`ಮಕ್ಕಳ ಓದು ಹಾಗೂ ಕೌಶಲ್ಯ ಸರ್ಕಾರಿ ನೌಕರಿಗೆ ಮಾತ್ರ ಸೀಮಿತವಾಗಬಾರದು. ವೈಜ್ಞಾನಿಕ ತಳಹದಿಯಲ್ಲಿ ರೈತ, ಸೈನಿಕ ಸೇರಿ ವಿವಿಧ ವೃತ್ತಿ ಆಯ್ಕೆಗೂ ಅನುಕೂಲವಾಗುವ ಶಿಕ್ಷಣ ಪ್ರತಿಯೊಬ್ಬರಿಗೂ ದೊರೆಯಬೇಕು’ ಎಂದು ಕಾರವಾರದ ನ್ಯಾಯವಾದಿ ನಾಗರಾಜ ನಾಯಕ ಅವರು ಹೇಳಿದ್ದಾರೆ.
ಅಮದಳ್ಳಿಯ ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿದ ಅವರು `ಸಾಮಾಜಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ವಿದ್ಯಾಬ್ಯಾಸ ಈಗಿನ ಅಗತ್ಯಗಳಲ್ಲಿ ಒಂದು. ಪರಿಸರ ಸಂರಕ್ಷಣೆ, ಹೊಸ ಸಂಶೋಧನೆ, ಸಮರ್ಥ ನಾಯಕತ್ವ ಗುಣ ಬೆಳೆಸುವ ಉತ್ತಮ ಶಿಕ್ಷಣ ಶಾಲೆಯಲ್ಲಿ ದೊರೆಯಬೇಕು. ದೂರ ದೃಷ್ಟಿಯುಳ್ಳ ದೇಶ ಕಟ್ಟುವ ವ್ಯಕ್ತಿಯ ನಿರ್ಮಾಣ ಬಾಲ್ಯದಲ್ಲಿಯೇ ಕಲಿಸಬೇಕು’ ಎಂದು ಕರೆ ನೀಡಿದರು.
`ಎಜುಕೇರ್ ಆಂಗ್ಲ ಮಾಧ್ಯಮ ಶಾಲೆಯು ಗ್ರಾಮೀಣ ಭಾಗದಲ್ಲಿ ವಿಶೇಷ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ. ಅದರ ಪರಿಣಾಮ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಹೊರಹೊಮ್ಮುತ್ತಿದ್ದಾರೆ’ ಎಂದರು. ಈ ವೇದಿಕೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. ಮಹಾದೇವ ದೇವಸ್ಥಾನದ ಪ್ರಧಾನ ಅರ್ಚಕ ಪಾಂಡುರAಗ ಜೋಷಿ, ಊರಿನ ಹಿರಿಯರಾದ ದುರ್ಗಾ ನಾಯ್ಕ, ಮಂಜುನಾಥ ಮಧುಗೆಕರ್, ಶಿವಮೊಗ್ಗ ಜಿಲ್ಲೆಯ ರೈತ ಸಂಘದ ಹೋರಾಟಗಾರ ಪಿ ಶೇಖರಪ್ಪ, ಪ್ರಾಚಾರ್ಯೆ ನಾಗರತ್ನ ಜೈರಂಗನಾಥ, ಉಪಪ್ರಾಚಾರ್ಯ ವಿನೋದ ಅಲ್ಮೆಡ, ಶಿಕ್ಷಕಿ ಟೀನಾ ಅಸ್ನೋಟಿ ವೇದಿಕೆ ಕಾರ್ಯಕ್ರಮ ನಿರ್ವಹಿಸಿದರು.