾಂಧಿ ಹತ್ಯೆ ಮಾಡಿದ ಗೋಡ್ಸೆ ಆರಾಧಿಸುವ ಮಟ್ಟಕ್ಕೆ ಬಂದಿದೆ. ಅದರಿಂದ ನಮ್ಮ ದೇಶ ಅಧಪತನದ ಕಡೆ ಸಾಗುತ್ತಿರುವಂತೆ ಭಾಸವಾಗುತ್ತಿದೆ. ಕೇಂದ್ರ ಸರಕಾರ ನರೇಗಾ ಹೆಸರನ್ನು ಬದಲಿಸುತ್ತಿದೆ. ಮಹಾತ್ಮಾ ಗಾಂಧಿಯ ಅವಮಾನ ಮಾಡುವ ರೀತಿಯಲ್ಲಿ ಕೆಲವರು ತೊಡಗಿಸಿಕೊಂಡಿದ್ದಾರೆ. ಇದನ್ನು ತಡೆಯುವುದಕ್ಕಾಗಿ ಮುಂದಿನ ದಿನಗಳಲ್ಲಿ ಗಾಂಧಿಜಿ ವಿಚಾರಧಾರೆ ಬಗ್ಗೆ ಜಾಗೃತಿ ಮುಡಿಸುವ ಕಾರ್ಯ ಮಾಡಲಾಗುತ್ತದೆ’ ಎಂದವರು ಘೋಷಿಸಿದರು.
ಸಾಹಿತಿ ಮೋಹನ ಹಬ್ಬು ಮಾತನಾಡಿ `ಗಾಂಧೀಜಿ ಅವರ ಹೆಸರನ್ನು ಕೆಡಿಸುವ ಹುನ್ನಾರ ನಡೆಯುತ್ತಿದೆ. ಗಾಂಧೀಜಿ ಅವರ ತತ್ವ ವಿಚಾರಗಳನ್ನು ಅರಿಯದೇ ಯಾರು ಹೇಳಿದ ಮಾತ್ರಕ್ಕೆ ಯುವ ಜನತೆ ಕೂಡ ಬಲಿಯಾಗುತ್ತಿರುವುದು ನಿಜಕ್ಕೂ ಆಘಾತಕಾರಿಯಾಗಿದೆ’ ಎಂದು ಕಳವಳವ್ಯಕ್ತಪಡಿಸಿದರು. ಕವಿ ಕೃಷ್ಣಾ ನಾಯಕ ಮಾತನಾ `ಜಾಲತಾಣಗಳಲ್ಲಿ ಗಾಂಧಿ ಬೇಕೆ ಅಥವಾ ಗೋಡ್ಸೆ ಬೇಕೆ ಎನ್ನುವ ಮಾಹಿತಿಯನ್ನು ಹರಿಬಿಡುತ್ತಿದ್ದಾರೆ. ಎಲ್ಲ ಕ್ಷೇತ್ರಗಳಲ್ಲಿಯೂ ಗಾಂಧಿಯ ಅವಮಾನಿಸುವ ಕಾರ್ಯ ನಡೆಯುತ್ತಿದೆ’ ಎಂದು ವಿಷಾಧಿಸಿದರು.
ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡಿ `ಗಾಂಧೀಜಿ ವಿಷಯವಾಗಿ ಮಾತನಾಡುವುದೇ ಅಪಾಯಕಾರಿ ಎಂಬ ಪರಿಸ್ಥಿತಿ ಬಂದಿದೆ. ಸಾತ್ವಿಕ ಮನಸ್ಸುಗಳನ್ನು ಒಂದಾಗಿಸುವ ಕೆಲಸ ನಡೆಯಬೇಕಿದೆ’ ಎಂದರು. ಹೋರಾಟಗಾರ್ತಿ ಯಮುನಾ ಗಾಂವಕರ ಮಾತನಾಡಿ `ಗಾಂಧೀಜಿ-ಅAಬೇಡ್ಕರ ಅವರ ನಡುವಿನ ಅವತ್ತಿನ ಚರ್ಚೆಯನ್ನು ಇದೀಗ ದ್ವೇಷದ ಚರ್ಚೆಯನ್ನಾಗಿ ಬಳಸಿಕೊಳ್ಳುತ್ತಿರುವುದು ಸರಿಯಲ್ಲ’ ಎಂದರು.
ಸಾಹಿತಿ ಆರ್ ಜಿ ಗುಂದಿ, ಜೆ ಪ್ರೇಮಾನಂದ, ರೈತ ಸಂಘದ ಗೌರೀಶ ನಾಯಕ, ಜಗದೀಶ ಜಿ ನಾಯಕ ಹೊಸ್ಕೇರಿ, ಸಂತೋಷ ನಾಯ್ಕ, ಉದಯ ನಾಯ್ಕ ಹೊಸಗದ್ದೆ, ಗೀತಾ ಗೌಡ ಶಿರೂರ, ಪೂರ್ಣಿಮಾ ನಾಯ್ಕ, ಹಟ್ಟಿಕೇರಿ, ವಿನೋದ ನಾಯ್ಕ ಹಾರವಾಡ, ಎಚ್ ಬಿ ನಾಯಕ, ರಾಜಗೋಪಾಲ್ ಶೇಟ್, ಶ್ಯಾಮಲಾ ನಾಯ್ಕ ಇತರರು ಕಾರ್ಯಕ್ರಮದಲ್ಲಿದ್ದು ಗಾಂಧೀಜಿ ಸ್ಮರಣೆ ಮಾಡಿದರು.