ವಿವಿಧ ಯೋಜನೆಗಳಿಗಾಗಿ ಉತ್ತರ ಕನ್ನಡ ಜಿಲ್ಲೆಯ 64 ಸಾವಿರ ಹೆಕ್ಟೇರ್ ಅರಣ್ಯ ಭೂಮಿಯನ್ನು ಸರ್ಕಾರ ಬಳಕೆ ಮಾಡಿಕೊಂಡಿದ್ದು, ಸದ್ಯ ನದಿ ಜೋಡಣೆಗಾಗಿ ಇನ್ನಷ್ಟು ಭೂಮಿ ಕಬಳಿಕೆ ಮಾಡಲು ಮುಂದಾಗಿದೆ. ಆದರೆ, ಅನಾಧಿಕಾಲದಿಂದಲೂ ಇಲ್ಲಿಯೇ ವಾಸವಾಗಿರುವ 80 ಸಾವಿರ ಅತಿಕ್ರಮಣದಾರರಿಗೆ ಮಾತ್ರ ಸರ್ಕಾರ ಅವರವರ ಭೂಮಿಗೆ ಹಕ್ಕು ಪತ್ರ ನೀಡುತ್ತಿಲ್ಲ!
ಕಳೆದ 70 ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ 64,365 ಹೇಕ್ಟೇರ್ ಅರಣ್ಯ ಪ್ರದೇಶ ವಿವಿಧ ಯೋಜನೆಗಳಿಗೆ ಬಲಿಯಾಗಿದೆ. ಮಾಹಿತಿಗಳ ಪ್ರಕಾರ ಮುಂಡಗೋಡದಲ್ಲಿ 1600 ಹೆಕ್ಟರ್ ಭೂಮಿಯನ್ನ ಟೀಬೇಟಿಯನ್ ಕಾಲೋನಿಗೆ ನೀಡಲಾಗಿದೆ. ಇದರೊಂದಿಗೆ ಕಾಳಿ ಹೈಡ್ರೋ ಪ್ರೋಜೆಕ್ಟ್’ಗೆ 15205.365 ಹೆಕ್ಟೇರ್, ಶರವಾತಿ ಟೇಲರೆಸ್ 700 ಹೆಕ್ಟೇರ್, ಕೈಗಾ ಅನುಸ್ಥಾವರಕ್ಕೆ 732ಹೆಕ್ಟೇರ್, ನೌಕಾನೆಲೆಗೆ 2259ಹೆಕ್ಟೇರ್, ಕೋಕಣ ರೈಲ್ವೇಗೆ 272.140ಹೆಕ್ಟೇರ್, ಹುಬ್ಬಳ್ಳಿ ಅಂಕೋಲ ರೈಲ್ವೇ ಯೋಜನೆಗೆ ಪರಿಸರ ಸೂಕ್ಷö್ಮ ಪ್ರದೇಶ ಹೊರತಾಗಿ 600ಹೆಕ್ಟೇರ್ ಭೂಮಿ ಕೊಡಲಾಗಿದೆ.
ಇದರೊಂದಿಗೆ ನಿಯೋಜಿತ ಶರಾವತಿ ಪಂಪ್ ಸ್ಟೋರೆಜ್ ಯೋಜನೆಗೆ 193.34ಹೆಕ್ಟೇರ್, ಅಂಕೋಲಾ ಹುಬ್ಬಳ್ಳಿ ರಸ್ತೆ ಅಗಲೀಕರಕ್ಕೆ 49.431ಹೆಕ್ಟೇರ್, ಕಾಳಿ ಮತ್ತು ಕೈಗಾ ಪುನರ್ ವಸತಿ ಯೋಜನೆಗೆ 316.410ಹೆಕ್ಟೇರ್, ಕೈಗಾ 400 ಕೆಪಿಡಿಸಿ ಪರ್ಯಾಯ ವಿದ್ಯುತ್ ಪ್ರಸರಣಾ ಮಾರ್ಗ ನಿರ್ಮಾಣಕ್ಕೆ 330ಹೆಕ್ಟೇರ್, ನೌಕಾನೆಲೆ ಎರಡನೇ ಹಂತದ ವಿಸ್ತೀರ್ಣಕ್ಕೆ ಅಂದಾಜು 5684ಹೆಕ್ಟೇರ್, ಸಿವಿಲ್ ಏಪ್ ಪೋಟ್, ಬೇಡ್ತಿ ಎತ ನೀರಾವರಿ ಮುಂತಾದ ರಾಷ್ಟಿçÃಯ ಯೋಜನೆ ಮತ್ತು ಮೂಲ ಸೌಕರ್ಯಕ್ಕಾಗಿ ಸುಮಾರು 64365ಹೆಕ್ಟೇರ್ ಅರಣ್ಯ ಭೂಮಿಯ ಬಳಕೆ ನಡೆದಿದೆ. ವಿವಿಧ ಯೋಜನೆಗಳಿಗಾಗಿ ಇಷ್ಟು ಪ್ರಮಾಣದಲ್ಲಿ ಅರಣ್ಯ ಭೂಮಿ ಬಳಕೆಯಾಗಿರುವಾಗ ಜಿಲ್ಲೆಯ 80 ಸಾವಿರ ಅರಣ್ಯವಾಸಿ ಕುಟುಂಬಗಳಿಗೆ 19 ಸಾವಿರ ಹೆಕ್ಟೇರ್ ಭೂಮಿ ಮಂಜೂರಿ ನೀಡಲು ಸಮಸ್ಯೆ ಏನು? ಎಂಬ ಪ್ರಶ್ನೆ ಉದ್ಬವಿಸಿದೆ.
1973ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಶೇ 72.26ರಷ್ಟು ಅರಣ್ಯ ಪ್ರಮಾಣವಿದ್ದು, ಸರ್ಕಾರದ ತಪ್ಪು ನೀತಿಯಿಂದಾಗಿ 2013ರಲ್ಲಿ ಶೇ 59.70ರಷ್ಟು ಮಾತ್ರ ಅರಣ್ಯ ಉಳಿದಿದೆ. ಹೀಗಾಗಿ `ಯೋಜನೆಗಳಿಗೆ ಭೂಮಿ ಕೊಟ್ಟಿದ್ದು ಸಾಕು. ಇನ್ಮುಂದೆ ಜೀವನಕ್ಕಾಗಿ ಭೂಮಿ ಕೊಡಿ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಅವರು ಆಗ್ರಹಿಸಿದ್ದಾರೆ. ರಾಷ್ಟಿçÃಯ ಯೋಜನೆಗಳಿಗೆ ದಾರಾಳವಾಗಿ ಅರಣ್ಯ ಭೂಮಿ ನೀಡುವ ಸರ್ಕಾರ ಜೀವನಕ್ಕಾಗಿ ಭೂÄ ನೀಡದಿರುವುದು ಸರಿಯಲ್ಲ. ಪರಿಸರ ವಿರೋಧ ಯೋಜನೆಗೆ ಜನರು ಪ್ರತಿಭಟಿಸಿದರೂ ಅರಣ್ಯ ಭೂಮಿ ನೀಡುವುದು ಖಂಡನಾರ್ಹ’ ಎಂದವರು ಹೇಳಿದ್ದಾರೆ.